ಕಳೆದ ಫೆ.18ರಂದು ಅಂಕನಹಳ್ಳಿ, ಮೆಣಸ, ಕೈಸರವಳ್ಳಿ, ಸೀಗೆಮರೂರು, ಹಂಬಳ್ಳಿ, ಮನೆಹಳ್ಳಿ, ಬೆಟ್ಟದಹಳ್ಳಿ, ಮೈಲಾಥಪುರ, ನಾಗವಾರ ಮೊದಲಾದ 11 ಗ್ರಾಮಗಳ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಯಾಗಿತ್ತು.ಸುಮಾರು 2,400 ಎಕರೆ ಪ್ರದೇಶದಲ್ಲಿ ಕಾಫಿ, ಕಾಳುಮೆಣಸು, ಬಾಳೆ, ಅಡಿಕೆ ಸೇರಿದಂತೆ ಹೊಲಗಳಲ್ಲಿ ಬೆಳೆದಿದ್ದ ಜೋಳ, ಹಸಿರುಮೆಣಸಿನಕಾಯಿ, ಸಿಹಿಗೆಣಸು, ಮರಗೆಣಸು ಇತ್ಯಾದಿ ಬೆಳೆಗಳು ನೆಲಕಚ್ಚಿತ್ತು.