ಹುದಿಕೇರಿ, ಹರಿಹರ, ಗೋಣಿ ಕೊಪ್ಪಲು, ಅಮ್ಮತ್ತಿ, ಹಾತೂರು, ಹೊಸಕೋಟೆ ಮೊದಲಾದ ಕಡೆ ಪೂರ್ಣವಾಗಿ ಒಣಗಿ ಮಾರಾಟಕ್ಕೆ ಸಿದ್ಧಗೊಂಡಿದ್ದ ಕಾಫಿ ಕೂಡ ಮಳೆಗೆ ನೀರುಪಾಲಾಗಿದೆ. ಕೆಲವೆಡೆ ಮಳೆಯಿಂದ ನೀರು ಹರಿದ ಪರಿಣಾಮ ಒಣ ಮತ್ತು ಹಸಿ ಹಣ್ಣು ಕಾಫಿಗಳೆರಡು ಮಿಶ್ರಣಗೊಂಡು ಕೊಚ್ಚಿ ಹೋಗಿದೆ. ಈ ಪೈಕಿ ಅಲ್ಲಲ್ಲಿ ಉಳಿದುಕೊಂಡಿರುವ ಈ ರೀತಿಯ ಕಾಫಿಯನ್ನು ಬೇರ್ಪಡಿಸುವುದೇ ಇದೀಗ ಬೆಳಗಾರರಿಗೆ, ಕಾರ್ಮಿಕರಿಗೆ ದೊಡ್ಡ ಸವಾಲಾಗಿದೆ.