ಈ ಸಂಬಂಧ ಯುಜಿಸಿ ಕಾರ್ಯದರ್ಶಿ ಪ್ರೊ. ರಿತೇಶ್ ಜೈನ್ ಅವರು ಬರೆದಿರುವ ಪತ್ರದಲ್ಲಿ, ‘ಭಾರತ ಸರ್ಕಾರವು ಹಲವಾರು ಕ್ರಮಗಳ ಮೂಲಕ ವಿಶ್ವದಲ್ಲೇ ಭಾರತವನ್ನು ಬೌದ್ಧ ಧರ್ಮದ ಪ್ರಮುಖ ಕೇಂದ್ರವನ್ನಾಗಿಸಲು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಮುಂದಾಗಿದೆ. ಆದ್ದರಿಂದ ಮಾನವ ಸಂಪನ್ಮೂಲ ಸಚಿವಾಲಯವು ವಿವಿಧ ವಿಶ್ವವಿದ್ಯಾಲಗಳಲ್ಲಿರುವ ಬುದ್ಧ ಹಾಗೂ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಕೋರ್ಸುಗಳು, ನಡೆದಿರುವ ವಿಚಾರ ಸಂಕಿರಣಗಳು, ಪಾಲಿ ಭಾಷೆಯ ಅಧ್ಯಯನ ಸೇರಿದಂತೆ ಈ ನಿಟ್ಟಿನಲ್ಲಿ ನಡೆಸಿದ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.