<p><strong>ಮಡಿಕೇರಿ</strong>: ‘ಕನ್ನಡ ನಾಡು ಚೆಂದ, ಕನ್ನಡ ಭಾಷೆ ಅಂದ, ಕನ್ನಡ ಜನ ಚೆಂದ, ನಮ್ಮ ಕನ್ನಡ ನುಡಿ ಅಂದ....’ ಈ ಹಾಡುಗಳ ಸಾಲುಗಳನ್ನು ಯಾವುದೇ ಸರ್ಕಾರಿ ಕಾರ್ಯಕ್ರಮದ ಪ್ರಚಾರ ಕಾರ್ಯಕ್ರಮದಲ್ಲಿ ಕೇಳೇ ಇರುತ್ತೀರಿ. ಇದರ ಹಿಂದಿನ ಕಂಠಶಕ್ತಿ ಕಲಾವಿದ ಈ.ರಾಜು ಅವರದ್ದು.</p>.<p>ಕೇವಲ ಹಾಡುಗಾರರಾಗಿ ಮಾತ್ರವಲ್ಲ ಬೀದಿ ನಾಟಕಗಳ ನಿರ್ದೇಶಕರಾಗಿ, ನಟರಾಗಿ ಕೊಡಗು ಜಿಲ್ಲೆಯಲ್ಲಿ ಹೆಸರು ಗಳಿಸಿದವರು ಈ.ರಾಜು. ಇವರು ಬಹುತೇಕ ಮಂದಿಗೆ ಪರಿಚಯ ಇಲ್ಲ. ಆದರೆ, ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ ಕಾರ್ಯಗಳಲ್ಲಿ ಹಿಂದಿರುವ ದೊಡ್ಡ ಶಕ್ತಿ ಇವರೆಂದರೆ ತಪ್ಪಾಗಲಾರದು.</p>.<p>ಕುಶಾಲನಗರ ತಾಲ್ಲೂಕಿನ ಕೂಡಿಗೆ ಗ್ರಾಮದವರಾದ ಇವರು ಕಲೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದವರು. ಜೀವನೋಪಾಯಕ್ಕೆ ಬೇರೆ ವೃತ್ತಿಯನ್ನು ಮಾಡದೇ ಕಲೆಯೊಂದನ್ನೇ ನಂಬಿಕೊಂಡಿರುವ ಅವರು ಸರ್ಕಾರದ ಯೋಜನೆಗಳ ಅರಿವು ಜನರಿಗೆ ತಲುಪುವಂತೆ ಮಾಡುವ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ. ಆದರೆ, ತಾವು ಮಾತ್ರ ಕಡುಕಷ್ಟದ ಜೀವನ ಸಾಗಿಸುತ್ತಿದ್ದಾರೆ.</p>.<p>‘ಪ್ರಜಾವಾಣಿ’ಯೊಂದಿಗೆ ಮಾತಿಗಿಳಿದ ಅವರು, ‘ಕಳೆದ 28 ವರ್ಷಗಳ ಹಿಂದೆ ಸಾಕ್ಷರತಾ ಆಂದೋಲನದಲ್ಲಿ ಶಿಕ್ಷಣದ ಮಹತ್ವವನ್ನು ಕಲೆಯ ಮೂಲಕ ಜನರಿಗೆ ತಿಳಿಸುವ ಕಾರ್ಯಕ್ಕೆ ಕೈ ಹಾಕಿದೆ. ಅಲ್ಲಿಂದ ಇಲ್ಲಿಯವರೆಗೂ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಕಲೆಯ ಮೂಲಕವೇ ತಿಳಿಸುವ ಕೆಲಸ ಮಾಡುತ್ತಿರುವೆ’ ಎಂದು ತಿಳಿಸಿದರು.</p>.<p>ಸರ್ಕಾರದ ಜನೋಪಯೋಗಿ ಕಾರ್ಯಕ್ರಮಗಳು, ಅರಿವು ಮೂಡಿಸುವ ವಿಷಯಗಳನ್ನು ಫಲಕ ಹಾಕಿದರೆ, ಕರಪತ್ರ ಹಂಚಿದರೆ ಜನರಿಗೆ ಅರಿವಾಗುವುದು ಕಷ್ಟ. ಆದರೆ, ಅದಕ್ಕೆ ಕಲೆಯನ್ನೇ ಮಾಧ್ಯಮವಾಗಿಸಿದರೆ ಖಂಡಿತವಾಗಿಯೂ ಆ ಯೋಜನೆಯ ಮಹತ್ವ ಮನದಟ್ಟಾಗುತ್ತದೆ. ಇಂತಹ ಮಹತ್ವದ ಕೆಲಸವನ್ನು ಈ.ರಾಜು ಮಾಡುತ್ತಿದ್ದಾರೆ.</p>.<p>ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಹೊತ್ತಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಇವರ ಮೂಲಕ ಬೀದಿನಾಟಕಗಳು, ಹಾಡುಗಳ ನಿರಂತರವಾಗಿ ಕಾರ್ಯಕ್ರಮಗಳನ್ನು ನೀಡಿ, ವ್ಯಾಪಕ ಪ್ರಚಾರವನ್ನು ನೀಡುತ್ತಿದ್ದಾರೆ.</p>.<p>ಇವರು ಜಿಲ್ಲೆಯಲ್ಲಿರುವ ಎಲ್ಲ 103 ಗ್ರಾಮ ಪಂಚಾಯಿತಿಗಳು, ಕುಶಾಲನಗರ ಪುರಸಭೆ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಮಡಿಕೇರಿ ನಗರಸಭೆ, ವಿರಾಜಪೇಟೆ ಪುರಸಭೆ ವ್ಯಾಪ್ತಿಗಳಲ್ಲಿ ಮಳೆಯಲ್ಲೂ ಸಂಚರಿಸಿ, ಕೊಡೆ ಹಿಡಿದು ಬೀದಿನಾಟಕವಾಡಿ ಯೋಜನೆಯ ಮಹತ್ವವನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.</p>.<p>ಪದವಿ ಪಡೆದರೂ ಇವರು ಜೀವನೋಪಾಯಕ್ಕೆ ಬೇರೆ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿಲ್ಲ. ಒಂದು ವೇಳೆ ಬೇರೆ ವೃತ್ತಿಯಲ್ಲಿದ್ದರೆ ಕಲಾಸೇವೆ ಮಾಡುವುದಕ್ಕೆ ವಿಘ್ನ ಉಂಟಾಗುತ್ತದೆ ಎಂಬ ಕಾರಣಕ್ಕೆ ಅವರು ಕಲೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.</p>.<p>ಜಿಲ್ಲಾಡಳಿತವು ಇವರ ಕಲಾಸೇವೆಯನ್ನು ಪರಿಗಣಿಸಿ 2007ರಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸನ್ಮಾನಿಸಿತು. ನಂತರ, ಕನ್ನಡ ಸಾಹಿತ್ಯ ಪರಿಷತ್ತು, ಅರಣ್ಯ ಇಲಾಖೆ ಹಾಗೂ ವಿವಿಧ ಮಠಗಳು ಇವರನ್ನು ಗೌರವಿಸಿವೆ.</p>.<p>ಇವರ ಪತ್ನಿ ಶಾರದಾ ಅಂಗನವಾಡಿ ಕಾರ್ಯಕರ್ತೆಯಾಗಿ ನಿರ್ವಹಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ‘ಕನ್ನಡ ನಾಡು ಚೆಂದ, ಕನ್ನಡ ಭಾಷೆ ಅಂದ, ಕನ್ನಡ ಜನ ಚೆಂದ, ನಮ್ಮ ಕನ್ನಡ ನುಡಿ ಅಂದ....’ ಈ ಹಾಡುಗಳ ಸಾಲುಗಳನ್ನು ಯಾವುದೇ ಸರ್ಕಾರಿ ಕಾರ್ಯಕ್ರಮದ ಪ್ರಚಾರ ಕಾರ್ಯಕ್ರಮದಲ್ಲಿ ಕೇಳೇ ಇರುತ್ತೀರಿ. ಇದರ ಹಿಂದಿನ ಕಂಠಶಕ್ತಿ ಕಲಾವಿದ ಈ.ರಾಜು ಅವರದ್ದು.</p>.<p>ಕೇವಲ ಹಾಡುಗಾರರಾಗಿ ಮಾತ್ರವಲ್ಲ ಬೀದಿ ನಾಟಕಗಳ ನಿರ್ದೇಶಕರಾಗಿ, ನಟರಾಗಿ ಕೊಡಗು ಜಿಲ್ಲೆಯಲ್ಲಿ ಹೆಸರು ಗಳಿಸಿದವರು ಈ.ರಾಜು. ಇವರು ಬಹುತೇಕ ಮಂದಿಗೆ ಪರಿಚಯ ಇಲ್ಲ. ಆದರೆ, ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ ಕಾರ್ಯಗಳಲ್ಲಿ ಹಿಂದಿರುವ ದೊಡ್ಡ ಶಕ್ತಿ ಇವರೆಂದರೆ ತಪ್ಪಾಗಲಾರದು.</p>.<p>ಕುಶಾಲನಗರ ತಾಲ್ಲೂಕಿನ ಕೂಡಿಗೆ ಗ್ರಾಮದವರಾದ ಇವರು ಕಲೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದವರು. ಜೀವನೋಪಾಯಕ್ಕೆ ಬೇರೆ ವೃತ್ತಿಯನ್ನು ಮಾಡದೇ ಕಲೆಯೊಂದನ್ನೇ ನಂಬಿಕೊಂಡಿರುವ ಅವರು ಸರ್ಕಾರದ ಯೋಜನೆಗಳ ಅರಿವು ಜನರಿಗೆ ತಲುಪುವಂತೆ ಮಾಡುವ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ. ಆದರೆ, ತಾವು ಮಾತ್ರ ಕಡುಕಷ್ಟದ ಜೀವನ ಸಾಗಿಸುತ್ತಿದ್ದಾರೆ.</p>.<p>‘ಪ್ರಜಾವಾಣಿ’ಯೊಂದಿಗೆ ಮಾತಿಗಿಳಿದ ಅವರು, ‘ಕಳೆದ 28 ವರ್ಷಗಳ ಹಿಂದೆ ಸಾಕ್ಷರತಾ ಆಂದೋಲನದಲ್ಲಿ ಶಿಕ್ಷಣದ ಮಹತ್ವವನ್ನು ಕಲೆಯ ಮೂಲಕ ಜನರಿಗೆ ತಿಳಿಸುವ ಕಾರ್ಯಕ್ಕೆ ಕೈ ಹಾಕಿದೆ. ಅಲ್ಲಿಂದ ಇಲ್ಲಿಯವರೆಗೂ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಕಲೆಯ ಮೂಲಕವೇ ತಿಳಿಸುವ ಕೆಲಸ ಮಾಡುತ್ತಿರುವೆ’ ಎಂದು ತಿಳಿಸಿದರು.</p>.<p>ಸರ್ಕಾರದ ಜನೋಪಯೋಗಿ ಕಾರ್ಯಕ್ರಮಗಳು, ಅರಿವು ಮೂಡಿಸುವ ವಿಷಯಗಳನ್ನು ಫಲಕ ಹಾಕಿದರೆ, ಕರಪತ್ರ ಹಂಚಿದರೆ ಜನರಿಗೆ ಅರಿವಾಗುವುದು ಕಷ್ಟ. ಆದರೆ, ಅದಕ್ಕೆ ಕಲೆಯನ್ನೇ ಮಾಧ್ಯಮವಾಗಿಸಿದರೆ ಖಂಡಿತವಾಗಿಯೂ ಆ ಯೋಜನೆಯ ಮಹತ್ವ ಮನದಟ್ಟಾಗುತ್ತದೆ. ಇಂತಹ ಮಹತ್ವದ ಕೆಲಸವನ್ನು ಈ.ರಾಜು ಮಾಡುತ್ತಿದ್ದಾರೆ.</p>.<p>ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಹೊತ್ತಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಇವರ ಮೂಲಕ ಬೀದಿನಾಟಕಗಳು, ಹಾಡುಗಳ ನಿರಂತರವಾಗಿ ಕಾರ್ಯಕ್ರಮಗಳನ್ನು ನೀಡಿ, ವ್ಯಾಪಕ ಪ್ರಚಾರವನ್ನು ನೀಡುತ್ತಿದ್ದಾರೆ.</p>.<p>ಇವರು ಜಿಲ್ಲೆಯಲ್ಲಿರುವ ಎಲ್ಲ 103 ಗ್ರಾಮ ಪಂಚಾಯಿತಿಗಳು, ಕುಶಾಲನಗರ ಪುರಸಭೆ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಮಡಿಕೇರಿ ನಗರಸಭೆ, ವಿರಾಜಪೇಟೆ ಪುರಸಭೆ ವ್ಯಾಪ್ತಿಗಳಲ್ಲಿ ಮಳೆಯಲ್ಲೂ ಸಂಚರಿಸಿ, ಕೊಡೆ ಹಿಡಿದು ಬೀದಿನಾಟಕವಾಡಿ ಯೋಜನೆಯ ಮಹತ್ವವನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.</p>.<p>ಪದವಿ ಪಡೆದರೂ ಇವರು ಜೀವನೋಪಾಯಕ್ಕೆ ಬೇರೆ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿಲ್ಲ. ಒಂದು ವೇಳೆ ಬೇರೆ ವೃತ್ತಿಯಲ್ಲಿದ್ದರೆ ಕಲಾಸೇವೆ ಮಾಡುವುದಕ್ಕೆ ವಿಘ್ನ ಉಂಟಾಗುತ್ತದೆ ಎಂಬ ಕಾರಣಕ್ಕೆ ಅವರು ಕಲೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.</p>.<p>ಜಿಲ್ಲಾಡಳಿತವು ಇವರ ಕಲಾಸೇವೆಯನ್ನು ಪರಿಗಣಿಸಿ 2007ರಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸನ್ಮಾನಿಸಿತು. ನಂತರ, ಕನ್ನಡ ಸಾಹಿತ್ಯ ಪರಿಷತ್ತು, ಅರಣ್ಯ ಇಲಾಖೆ ಹಾಗೂ ವಿವಿಧ ಮಠಗಳು ಇವರನ್ನು ಗೌರವಿಸಿವೆ.</p>.<p>ಇವರ ಪತ್ನಿ ಶಾರದಾ ಅಂಗನವಾಡಿ ಕಾರ್ಯಕರ್ತೆಯಾಗಿ ನಿರ್ವಹಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>