<p><strong>ವಾಡಿ:</strong> ಚಿತ್ತಾಪುರ ತಾಲ್ಲೂಕಿನ ದೇವಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರೊಬ್ಬರು ಮಕ್ಕಳ ದಿನಾಚರಣೆಯ ಪ್ರಯುಕ್ತ ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಬಟ್ಟೆ ಹಾಗೂ ಕಲಿಕಾ ಪರಿಕರ ವಿತರಿಸಿ ಮಕ್ಕಳ ದಿನಾಚರಣೆಗೆ ಮುನ್ನುಡಿ ಬರೆದಿದ್ದಾರೆ.</p>.<p>ಕಮರವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಾಪುರ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ವಿಜಯಕುಮಾರ ಹರಿಭಟ್ಟ ಅವರು 26 ಮಕ್ಕಳಿಗೆ ಟೀ ಶರ್ಟ್ ಹಾಗೂ ಪ್ಯಾಂಟ್ ಜತೆಗೆ ಸುಮಾರು ₹3 ಸಾವಿರ ವೆಚ್ಚದ ಕಲಿಕಾ ಸಾಮಾಗ್ರಿ ನೀಡಿದರು.</p>.<div><blockquote>ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು, ಮಕ್ಕಳು ಸಮವಸ್ತ್ರ ಧರಿಸಬೇಕು ಎನ್ನುವ ಉದ್ದೇಶದಿಂದ ಅಲ್ಪ ಹಣ ವ್ಯಯಿಸಿ ಈ ಕಾರ್ಯ ಮಾಡಿದ್ದು ವಾರದಲ್ಲಿ ಎರಡು ದಿನ ಈ ಸಮವಸ್ತ್ರ ಹಾಕಿಕೊಂಡು ಬರಲು ತಿಳಿಸಿದ್ದೇನೆ ಎನ್ನುತ್ತಾರೆ. </blockquote><span class="attribution"> ಮುಖ್ಯಶಿಕ್ಷಕ ವಿಜಯಕುಮಾರ.</span></div>.<p>ಮುಖ್ಯಶಿಕ್ಷಕರ ಕಾರ್ಯಕ್ಕೆ ಸಮೂಹ ಸಂಪನ್ಮೂಲ ವ್ಯಕ್ತಿ ಹೀರಾಬಾಯಿ ಸಾಗನೂರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.</p>.<p>ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಕುಮಾರ ರಾಠೋಡ, ಗ್ರಾಮ ಪಂಚಾಯಿತಿ ಸದಸ್ಯ ಡಾಕು ರಾಠೋಡ, ರಮೇಶ ರಾಠೋಡ, ಹೀರಾ ಮಹಾರಾಜ್ ಅತಿಥಿ ಶಿಕ್ಷಕ ಬಸವರಾಜ ಪಾಟೀಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಡಿ:</strong> ಚಿತ್ತಾಪುರ ತಾಲ್ಲೂಕಿನ ದೇವಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರೊಬ್ಬರು ಮಕ್ಕಳ ದಿನಾಚರಣೆಯ ಪ್ರಯುಕ್ತ ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಬಟ್ಟೆ ಹಾಗೂ ಕಲಿಕಾ ಪರಿಕರ ವಿತರಿಸಿ ಮಕ್ಕಳ ದಿನಾಚರಣೆಗೆ ಮುನ್ನುಡಿ ಬರೆದಿದ್ದಾರೆ.</p>.<p>ಕಮರವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಾಪುರ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ವಿಜಯಕುಮಾರ ಹರಿಭಟ್ಟ ಅವರು 26 ಮಕ್ಕಳಿಗೆ ಟೀ ಶರ್ಟ್ ಹಾಗೂ ಪ್ಯಾಂಟ್ ಜತೆಗೆ ಸುಮಾರು ₹3 ಸಾವಿರ ವೆಚ್ಚದ ಕಲಿಕಾ ಸಾಮಾಗ್ರಿ ನೀಡಿದರು.</p>.<div><blockquote>ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು, ಮಕ್ಕಳು ಸಮವಸ್ತ್ರ ಧರಿಸಬೇಕು ಎನ್ನುವ ಉದ್ದೇಶದಿಂದ ಅಲ್ಪ ಹಣ ವ್ಯಯಿಸಿ ಈ ಕಾರ್ಯ ಮಾಡಿದ್ದು ವಾರದಲ್ಲಿ ಎರಡು ದಿನ ಈ ಸಮವಸ್ತ್ರ ಹಾಕಿಕೊಂಡು ಬರಲು ತಿಳಿಸಿದ್ದೇನೆ ಎನ್ನುತ್ತಾರೆ. </blockquote><span class="attribution"> ಮುಖ್ಯಶಿಕ್ಷಕ ವಿಜಯಕುಮಾರ.</span></div>.<p>ಮುಖ್ಯಶಿಕ್ಷಕರ ಕಾರ್ಯಕ್ಕೆ ಸಮೂಹ ಸಂಪನ್ಮೂಲ ವ್ಯಕ್ತಿ ಹೀರಾಬಾಯಿ ಸಾಗನೂರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.</p>.<p>ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಕುಮಾರ ರಾಠೋಡ, ಗ್ರಾಮ ಪಂಚಾಯಿತಿ ಸದಸ್ಯ ಡಾಕು ರಾಠೋಡ, ರಮೇಶ ರಾಠೋಡ, ಹೀರಾ ಮಹಾರಾಜ್ ಅತಿಥಿ ಶಿಕ್ಷಕ ಬಸವರಾಜ ಪಾಟೀಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>