ಕಗ್ಗೋಡ್ಲು ಗ್ರಾಮದ ನಿವಾಸಿ ವೈ.ಎ.ಚಿದಾನಂದ ಅವರು ತಮ್ಮ ತೋಟದ ಕಣದಲ್ಲಿ ಇಟ್ಟಿದ್ದ ಹಸಿ ಕಾಫಿಯಲ್ಲಿ ಅಂದಾಜು 350 ಕೆ.ಜಿ ಕಾಫಿಯನ್ನು ಆರೋಪಿಗಳು ಜ. 31ರಂದು ಕಳವು ಮಾಡಿದ್ದರು. ನಂತರ, ಅವರು ಮಡಿಕೇರಿಯ ವರ್ತಕ ಅಬ್ದುಲ್ ಅಜೀಜ್ ಅವರಿಗೆ ಮಾರಾಟ ಮಾಡಿದ್ದರು. ಕಾರ್ಯಾಚರಣೆ ಕೈಗೊಂಡ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿ, 150 ಚೀಲ ಕಾಫಿಯನ್ನು ವಶಪಡಿಸಿಕೊಂಡಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಕೆ.ಎಂ.ಕಿಶೋರ್ಕುಮಾರ್ ಹಾಗೂ ಮನು ರೈ ಅವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.