ಸಮೀಪದ ಹಾಲೇರಿ, ಕಾಂಡನಕೊಲ್ಲಿ, ಬಪ್ಪಕುಚ್ಚಿ, ಹಟ್ಟಿಹೊಳೆ, ನಂದಿಮೊಟ್ಟೆ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳು ಅಪಾಯದ ಅಂಚಿನಲ್ಲಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಆ ಭಾಗದ ಸಂತ್ರಸ್ತರಿಗೂ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ, ಸಂತ ಮೇರಿ, ಸಂತ ಅಂತೋಣಿ ಶಾಲೆ, ಖತೀಜ ಉಮ್ಮ ಮದರಸಾ, ವಿಎಸ್ಎಸ್ಎನ್ ಸಭಾಂಗಣ, ವಿಜಯಾ ಪ್ಲಾಂಟೇಷನ್ ಸಂಕೀರ್ಣ, ಪನ್ಯ ತೋಟದ ಮಾಲೀಕರ ತೋಟದ ಮನೆಗಳಲ್ಲಿ ಆಶ್ರಯದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.