ಜೇವರ್ಗಿಯಲ್ಲಿ ಪಾಳು ಬಿದ್ದಿರುವ ಉದ್ಯಾನ
ಚಿಂಚೋಳಿ ತಾಲ್ಲೂಕಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗ ಪಾಳು ಬಿದ್ದಿರುವುದು
ಆಳಂದದ ಸಂಗಾ ಕಾಲೊನಿಯಲ್ಲಿನ ಉದ್ಯಾನವನ್ನು ಪುರಸಭೆ ವಾಹನಗಳ ನಿಲುಗಡೆ ಸ್ಥಳವಾಗಿ ಬಳಸುತ್ತಿರುವುದು
ಕಲಬುರಗಿಯ ಗೋದುತಾಯಿ ನಗರ ಉದ್ಯಾನದಲ್ಲಿ ಮಕ್ಕಳ ಆಟಿಕೆ ಸಾಮಗ್ರಿ ಮುರಿದು ಬಿದ್ದಿರುವುದು
ಅಫಜಲಪುರದ ವಾರ್ಡ್ ನಂ.15ರಲ್ಲಿ ನಿರ್ಮಾಣವಾದ ಉದ್ಯಾನ

ಉದ್ಯಾನಗಳ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರವೂ ಬೇಕು. ನಗರ ಅರಣ್ಯೀಕರಣ ಯೋಜನೆಗೆ ₹1 ಕೋಟಿ ಅಮೃತ ಯೋಜನೆಯಡಿ ₹ 35 ಲಕ್ಷದಲ್ಲಿ 5 ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ
ಆರ್.ಪಿ.ಜಾಧವ್ ಉಪ ಆಯುಕ್ತ (ಅಭಿವೃದ್ಧಿ) ಮಹಾನಗರ ಪಾಲಿಕೆ
ಚಿತ್ತಾಪುರದಲ್ಲಿ ವೈಷ್ಣವಿ ಮಾರ್ಟ್ ಎದುರುಗಡೆಯ ಉದ್ಯಾನ ಅಭಿವೃದ್ಧಿಗಾಗಿ ₹15 ಲಕ್ಷ ಅನುದಾನ ಮೀಸಲಿಡಲಾಗಿದೆ. ಟೆಂಡರ್ ಕರೆದಿದ್ದು ಕಾಮಗಾರಿ ಪ್ರಾರಂಭಿಸಬೇಕಾಗಿದೆ
ಮನೋಜಕುಮಾರ ಗುರಿಕಾರ ಚಿತ್ತಾಪುರ ಪುರಸಭೆ ಮುಖ್ಯಾಧಿಕಾರಿ
ಪುರಸಭೆ ಅಧಿಕಾರಿಗಳು ಜನಪ್ರತಿನಿಧಿಗಳು ಇಲ್ಲಿವರೆಗೆ ಪಟ್ಟಣದಲ್ಲಿನ ಉದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಗೋಜಿಗೆ ಹೋಗಿಲ್ಲ. ಗಿಡ ನೆಡುವುದಿರಲಿ ನಿಷ್ಠ ಸ್ವಚ್ಛತೆ ಕೈಗೊಳ್ಳುವ ಕಾಳಜಿಯೂ ಪುರಸಭೆಗೆ ಇಲ್ಲ
ಪ್ರಕಾಶ ಕಾಳೆ ಆಳಂದ ನಿವಾಸಿ
ಪುರಸಭೆಯ ವ್ಯಾಪ್ತಿಯ ನಾಲ್ಕು ಉದ್ಯಾನಗಳನ್ನು ಸುಧಾರಣೆ ಮಾಡಲಾಗಿದೆ. ಇನ್ನುಳಿದ ಉದ್ಯಾನಗಳ ದುರಸ್ತಿ ಕಾರ್ಯ ಮಾಡಲಾಗುವುದು. ಸಾರ್ವಜನಿಕರೂ ಈ ಬಗ್ಗೆ ಕಾಳಜಿ ವಹಿಸಬೇಕು
ವಿಜಯ ಮಹಾಂತೇಶ ಹೂಗಾರ ಅಫಜಲಪುರ ಪುರಸಭೆ ಮುಖ್ಯಾಧಿಕಾರಿ
ನಮ್ಮ ಗೋದುತಾಯಿ ಉದ್ಯಾನವನದಲ್ಲಿ ಆಟಿಗೆ ಸಾಮಾನುಗಳೆಲ್ಲಾ ಮುರಿದಿವೆ. ನಾವು ಆಟ ಆಡಬೇಕೆಂದರೆ ಮನೆಯಿಂದ ಸಾಮಗ್ರಿ ತರಬೇಕು
ಈಶ್ವರ ವಿದ್ಯಾರ್ಥಿ