ಸಮೀಪದ ಅಪ್ಪಶೆಟ್ಟಳ್ಳಿ ಗ್ರಾಮದ ಕೃಷಿಕ ಎ. ಡಿ. ಮೋಹನ್ ಕುಮಾರ್ ಕಾಫಿ ಬೆಳೆಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಏಲಕ್ಕಿ ಒಣಗಿಸುವ ಯಂತ್ರ ಸಂಶೋಧನೆ ಮಾಡಿದ್ದಾರೆ. ಇದು ಏಲಕ್ಕಿ ಒಣಗಿಸುವ ಯಂತ್ರವಾದರೂ, ಮಳೆಗಾಲದಲ್ಲಿ ಕಾಫಿ, ಕಾಳುಮೆಣಸು, ಹಸಿರು ಮೆಣಸನ್ನು ಯಂತ್ರದ ಮೂಲಕ ಒಣಗಿಸಬಹುದು. ಇದರ ಜತೆಗೆ ಮಳೆಗಾಲದಲ್ಲಿ ಬಟ್ಟೆ ಕೂಡಾ ಒಣಗಿಸಬಹುದು.