<p><strong>ಕಲಬುರಗಿ: ‘</strong>ಮಣ್ಣು ನಂಬಿದರೆ ಹೊನ್ನು’ ಎಂಬಂತೆ ಜಮೀನಿನಲ್ಲಿ ಕಷ್ಟಪಟ್ಟು ದುಡಿದರೆ ಕಷ್ಟ ಹತ್ತಿರ ಸುಳಿಯುವುದಿಲ್ಲ ಎಂಬುದಕ್ಕೆ ಪ್ರಗತಿ ಪರ ರೈತ ಮುಹಮ್ಮದ್ ಶಕೀಲ್ ಸಾಕ್ಷಿಯಾಗಿದ್ದಾರೆ.</p>.<p>ತಾಲ್ಲೂಕಿನ ಫರಹತಾಬಾದ್ ಗ್ರಾಮದಲ್ಲಿ ಸುಮಾರು 15 ಎಕರೆ ಜಮೀನು ಹೊಂದಿರುವ ರೈತ ಮುಹಮ್ಮದ್ ಶಕೀಲ್ ಅವರು ಸಮಗ್ರ ಕೃಷಿ ಬೇಸಾಯ ಅಳವಡಿಸಿಕೊಂಡಿದ್ದಾರೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಮಲ್ಚಿಂಗ್ ವಿಧಾನದ ಮೂಲಕ ಕಲ್ಲಂಗಡಿ ಬೆಳೆದು ಉತ್ತಮ ಆದಾಯ ಪಡೆದುಕೊಂಡಿದ್ದಾರೆ.</p>.<p>ಕಲ್ಲಂಗಡಿ ನಾಟಿ ಮಾಡಲು ಎರಡು ಎಕರೆ ಹೊಲಕ್ಕೆ ಸಂಪೂರ್ಣ ಪ್ಲಾಸ್ಟಿಕ್ ಹೊದಿಕೆ (ಮಲ್ಚಿಂಗ್) ಮಾಡಲಾಗಿದೆ. ಸರ್ಕಾರದ ಸಹಾಯಧನ ಪಡೆದು ಸಂಪೂರ್ಣ ಹನಿ ನೀರಾವರಿ ಅಳವಡಿಸಿಕೊಂಡಿದ್ದು, ಇದರಿಂದ ನೀರಿನ ಸದ್ಬಳಕೆ, ಕಳೆ ನಿಯಂತ್ರಣ ಸಾಧ್ಯವಾಗಿದೆ.</p>.<p>ಸಸಿಯಿಂದ ಸಸಿಗೆ ನಿಯಮಿತವಾಗಿ 1.5 ಅಡಿ ಅಂತರ ಕಾಯ್ದುಕೊಂಡು ಪ್ಲಾಸ್ಟಿಕ್ ಮೇಲೆ ರಂಧ್ರಗಳನ್ನು ಕೊರೆದು ಅದರಲ್ಲಿ ದಕ್ಷಿಣ ಕೊರಿಯಾ ಮೂಲದ ನಾಂಗ್ ವೂ ಸೀಡ್ ಇಂಡಿಯಾ ಪ್ರೈ.ಲಿಮಿಟೆಡ್ ಕಂಪನಿಯ ಕಲ್ಲಂಗಡಿಯ ಸಸಿಗಳನ್ನು ₹ 2ಕ್ಕೆ ಒಂದರಂತೆ ತಂದು ಜನವರಿ 2ರಂದು ನಾಟಿ ಮಾಡಲಾಗಿದೆ. ಸಸಿಗಳಿಗೆ ಬೇಕಾಗುವ ರಸಗೊಬ್ಬರವನ್ನು ಆ ರಂಧ್ರಗಳ ಮೂಲಕವೇ ನೀಡಲಾಗಿದೆ. ಸುಮಾರು 58 ದಿನಗಳಲ್ಲಿ ಫಸಲು ಕೈಗೆ ಬಂದಿದೆ.</p>.<p>‘ಕೆಲವು ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಿತ್ತು. ಹೆಚ್ಚಿನ ಪ್ರಮಾಣದಲ್ಲಿ ಕಲ್ಲಂಗಡಿ ಮಾರುಕಟ್ಟೆಗೆ ಬಂದಿರುವುದಿಂದ ಬೆಲೆ ಸ್ವಲ್ಪ ಕಡಿಮೆಯಾಗಿದೆ. ಸದ್ಯ ಪ್ರತಿ ಕೆಜಿಗೆ ಗುಣಮಟ್ಟದ ಆಧಾರದ ಮೇಲೆ ಸುಮಾರು ₹ 12ರಿಂದ ₹ 15 ರವರೆಗೆ ಕಲ್ಲಂಗಡಿ ಮಾರಾಟವಾಗುತ್ತಿದೆ’ ಎನ್ನುತ್ತಾರೆ ರೈತ ಮುಹಮ್ಮದ್ ಶಕೀಲ್.</p>.<p>‘ಕಲ್ಲಂಗಡಿ ಸಸಿ, ಭೂಮಿ ಹದ ಮಾಡುವುದು, ಬಿತ್ತನೆ, ರಸಗೊಬ್ಬರ, ಔಷಧ ಸಿಂಪಡಣೆ ಸೇರಿದಂತೆ ಇಲ್ಲಿಯವರಗೆ ₹ 2 ಲಕ್ಷದಷ್ಟು ಖರ್ಚಾಗಿದೆ. ಎರಡು ಎಕರೆಯಲ್ಲಿ ಅಂದಾಜು 60 ರಿಂದ 65 ಟನ್ ಇಳುವರಿ ಬರುವ ನಿರೀಕ್ಷೆ ಇದೆ. ಅಂದಾಜು ₹ 6.50 ಲಕ್ಷದಿಂದ ₹ 7.50 ಲಕ್ಷ ಆದಾಯ ಬರಲಿದೆ. ವೆಚ್ಚ ಹೋಗಿ ₹ 5.50 ಲಕ್ಷ ಲಾಭ ಬರಲಿದೆ’ ಎಂದು ಮುಹಮ್ಮದ್ ಶಕೀಲ್.</p>.<p><span class="bold"><strong>ಸಮಗ್ರ ಕೃಷಿ:</strong></span> ಮುಹಮ್ಮದ್ ಶಕೀಲ್ ಅವರ ಕುಟುಂಬಕ್ಕೆ 15 ಎಕರೆ ಜಮೀನಿದೆ. ಸಹೋದರರು ಬೇರೆ ಕೆಲಸ ಮಾಡುತ್ತಿದ್ದು, ಇವರೇ ಕೃಷಿ ಮಾಡುತ್ತಿದ್ದಾರೆ. ಸದ್ಯ ಜಮೀನಿನಲ್ಲಿ 3.5 ಎಕರೆ ಬಾಳೆ, 5 ಎಕರೆ ಕಬ್ಬು, ಕಲ್ಲಂಗಡಿ, ತೊಗರಿ ಸೇರಿ ಸಮಗ್ರ ಕೃಷಿಯನ್ನು ಮಾಡಿದ್ದಾರೆ. ಕಬ್ಬು ಸಹ ಕಟಾವು ಮಾಡಿದ್ದು, 220 ಟನ್ ಇಳುವರಿ ಬಂದಿದೆ. ಬಾಳೆ ಬೆಳೆಯು ತಿಂಗಳಲ್ಲಿ ಕೈಗೆ ಬರಲಿದೆ. ಅದರಲ್ಲಿ ಉತ್ತಮ ಆದಾಯ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಅವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ: ‘</strong>ಮಣ್ಣು ನಂಬಿದರೆ ಹೊನ್ನು’ ಎಂಬಂತೆ ಜಮೀನಿನಲ್ಲಿ ಕಷ್ಟಪಟ್ಟು ದುಡಿದರೆ ಕಷ್ಟ ಹತ್ತಿರ ಸುಳಿಯುವುದಿಲ್ಲ ಎಂಬುದಕ್ಕೆ ಪ್ರಗತಿ ಪರ ರೈತ ಮುಹಮ್ಮದ್ ಶಕೀಲ್ ಸಾಕ್ಷಿಯಾಗಿದ್ದಾರೆ.</p>.<p>ತಾಲ್ಲೂಕಿನ ಫರಹತಾಬಾದ್ ಗ್ರಾಮದಲ್ಲಿ ಸುಮಾರು 15 ಎಕರೆ ಜಮೀನು ಹೊಂದಿರುವ ರೈತ ಮುಹಮ್ಮದ್ ಶಕೀಲ್ ಅವರು ಸಮಗ್ರ ಕೃಷಿ ಬೇಸಾಯ ಅಳವಡಿಸಿಕೊಂಡಿದ್ದಾರೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಮಲ್ಚಿಂಗ್ ವಿಧಾನದ ಮೂಲಕ ಕಲ್ಲಂಗಡಿ ಬೆಳೆದು ಉತ್ತಮ ಆದಾಯ ಪಡೆದುಕೊಂಡಿದ್ದಾರೆ.</p>.<p>ಕಲ್ಲಂಗಡಿ ನಾಟಿ ಮಾಡಲು ಎರಡು ಎಕರೆ ಹೊಲಕ್ಕೆ ಸಂಪೂರ್ಣ ಪ್ಲಾಸ್ಟಿಕ್ ಹೊದಿಕೆ (ಮಲ್ಚಿಂಗ್) ಮಾಡಲಾಗಿದೆ. ಸರ್ಕಾರದ ಸಹಾಯಧನ ಪಡೆದು ಸಂಪೂರ್ಣ ಹನಿ ನೀರಾವರಿ ಅಳವಡಿಸಿಕೊಂಡಿದ್ದು, ಇದರಿಂದ ನೀರಿನ ಸದ್ಬಳಕೆ, ಕಳೆ ನಿಯಂತ್ರಣ ಸಾಧ್ಯವಾಗಿದೆ.</p>.<p>ಸಸಿಯಿಂದ ಸಸಿಗೆ ನಿಯಮಿತವಾಗಿ 1.5 ಅಡಿ ಅಂತರ ಕಾಯ್ದುಕೊಂಡು ಪ್ಲಾಸ್ಟಿಕ್ ಮೇಲೆ ರಂಧ್ರಗಳನ್ನು ಕೊರೆದು ಅದರಲ್ಲಿ ದಕ್ಷಿಣ ಕೊರಿಯಾ ಮೂಲದ ನಾಂಗ್ ವೂ ಸೀಡ್ ಇಂಡಿಯಾ ಪ್ರೈ.ಲಿಮಿಟೆಡ್ ಕಂಪನಿಯ ಕಲ್ಲಂಗಡಿಯ ಸಸಿಗಳನ್ನು ₹ 2ಕ್ಕೆ ಒಂದರಂತೆ ತಂದು ಜನವರಿ 2ರಂದು ನಾಟಿ ಮಾಡಲಾಗಿದೆ. ಸಸಿಗಳಿಗೆ ಬೇಕಾಗುವ ರಸಗೊಬ್ಬರವನ್ನು ಆ ರಂಧ್ರಗಳ ಮೂಲಕವೇ ನೀಡಲಾಗಿದೆ. ಸುಮಾರು 58 ದಿನಗಳಲ್ಲಿ ಫಸಲು ಕೈಗೆ ಬಂದಿದೆ.</p>.<p>‘ಕೆಲವು ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಿತ್ತು. ಹೆಚ್ಚಿನ ಪ್ರಮಾಣದಲ್ಲಿ ಕಲ್ಲಂಗಡಿ ಮಾರುಕಟ್ಟೆಗೆ ಬಂದಿರುವುದಿಂದ ಬೆಲೆ ಸ್ವಲ್ಪ ಕಡಿಮೆಯಾಗಿದೆ. ಸದ್ಯ ಪ್ರತಿ ಕೆಜಿಗೆ ಗುಣಮಟ್ಟದ ಆಧಾರದ ಮೇಲೆ ಸುಮಾರು ₹ 12ರಿಂದ ₹ 15 ರವರೆಗೆ ಕಲ್ಲಂಗಡಿ ಮಾರಾಟವಾಗುತ್ತಿದೆ’ ಎನ್ನುತ್ತಾರೆ ರೈತ ಮುಹಮ್ಮದ್ ಶಕೀಲ್.</p>.<p>‘ಕಲ್ಲಂಗಡಿ ಸಸಿ, ಭೂಮಿ ಹದ ಮಾಡುವುದು, ಬಿತ್ತನೆ, ರಸಗೊಬ್ಬರ, ಔಷಧ ಸಿಂಪಡಣೆ ಸೇರಿದಂತೆ ಇಲ್ಲಿಯವರಗೆ ₹ 2 ಲಕ್ಷದಷ್ಟು ಖರ್ಚಾಗಿದೆ. ಎರಡು ಎಕರೆಯಲ್ಲಿ ಅಂದಾಜು 60 ರಿಂದ 65 ಟನ್ ಇಳುವರಿ ಬರುವ ನಿರೀಕ್ಷೆ ಇದೆ. ಅಂದಾಜು ₹ 6.50 ಲಕ್ಷದಿಂದ ₹ 7.50 ಲಕ್ಷ ಆದಾಯ ಬರಲಿದೆ. ವೆಚ್ಚ ಹೋಗಿ ₹ 5.50 ಲಕ್ಷ ಲಾಭ ಬರಲಿದೆ’ ಎಂದು ಮುಹಮ್ಮದ್ ಶಕೀಲ್.</p>.<p><span class="bold"><strong>ಸಮಗ್ರ ಕೃಷಿ:</strong></span> ಮುಹಮ್ಮದ್ ಶಕೀಲ್ ಅವರ ಕುಟುಂಬಕ್ಕೆ 15 ಎಕರೆ ಜಮೀನಿದೆ. ಸಹೋದರರು ಬೇರೆ ಕೆಲಸ ಮಾಡುತ್ತಿದ್ದು, ಇವರೇ ಕೃಷಿ ಮಾಡುತ್ತಿದ್ದಾರೆ. ಸದ್ಯ ಜಮೀನಿನಲ್ಲಿ 3.5 ಎಕರೆ ಬಾಳೆ, 5 ಎಕರೆ ಕಬ್ಬು, ಕಲ್ಲಂಗಡಿ, ತೊಗರಿ ಸೇರಿ ಸಮಗ್ರ ಕೃಷಿಯನ್ನು ಮಾಡಿದ್ದಾರೆ. ಕಬ್ಬು ಸಹ ಕಟಾವು ಮಾಡಿದ್ದು, 220 ಟನ್ ಇಳುವರಿ ಬಂದಿದೆ. ಬಾಳೆ ಬೆಳೆಯು ತಿಂಗಳಲ್ಲಿ ಕೈಗೆ ಬರಲಿದೆ. ಅದರಲ್ಲಿ ಉತ್ತಮ ಆದಾಯ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಅವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>