ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಉತ್ತರ ಕೊಡಗಿನಲ್ಲಿ ರಸ್ತೆ ದುರಾವಸ್ಥೆ

ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾದರೂ ಅನುಮತಿ ದೊರೆತಿಲ್ಲ, ಭೂಮಿಪೂಜೆ ನಡೆದರೂ ಕಾಮಗಾರಿ ಆರಂಭವೇ ಆಗಿಲ್ಲ
Published : 24 ಫೆಬ್ರುವರಿ 2025, 7:55 IST
Last Updated : 24 ಫೆಬ್ರುವರಿ 2025, 7:55 IST
ಫಾಲೋ ಮಾಡಿ
Comments
ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಯ ದುಸ್ಥಿತಿ
ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಯ ದುಸ್ಥಿತಿ
2020ರಿಂದಲೂ ಮನವಿ ಮಾಡುತ್ತಲೇ ಇದ್ದೇವೆ... ವಿದ್ಯಾರ್ಥಿಗಳು ಕಾರ್ಮಿಕರು ಕಾಫಿ ಬೆಳೆಗಾರರು ಮಾತ್ರವಲ್ಲ ಪ್ರವಾಸಿಗರೂ ಸೇರಿದಂತೆ ಹಲವಾರು ಮಂದಿ ಹಿರಿಸಾವೆ ಬಿಳಿಗೇರಿ ಮತ್ತು ಚೆಟ್ಟಳ್ಳಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಾರೆ.
ತಾಕೇರಿ ಗ್ರಾಮದ ನಡುವಿನ ಹಿರಿಸಾವೆ
ಚೆಟ್ಟಳ್ಳಿ ರಸ್ತೆ ಸಂಚರಿಸಲು ಸಾಧ್ಯವಾಗದ ಸ್ಥಿತಿ ಇದೆ. ರಸ್ತೆ ಇಕ್ಕಟ್ಟಾಗಿರುವುದರಿಂದ ಸುಗಮ ಸಂಚಾರ ಕಷ್ಟವಾಗಿದೆ. ರಸ್ತೆ ಸರಿಪಡಿಸುವಂತೆ 2020ರಿಂದಲೂ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬರುತ್ತಿದ್ದೇವೆ. ಆದರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ. 2023ರಲ್ಲಿ ಶಾಸಕ ಡಾ.ಮಂತರ್ ಗೌಡ ಅವರಲ್ಲಿ ಮನವಿ ಮಾಡಿದ್ದೇವೆ 
ಎಂ.ಎ.ಶ್ಯಾಮ್ ಪ್ರಸಾದ್ ಸೋಮವಾರಪೇಟೆ ಕಾಫಿ ಬೆಳೆಗಾರರ ಹೋರಾಟ ಸಮಿತಿಯ ವಕ್ತಾರ
₹10 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ ಹಿರಿಸಾವೆ ಬಿಳಿಗೇರಿ ಮತ್ತು ಚೆಟ್ಟಳ್ಳಿ ರಾಜ್ಯ ಹೆದ್ದಾರಿ ಎಂದು ಘೊಷಣೆ ಮಾತ್ರ ಆಗಿದೆ. ಇದು 3.5 ಮೀಟರ್ ಅಗಲ ಇದ್ದು ಅದನ್ನು 7 ಮೀಟರ್ ರಸ್ತೆಯನ್ನಾಗಿ ಮಾಡಬೇಕಿದೆ. ಈಗಾಗಲೇ ಶನಿವಾರಸಂತೆಯಿಂದ ಚಂಗಡಿಗಳ್ಳಿ ಮೂಲಕ ರಸ್ತೆ ಅಭಿವೃದ್ಧಿಯಾಗುತ್ತಿದೆ. ಪೂರ್ಣ ರಸ್ತೆ ಮೇಲ್ದರ್ಜೆಗೇರಿಸಲು ₹ 30 ಕೋಟಿ ಹಣ ಬೇಕಿದೆ. ತಕ್ಷಣಕ್ಕೆ ಕುಂಬೂರಿನಿಂದ ತಾಕೇರಿಯವರೆಗೆ ರಸ್ತೆ ದುರಸ್ಥಿ ಮತ್ತು ವಿಸ್ತರಣೆಗಾಗಿ ಸರ್ಕಾರಕ್ಕೆ ₹ 10 ಕೋಟಿಯ ಅಂದಾಜು ಪಟ್ಟಿ ಹೋಗಿದೆ. ಸರ್ಕಾರದಿಂದ ಹಣ ಬಂದಲ್ಲಿ ಮಾರ್ಚ್ ತಿಂಗಳ ನಂತರ ಕಾರ್ಯಯೋಜನೆಯಾಗಲಿದೆ
ವೆಂಕಟೇಶ್ ನಾಯಕ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT