<p><strong>ಬೆಂಗಳೂರು: </strong>ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕಾಗಿ ನಗರದಲ್ಲಿ ಅಳವಡಿಸಿದ್ದ ಹಿಂದಿ ಬರಹವಿದ್ದ ಫ್ಲೆಕ್ಸ್ಗಳಿಗೆ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಕಾರ್ಯಕರ್ತರು ಮಸಿ ಬಳಿದು ಆಕ್ರೋಶ ಹೊರಹಾಕಿದರು.</p>.<p>ಮೈಸೂರು ರಸ್ತೆಯಲ್ಲಿ ಪ್ರಧಾನಿ ಅವರ ಹಾದು ಹೋಗಲಿದ್ದು, ರಸ್ತೆ ವಿಭಜಕ ಹಾಗೂ ಅಕ್ಕ–ಪಕ್ಕದಲ್ಲಿ ಸಚಿವ ಮುನಿರತ್ನ ಮತ್ತು ಬೆಂಬಲಿಗರು ಫ್ಲೆಕ್ಸ್ ಅಳವಡಿಸಿದ್ದರು. ಅದರಲ್ಲಿ ಹಿಂದಿ ಬರಹವೇ ಹೆಚ್ಚಿತ್ತು.</p>.<p>ಅದನ್ನು ಗಮನಿಸಿದ್ದ ಕರವೇ ಕಾರ್ಯಕರ್ತರು, ರಸ್ತೆಯುದಕ್ಕೂ ಫ್ಲೆಕ್ಸ್ಗಳಿಗೆ ಮಸಿ ಬಳಿದರು. ಗಸ್ತಿನಲ್ಲಿದ್ದ ಪೊಲೀಸರು, ಕಾರ್ಯಕರ್ತರನ್ನು ತಡೆಯಲು ಯತ್ನಿಸಿದರು. ಇದಕ್ಕೆ ಜಗ್ಗದ ಕಾರ್ಯಕರ್ತರು, ಬಹುತೇಕ ಫ್ಲೆಕ್ಸ್ಗಳಿಗೆ ಮಸಿ ಎರಚಿದರು. ‘ಹಿಂದಿ ಹೇರಿಕೆ ಬೇಡ’ ಎಂಬುದಾಗಿ ಘೋಷಣೆ ಕೂಗಿದರು.</p>.<p>‘ಪ್ರಧಾನಿ ಅವರಿಗೆ ಕನ್ನಡ ಭಾಷೆಯಲ್ಲಿ ಸ್ವಾಗತ ಕೋರಲಿ. ಅದನ್ನು ಬಿಟ್ಟು ಹಿಂದಿಯಲ್ಲಿ ಸ್ವಾಗತ ಕೋರುವುದನ್ನು ಸಹಿಸುವುದಿಲ್ಲ. ಕರ್ನಾಟಕದಲ್ಲಿ ಹಿಂದಿ ಹೇರಿಕೆ ಆಗಲು ಬಿಡುವುದಿಲ್ಲ’ ಎಂದು ಕಾರ್ಯಕರ್ತರು ಗುಡುಗಿದರು.</p>.<p>ಫ್ಲೆಕ್ಸ್ ತೆರವು: ಕರವೇ ಕಾರ್ಯಕರ್ತರು ಮಸಿ ಬಳಿದ ನಂತರ, ನಗರದ ಹಲವೆಡೆ ಅಳವಡಿಸಲಾಗಿದ್ದ ಹಿಂದಿ ಬರಹದ ಫ್ಲೆಕ್ಸ್ಗಳನ್ನು ಬಿಜೆಪಿ ಕಾರ್ಯಕರ್ತರೇ ತೆರವು ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕಾಗಿ ನಗರದಲ್ಲಿ ಅಳವಡಿಸಿದ್ದ ಹಿಂದಿ ಬರಹವಿದ್ದ ಫ್ಲೆಕ್ಸ್ಗಳಿಗೆ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಕಾರ್ಯಕರ್ತರು ಮಸಿ ಬಳಿದು ಆಕ್ರೋಶ ಹೊರಹಾಕಿದರು.</p>.<p>ಮೈಸೂರು ರಸ್ತೆಯಲ್ಲಿ ಪ್ರಧಾನಿ ಅವರ ಹಾದು ಹೋಗಲಿದ್ದು, ರಸ್ತೆ ವಿಭಜಕ ಹಾಗೂ ಅಕ್ಕ–ಪಕ್ಕದಲ್ಲಿ ಸಚಿವ ಮುನಿರತ್ನ ಮತ್ತು ಬೆಂಬಲಿಗರು ಫ್ಲೆಕ್ಸ್ ಅಳವಡಿಸಿದ್ದರು. ಅದರಲ್ಲಿ ಹಿಂದಿ ಬರಹವೇ ಹೆಚ್ಚಿತ್ತು.</p>.<p>ಅದನ್ನು ಗಮನಿಸಿದ್ದ ಕರವೇ ಕಾರ್ಯಕರ್ತರು, ರಸ್ತೆಯುದಕ್ಕೂ ಫ್ಲೆಕ್ಸ್ಗಳಿಗೆ ಮಸಿ ಬಳಿದರು. ಗಸ್ತಿನಲ್ಲಿದ್ದ ಪೊಲೀಸರು, ಕಾರ್ಯಕರ್ತರನ್ನು ತಡೆಯಲು ಯತ್ನಿಸಿದರು. ಇದಕ್ಕೆ ಜಗ್ಗದ ಕಾರ್ಯಕರ್ತರು, ಬಹುತೇಕ ಫ್ಲೆಕ್ಸ್ಗಳಿಗೆ ಮಸಿ ಎರಚಿದರು. ‘ಹಿಂದಿ ಹೇರಿಕೆ ಬೇಡ’ ಎಂಬುದಾಗಿ ಘೋಷಣೆ ಕೂಗಿದರು.</p>.<p>‘ಪ್ರಧಾನಿ ಅವರಿಗೆ ಕನ್ನಡ ಭಾಷೆಯಲ್ಲಿ ಸ್ವಾಗತ ಕೋರಲಿ. ಅದನ್ನು ಬಿಟ್ಟು ಹಿಂದಿಯಲ್ಲಿ ಸ್ವಾಗತ ಕೋರುವುದನ್ನು ಸಹಿಸುವುದಿಲ್ಲ. ಕರ್ನಾಟಕದಲ್ಲಿ ಹಿಂದಿ ಹೇರಿಕೆ ಆಗಲು ಬಿಡುವುದಿಲ್ಲ’ ಎಂದು ಕಾರ್ಯಕರ್ತರು ಗುಡುಗಿದರು.</p>.<p>ಫ್ಲೆಕ್ಸ್ ತೆರವು: ಕರವೇ ಕಾರ್ಯಕರ್ತರು ಮಸಿ ಬಳಿದ ನಂತರ, ನಗರದ ಹಲವೆಡೆ ಅಳವಡಿಸಲಾಗಿದ್ದ ಹಿಂದಿ ಬರಹದ ಫ್ಲೆಕ್ಸ್ಗಳನ್ನು ಬಿಜೆಪಿ ಕಾರ್ಯಕರ್ತರೇ ತೆರವು ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>