‘ಹಿಂದೆ ಕೊಳವೆಬಾವಿ ದುರಸ್ತಿಗೆ ಕಳಪೆ ಮಟ್ಟದ ಸಾಮಗ್ರಿಗಳನ್ನು ಬಳಸಲಾಗಿದೆ. ದುರಸ್ತಿಯಾದ ತಿಂಗಳಲ್ಲೇ ಕೊಳವೆ ಬಾವಿ ಮತ್ತೆ ಕೆಟ್ಟುನಿಂತಿದೆ. ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕೂಡಲೇ ದುರಸ್ತಿಗೊಳಿಸಿ, ಜನರಿಗೆ ನೀರಿನ ಸಮಸ್ಯೆ ನೀಗಿಸಬೇಕು ಎಂದು ವಾರ್ಡ್ನ ನಿವಾಸಿಗಳಾದ ಚಂದುಸಿಂಗ ರಜಪುತ, ಬಂಡು ಬೊಮ್ಮಾಣಿ, ಗುರುನಂಜಯ್ಯ ಹಿರೇಮಠ, ಶರಣು ಬಿಜನಳ್ಳಿ, ವಿಜಯಕುಮಾರ ಸುಂಠಾಣ, ವೀರಯ್ಯ ಮಠಪತಿ, ಹಣಮಂತ ಖಾಜಾಪುರ, ಗದಗಯ್ಯ ಹಣಕುಣಿ, ಚಂದ್ರಕಾಂತ ಜಮಾದಾರ, ಕಲ್ಯಾಣಿ ಕುಂಬಾರ ಅನೇಕರು ಆಗ್ರಹಿಸಿದ್ದಾರೆ.