<p><strong>ಗೋಣಿಕೊಪ್ಪಲು:</strong> ಇಲ್ಲಿನ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ರಿಫ್ಲೆಕ್ಷನ್ ತಂಡದ ನೃತ್ಯ ಸಭಿಕರ ಮನ ಸೂರೆಗೊಂಡಿತು.</p>.<p>ಸ್ಥಳೀಯ ಕಲಾವಿದರಿಂದಲೇ ಕೂಡಿದ್ದ ನೃತ್ಯಗಾರರ ಕಾರ್ಯಕ್ರಮ ನೋಡಲು ಸಭಿಕರು ಕಿಕ್ಕಿರಿದು ತುಂಬಿದ್ದರು.</p>.<p>ಮಧ್ಯರಾತ್ರಿವರೆಗೂ ನಡೆದ ನೃತ್ಯವನ್ನು ಸಭಿಕರು ಮನಸಾರೆ ನೋಡಿ ಆನಂದಿಸಿದರು. ಯುವ ನೃತ್ಯಗಾರರು ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿ ನೋಡುಗರ ಚಿತ್ತ ಸೂರೆಗೊಂಡರು. ಝಗಮಗಿಸುವ ವಿದ್ಯುತ್ ದೀಪಗಳ ವೇದಿಕೆಯಲ್ಲಿ ದೇಸಿ ಮತ್ತು ಪಾಶ್ಚಾತ್ಯ ಸಂಗೀತಗಳಿಗೆ ಸುಂದರವಾಗಿ ನೃತ್ಯ ಮಾಡಿದರು.</p>.<p>ಆರಂಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಥಳೀಯ ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಐ.ಕೆ.ಬಿದ್ದಪ್ಪ,‘ದಸರಾದಲ್ಲಿ ಯುವ ದಸರಾ, ಮಹಿಳಾ ದಸರಾ ಆಚರಿಸುವಂತೆ ದೇಶ ಕಾಯುವ ಯೋಧರ ದಸರಾ ಆಚರಿಸಬೇಕು’ ಎಂದು ಸಲಹೆ ನೀಡಿದರು.</p>.<p>‘ಕೊಡಗಿನಲ್ಲಿ ಮಾತ್ರ ಯೋಧರ ದಸರಾ ಆಚರಿಸಲು ಸಾಧ್ಯ. ಇದರಿಂದ ಯುವಕರು ಸೇನೆ ಸೇರಲು ಪ್ರೇರಣೆ ನೀಡಿದಂತಾಗುತ್ತದೆ. ಜತೆಗೆ ಯೋಧರಿಗೂ ಗೌರವ ಸಲ್ಲಿಸಿದಂತಾಗುತ್ತದೆ’ ಎಂದು ಅಭಿಪ್ರಾಯಿಸಿದರು.</p>.<p>ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ,‘ದೇಶಕ್ಕೆ ಅನ್ನ ಕೊಡುವ ರೈತನ ದಸರಾ ಆಚರಿಸಬೇಕು. ಇದು ಕೂಡ ಅನ್ನದಾತನಿಗೆ ನೀಡುವ ಗೌರವ. ಜತೆಗೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ’ ಎಂದು ನುಡಿದರು.</p>.<p>ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕಂದ ದೇವಯ್ಯ, ಕಾರ್ಯಕ್ರಮ ಸಂಯೋಜಕ ಚಂದನ್ ಕಾಮತ್, ಮಹಿಳಾ ದಸರಾ ಅಧ್ಯಕ್ಷೆ ಮಂಜುಳಾ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ದಿಲನ್ ಚಂಗಪ್ಪ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಣಿಕೊಪ್ಪಲು:</strong> ಇಲ್ಲಿನ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ರಿಫ್ಲೆಕ್ಷನ್ ತಂಡದ ನೃತ್ಯ ಸಭಿಕರ ಮನ ಸೂರೆಗೊಂಡಿತು.</p>.<p>ಸ್ಥಳೀಯ ಕಲಾವಿದರಿಂದಲೇ ಕೂಡಿದ್ದ ನೃತ್ಯಗಾರರ ಕಾರ್ಯಕ್ರಮ ನೋಡಲು ಸಭಿಕರು ಕಿಕ್ಕಿರಿದು ತುಂಬಿದ್ದರು.</p>.<p>ಮಧ್ಯರಾತ್ರಿವರೆಗೂ ನಡೆದ ನೃತ್ಯವನ್ನು ಸಭಿಕರು ಮನಸಾರೆ ನೋಡಿ ಆನಂದಿಸಿದರು. ಯುವ ನೃತ್ಯಗಾರರು ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿ ನೋಡುಗರ ಚಿತ್ತ ಸೂರೆಗೊಂಡರು. ಝಗಮಗಿಸುವ ವಿದ್ಯುತ್ ದೀಪಗಳ ವೇದಿಕೆಯಲ್ಲಿ ದೇಸಿ ಮತ್ತು ಪಾಶ್ಚಾತ್ಯ ಸಂಗೀತಗಳಿಗೆ ಸುಂದರವಾಗಿ ನೃತ್ಯ ಮಾಡಿದರು.</p>.<p>ಆರಂಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಥಳೀಯ ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಐ.ಕೆ.ಬಿದ್ದಪ್ಪ,‘ದಸರಾದಲ್ಲಿ ಯುವ ದಸರಾ, ಮಹಿಳಾ ದಸರಾ ಆಚರಿಸುವಂತೆ ದೇಶ ಕಾಯುವ ಯೋಧರ ದಸರಾ ಆಚರಿಸಬೇಕು’ ಎಂದು ಸಲಹೆ ನೀಡಿದರು.</p>.<p>‘ಕೊಡಗಿನಲ್ಲಿ ಮಾತ್ರ ಯೋಧರ ದಸರಾ ಆಚರಿಸಲು ಸಾಧ್ಯ. ಇದರಿಂದ ಯುವಕರು ಸೇನೆ ಸೇರಲು ಪ್ರೇರಣೆ ನೀಡಿದಂತಾಗುತ್ತದೆ. ಜತೆಗೆ ಯೋಧರಿಗೂ ಗೌರವ ಸಲ್ಲಿಸಿದಂತಾಗುತ್ತದೆ’ ಎಂದು ಅಭಿಪ್ರಾಯಿಸಿದರು.</p>.<p>ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ,‘ದೇಶಕ್ಕೆ ಅನ್ನ ಕೊಡುವ ರೈತನ ದಸರಾ ಆಚರಿಸಬೇಕು. ಇದು ಕೂಡ ಅನ್ನದಾತನಿಗೆ ನೀಡುವ ಗೌರವ. ಜತೆಗೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ’ ಎಂದು ನುಡಿದರು.</p>.<p>ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕಂದ ದೇವಯ್ಯ, ಕಾರ್ಯಕ್ರಮ ಸಂಯೋಜಕ ಚಂದನ್ ಕಾಮತ್, ಮಹಿಳಾ ದಸರಾ ಅಧ್ಯಕ್ಷೆ ಮಂಜುಳಾ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ದಿಲನ್ ಚಂಗಪ್ಪ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>