<p><strong>ಗೋಣಿಕೊಪ್ಪಲು</strong>: ಅಂಗವೈಕಲ್ಯ ಮತ್ತು ಬುದ್ಧಿಮಾಂದ್ಯ ಮಕ್ಕಳ ಪಾಲಿನ ನಿಜತಾಯಿ, ಶಿಕ್ಷಕಿ ಕಾಕಮಾಡ ಗಂಗಾ ಚಂಗಪ್ಪ.</p><p>ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪದಲ್ಲಿರುವ ಟಾಟಾಕಾಫಿ ಕಂಪನಿಯ ಬುದ್ಧಿಮಾಂದ್ಯ ಮಕ್ಕಳ ‘ಸ್ವಸ್ಥ’ ಶಾಲೆಯ ಮುಖ್ಯಸ್ಥೆ. 70ರ ಇಳಿವಯಸ್ಸಿನಲ್ಲೂ ಅವರು ಉತ್ಸಾಹದ ಚಿಲುಮೆ. ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಶಾಲೆಯಲ್ಲಿ 125 ಮಕ್ಕಳಿದ್ದಾರೆ.</p><p>ಪೋಷಕರ ಮಮತೆಯಿಂದ ವಂಚಿತರಾಗಿರುವ ಬುದ್ಧಿಮಾಂದ್ಯ ಮಕ್ಕಳು ಇಲ್ಲಿ ಬೆಳೆದು ಸ್ವತಂತ್ರ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಕೆಲವರು ಅದೇ ಶಾಲೆಯಲ್ಲಿಯೇ ದುಡಿದು ಕುಟುಂಬವನ್ನು ಮುನ್ನಡೆಸುತ್ತಿದ್ದಾರೆ. ಮತ್ತೆ ಕೆಲವರು, ಟಾಟಾ ಕಾಫಿ ಕಂಪನಿಗೆ ಪೇಪರ್ ಕವರ್, ಬ್ಯಾಗ್, ಸ್ಕ್ರೀನ್ ಪ್ರಿಂಟಿಂಗ್, ಕರಕುಶಲ ವಸ್ತುಗಳನ್ನೂ ಪೂರೈಸುತ್ತಿದ್ದಾರೆ.</p><p>ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿಯ ಗಂಗಾ, ಮೈಸೂರಿನ ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್ ಎಂ.ಎ ಪದವಿ ಪಡೆದಿದ್ದಾರೆ. ಕೇರಳದ ಕಣ್ಣನ್ ಟೀ ಎಸ್ಟೇಟ್ನಲ್ಲಿ ಪ್ರಧಾನ ವ್ಯವಸ್ಥಾಪಕರಾಗಿದ್ದ ಚಂಗಪ್ಪ ಅವರನ್ನು ಮದುವೆಯಾಗಿದ್ದು ಅವರ ಸೇವಾ ಬದುಕಿಗೆ ಉತ್ತಮ ತಿರುವನ್ನು ನೀಡಿತು.</p><p>ಅವರ ಇಂಗ್ಲಿಷ್ ಜ್ಞಾನವನ್ನು ಕಂಡ ಟಾಟಾ ಕಾಫಿ ಸಂಸ್ಥೆಯು, ತನ್ನ ಸಮಾಜ ಸೇವೆಯ ಭಾಗವಾಗಿ<br>ಬುದ್ಧಿಮಾಂದ್ಯ ಶಾಲೆ ತೆರೆಯುವ ಉದ್ದೇಶದಿಂದ ಕೋಲ್ಕತ್ತಾದಲ್ಲಿ ತರಬೇತಿ ಕೊಡಿಸಿತ್ತು. ಬಳಿಕ ಅವರು, ಮುನ್ನಾರ್ನಲ್ಲಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಮುಖ್ಯಸ್ಥೆಯಾಗಿದ್ದರು. ಅವರ ಉಸ್ತುವಾರಿಯಲ್ಲಿ 7 ಬುದ್ದಿಮಾಂದ್ಯ ಶಾಲೆಗಳು ಕಾರ್ಯನಿರ್ವಹಿಸಿವೆ.</p><p>ಚಂಗಪ್ಪ ಸ್ವಯಂ ನಿವೃತ್ತಿ ಪಡೆದು ಕೊಡಗಿಗೆ ಬಂದ ಬಳಿಕ, ಗಂಗಾ ಅವರನ್ನು ಮತ್ತೆ ಸಂಸ್ಥೆಯು ಸುಂಟಿಕೊಪ್ಪದಲ್ಲಿ ಸ್ವಸ್ಥ ಶಾಲೆ ತೆರೆಯುವಂತೆ ಪ್ರೇರೇಪಿಸಿತ್ತು. ಪ್ರಿತಿಯಿಂದ ಒಪ್ಪಿಕೊಂಡ ಅವರು 2003ರಲ್ಲಿ ಶಾಲೆ ತೆರೆದರು. ಅಂದಿನಿಂದ ಅವರು ನೂರಾರು ಮಕ್ಕಳಿಗೆ ಆಸರೆಯಾಗಿದ್ದಾರೆ.</p><p>ಈ ಸೇವೆಗಾಗಿಯೇ 2014ರಲ್ಲಿ ಅವರಿಗೆ ರಾಷ್ಟ್ರಪತಿ ಪ್ರಶಸ್ತಿ ದೊರಕಿತ್ತು. ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ. ವಾರ್ತಾ ಇಲಾಖೆಯು ಅವರ ಕುರಿತು ಸಾಕ್ಷ್ಯ ಚಿತ್ರವನ್ನೂ ನಿರ್ಮಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಣಿಕೊಪ್ಪಲು</strong>: ಅಂಗವೈಕಲ್ಯ ಮತ್ತು ಬುದ್ಧಿಮಾಂದ್ಯ ಮಕ್ಕಳ ಪಾಲಿನ ನಿಜತಾಯಿ, ಶಿಕ್ಷಕಿ ಕಾಕಮಾಡ ಗಂಗಾ ಚಂಗಪ್ಪ.</p><p>ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪದಲ್ಲಿರುವ ಟಾಟಾಕಾಫಿ ಕಂಪನಿಯ ಬುದ್ಧಿಮಾಂದ್ಯ ಮಕ್ಕಳ ‘ಸ್ವಸ್ಥ’ ಶಾಲೆಯ ಮುಖ್ಯಸ್ಥೆ. 70ರ ಇಳಿವಯಸ್ಸಿನಲ್ಲೂ ಅವರು ಉತ್ಸಾಹದ ಚಿಲುಮೆ. ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಶಾಲೆಯಲ್ಲಿ 125 ಮಕ್ಕಳಿದ್ದಾರೆ.</p><p>ಪೋಷಕರ ಮಮತೆಯಿಂದ ವಂಚಿತರಾಗಿರುವ ಬುದ್ಧಿಮಾಂದ್ಯ ಮಕ್ಕಳು ಇಲ್ಲಿ ಬೆಳೆದು ಸ್ವತಂತ್ರ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಕೆಲವರು ಅದೇ ಶಾಲೆಯಲ್ಲಿಯೇ ದುಡಿದು ಕುಟುಂಬವನ್ನು ಮುನ್ನಡೆಸುತ್ತಿದ್ದಾರೆ. ಮತ್ತೆ ಕೆಲವರು, ಟಾಟಾ ಕಾಫಿ ಕಂಪನಿಗೆ ಪೇಪರ್ ಕವರ್, ಬ್ಯಾಗ್, ಸ್ಕ್ರೀನ್ ಪ್ರಿಂಟಿಂಗ್, ಕರಕುಶಲ ವಸ್ತುಗಳನ್ನೂ ಪೂರೈಸುತ್ತಿದ್ದಾರೆ.</p><p>ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿಯ ಗಂಗಾ, ಮೈಸೂರಿನ ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್ ಎಂ.ಎ ಪದವಿ ಪಡೆದಿದ್ದಾರೆ. ಕೇರಳದ ಕಣ್ಣನ್ ಟೀ ಎಸ್ಟೇಟ್ನಲ್ಲಿ ಪ್ರಧಾನ ವ್ಯವಸ್ಥಾಪಕರಾಗಿದ್ದ ಚಂಗಪ್ಪ ಅವರನ್ನು ಮದುವೆಯಾಗಿದ್ದು ಅವರ ಸೇವಾ ಬದುಕಿಗೆ ಉತ್ತಮ ತಿರುವನ್ನು ನೀಡಿತು.</p><p>ಅವರ ಇಂಗ್ಲಿಷ್ ಜ್ಞಾನವನ್ನು ಕಂಡ ಟಾಟಾ ಕಾಫಿ ಸಂಸ್ಥೆಯು, ತನ್ನ ಸಮಾಜ ಸೇವೆಯ ಭಾಗವಾಗಿ<br>ಬುದ್ಧಿಮಾಂದ್ಯ ಶಾಲೆ ತೆರೆಯುವ ಉದ್ದೇಶದಿಂದ ಕೋಲ್ಕತ್ತಾದಲ್ಲಿ ತರಬೇತಿ ಕೊಡಿಸಿತ್ತು. ಬಳಿಕ ಅವರು, ಮುನ್ನಾರ್ನಲ್ಲಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಮುಖ್ಯಸ್ಥೆಯಾಗಿದ್ದರು. ಅವರ ಉಸ್ತುವಾರಿಯಲ್ಲಿ 7 ಬುದ್ದಿಮಾಂದ್ಯ ಶಾಲೆಗಳು ಕಾರ್ಯನಿರ್ವಹಿಸಿವೆ.</p><p>ಚಂಗಪ್ಪ ಸ್ವಯಂ ನಿವೃತ್ತಿ ಪಡೆದು ಕೊಡಗಿಗೆ ಬಂದ ಬಳಿಕ, ಗಂಗಾ ಅವರನ್ನು ಮತ್ತೆ ಸಂಸ್ಥೆಯು ಸುಂಟಿಕೊಪ್ಪದಲ್ಲಿ ಸ್ವಸ್ಥ ಶಾಲೆ ತೆರೆಯುವಂತೆ ಪ್ರೇರೇಪಿಸಿತ್ತು. ಪ್ರಿತಿಯಿಂದ ಒಪ್ಪಿಕೊಂಡ ಅವರು 2003ರಲ್ಲಿ ಶಾಲೆ ತೆರೆದರು. ಅಂದಿನಿಂದ ಅವರು ನೂರಾರು ಮಕ್ಕಳಿಗೆ ಆಸರೆಯಾಗಿದ್ದಾರೆ.</p><p>ಈ ಸೇವೆಗಾಗಿಯೇ 2014ರಲ್ಲಿ ಅವರಿಗೆ ರಾಷ್ಟ್ರಪತಿ ಪ್ರಶಸ್ತಿ ದೊರಕಿತ್ತು. ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ. ವಾರ್ತಾ ಇಲಾಖೆಯು ಅವರ ಕುರಿತು ಸಾಕ್ಷ್ಯ ಚಿತ್ರವನ್ನೂ ನಿರ್ಮಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>