ಹವಾಮಾನ ಮುನ್ಸೂಚನೆ, ಬೀಜೋಪಚಾರ ಆಂದೋಲನ, ಸಿರಿಧಾನ್ಯಗಳ ಮೌಲ್ಯವರ್ಧನೆ, ಮಣ್ಣಿನ ಆರೋಗ್ಯ ಕಾಪಾಡಲು ಮಣ್ಣು ಮತ್ತು ನೀರಿನ ಪರೀಕ್ಷೆಯ ಆರೋಗ್ಯ ಕಾರ್ಡ್, ವೈಜ್ಞಾನಿಕ ಹೈನುಗಾರಿಕೆ, ಕೊಟ್ಟಿಗೆ ಪದ್ಧತಿಯಲಿ ಆಡು ಸಾಕಾಣಿಕೆ, ಸಿರೋಹಿ ಹೋತದಿಂದ ಸ್ಥಳೀಯ ಆಡುಗಳ ಉನ್ನತಿಕರಣ, ಆಧುನಿಕ ತೋಟಗಾರಿಕೆ, ಪುಷ್ಪಕೃಷಿ, ಹಣ್ಣು ಮತ್ತು ತರಕಾರಿ ಮೌಲ್ಯವರ್ಧನೆ, ತಾರಸಿ ಕೈತೋಟ, ಸಸ್ಯ ಅಭಿವೃದ್ದಿ ತಾಂತ್ರಿಕತೆ, ಒಣ ಬೇಸಾಯ ತೋಟಗಾರಿಕೆ, ಅರಣ್ಯ ಕೃಷಿ, ಎರೆಹುಳು ಗೊಬ್ಬರ ಘಟಕ, ಅಜೋಲಾ ಘಟಕ, ಜಲಕೃಷಿ ಘಟಕ ಹಾಗೂ ಇ-ಸ್ಯಾಪ್ ತಂತ್ರಜ್ಞಾನಗಳ ಮಾಹಿತಿಯನ್ನು ರೈತರೊಂದಿಗೆ ಹಂಚಿಕೊಳ್ಳುತ್ತಿದೆ. ಈ ಸಾಧನೆಯ ಪ್ರಯುಕ್ತ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.