2013, 2023 ಮತ್ತು ಈಗ ಟಿಕೆಟ್ ತಪ್ಪಿದೆ. ಈ ಮೂರೂ ಬಾರಿಯೂ ನನಗೆ ಏಕೆ ಟಿಕೆಟ್ ನಿರಾಕರಿಸಲಾಯಿತು ಎಂಬ ಕಾರಣವನ್ನು ಪಕ್ಷ ನೀಡಿಲ್ಲ. ಆದರೆ, 2023ರಲ್ಲಿ ವಿಧಾನಸಭೆಗೆ ಟಿಕೆಟ್ ಕೈತಪ್ಪಿದಾಗ ವಿಧಾನಪರಿಷತ್ತಿಗೆ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಈಗಲೂ ನನಗೆ ಟಿಕೆಟ್ ತಪ್ಪಿಸಲಾಯಿತು. ಈಗ ನನ್ನ ಮುಂದೆ ರಾಜಕೀಯ ನಿವೃತ್ತಿಯೊಂದೇ ಉಳಿದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.