ಕುಶಾಲನಗರ ಭಾಗದಿಂದ ಸಿದ್ದಾಪುರದ ಮೂಲಕ ವಿರಾಜಪೇಟೆ ತೆರಳಿದ ವಾಹನದಿಂದ ಕೆಂಪು ಬಣ್ಣದ ದ್ರವ ರಸ್ತೆಯಲ್ಲಿ ಚೆಲ್ಲಿದ್ದು, ಸಾರ್ವಜನಿಕರಿಗೆ ಕೆಮ್ಮು, ಕಣ್ಣು ಉರಿ, ಶೀತ ಕಾಣಿಸಿಕೊಂಡಿದೆ. ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ವಾಹನದಿಂದ ರಾಸಾಯನಿಕ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿತ್ತು. ಆದರೆ, ರಸಾಯನಿಕ ಅಲ್ಲ. ಚಿಲ್ಲಿ ಸಾಸ್ ಸೋರಿಕೆಯಾಗಿದೆ. ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.