<p><strong>ಯಾದಗಿರಿ</strong>: ಫೋಟೊ ತೆಗೆಯುವ ನೆಪದಲ್ಲಿ ಗಂಡನನ್ನು ಕೃಷ್ಣಾ ನದಿಗೆ ತಳ್ಳಿದ್ದ ಆರೋಪ ಹೊತ್ತಿರುವ ಪತ್ನಿ ಅಪ್ರಾಪ್ತೆ. ಆಕೆಯ ಪತಿ, ಸಂಬಂಧಪಟ್ಟವರ ವಿರುದ್ಧ ಬಾಲ್ಯವಿವಾಹ, ಪೋಕ್ಸೊ ಅಡಿ ಪ್ರಕರಣ ದಾಖಲಿಸಲು ರಾಯಚೂರು ಡಿಸಿಪಿಒಗೆ ಪತ್ರ ಬರೆಯಲಾಗಿದೆ.</p>.<p>ರಾಯಚೂರು ತಾಲ್ಲೂಕಿನ ಗುರ್ಜಾಪುರ ಸಮೀಪದ ಕೃಷ್ಣಾ ನದಿಯ ಬ್ರಿಜ್ ಕಂ ಬ್ಯಾರೇಜ್ ಮೇಲೆ ಫೋಟೊ ತೆಗೆಸಿಕೊಳ್ಳುವಾಗ ಘಟನೆ ನಡೆದಿತ್ತು. ಶಕ್ತಿನಗರದ ತಾತಪ್ಪನನ್ನು ಆತನ ಪತ್ನಿ (ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ನಿವಾಸಿ) ತಳ್ಳಿದ್ದಾರೆ ಎಂಬ ಆರೋಪವಿತ್ತು. </p>.<p>‘ಸಂಬಂಧಿಸಿದ ವಿಡಿಯೊ ಆಧರಿಸಿ ಸಂತ್ರಸ್ತೆಯ ಶಾಲಾ ದಾಖಲಾತಿ ಮಾಹಿತಿ ಕಲೆ ಹಾಕಿದಾಗ ಪತ್ನಿ ಅಪ್ರಾಪ್ತೆ ಎಂದು ಗೊತ್ತಾಗಿದೆ. 2025ರ ಏಪ್ರಿಲ್ 14ರಲ್ಲಿ ಶಕ್ತಿನಗರದ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದು, ಆಗ ಆಕೆಗೆ 15 ವರ್ಷ 8 ತಿಂಗಳು’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ (ಡಿಸಿಪಿಒ) ನಿರ್ಮಲಾ ಸುರಪುರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಬಾಲಕಿ ವಿವಾಹ ನಡೆದ ಸ್ಥಳವು ರಾಯಚೂರು ಜಿಲ್ಲಾ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ, ರಾಯಚೂರು ಡಿಸಿಪಿಒಗೆ ಪತ್ರ ಬರೆಯಲಾಗಿದೆ. ಭಾನುವಾರ ಬಾಲಮಂದಿರಕ್ಕೆ ಬಾಲಕಿ ಕರೆತರಲಾಗಿದೆ. 21ರಂದು ಮಕ್ಕಳ ಕಲ್ಯಾಣ ಸಮಿತಿ ಸಭೆಗೆ ಹಾಜರುಪಡಿಸಿ ಕೌನ್ಸಿಲಿಂಗ್ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ಫೋಟೊ ತೆಗೆಯುವ ನೆಪದಲ್ಲಿ ಗಂಡನನ್ನು ಕೃಷ್ಣಾ ನದಿಗೆ ತಳ್ಳಿದ್ದ ಆರೋಪ ಹೊತ್ತಿರುವ ಪತ್ನಿ ಅಪ್ರಾಪ್ತೆ. ಆಕೆಯ ಪತಿ, ಸಂಬಂಧಪಟ್ಟವರ ವಿರುದ್ಧ ಬಾಲ್ಯವಿವಾಹ, ಪೋಕ್ಸೊ ಅಡಿ ಪ್ರಕರಣ ದಾಖಲಿಸಲು ರಾಯಚೂರು ಡಿಸಿಪಿಒಗೆ ಪತ್ರ ಬರೆಯಲಾಗಿದೆ.</p>.<p>ರಾಯಚೂರು ತಾಲ್ಲೂಕಿನ ಗುರ್ಜಾಪುರ ಸಮೀಪದ ಕೃಷ್ಣಾ ನದಿಯ ಬ್ರಿಜ್ ಕಂ ಬ್ಯಾರೇಜ್ ಮೇಲೆ ಫೋಟೊ ತೆಗೆಸಿಕೊಳ್ಳುವಾಗ ಘಟನೆ ನಡೆದಿತ್ತು. ಶಕ್ತಿನಗರದ ತಾತಪ್ಪನನ್ನು ಆತನ ಪತ್ನಿ (ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ನಿವಾಸಿ) ತಳ್ಳಿದ್ದಾರೆ ಎಂಬ ಆರೋಪವಿತ್ತು. </p>.<p>‘ಸಂಬಂಧಿಸಿದ ವಿಡಿಯೊ ಆಧರಿಸಿ ಸಂತ್ರಸ್ತೆಯ ಶಾಲಾ ದಾಖಲಾತಿ ಮಾಹಿತಿ ಕಲೆ ಹಾಕಿದಾಗ ಪತ್ನಿ ಅಪ್ರಾಪ್ತೆ ಎಂದು ಗೊತ್ತಾಗಿದೆ. 2025ರ ಏಪ್ರಿಲ್ 14ರಲ್ಲಿ ಶಕ್ತಿನಗರದ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದು, ಆಗ ಆಕೆಗೆ 15 ವರ್ಷ 8 ತಿಂಗಳು’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ (ಡಿಸಿಪಿಒ) ನಿರ್ಮಲಾ ಸುರಪುರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಬಾಲಕಿ ವಿವಾಹ ನಡೆದ ಸ್ಥಳವು ರಾಯಚೂರು ಜಿಲ್ಲಾ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ, ರಾಯಚೂರು ಡಿಸಿಪಿಒಗೆ ಪತ್ರ ಬರೆಯಲಾಗಿದೆ. ಭಾನುವಾರ ಬಾಲಮಂದಿರಕ್ಕೆ ಬಾಲಕಿ ಕರೆತರಲಾಗಿದೆ. 21ರಂದು ಮಕ್ಕಳ ಕಲ್ಯಾಣ ಸಮಿತಿ ಸಭೆಗೆ ಹಾಜರುಪಡಿಸಿ ಕೌನ್ಸಿಲಿಂಗ್ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>