ಹಚ್ಚಿನಾಡು ಕೊಂಡಂಗೇರಿ, ಹಾಲುಗುಂದ ಗ್ರಾಮಗಳು ಸಿದ್ದಾಪುರ ಠಾಣಾ ವ್ಯಾಪ್ತಿಗೆ ಸೇರಿದ್ದು, ಅಗತ್ಯ ಕೆಲಸಗಳಿಗೆ ಜನರು ಕಣ್ಣಂಗಾಲ– ಗುಹ್ಯ ರಸ್ತೆಯನ್ನು ಉಪಯೋಗಿಸುತ್ತಿದ್ದರು. ಮೂರ್ನಾಡು, ಒಂಟಿಯಂಗಡಿಯ ಜನರಿಗೆ ಕೂಡ ಸಿದ್ದಾಪುರಕ್ಕೆ ತೆರಳಲು ಇದು ಸುಲಭ ರಸ್ತೆಯಾಗಿದೆ. ರಸ್ತೆ ದುರಸ್ತಿಯಾಗದಿರುವ ಕಾರಣ ಗ್ರಾಮಸ್ಥರು ಅಮ್ಮತ್ತಿ ಮೂಲಕ ಸಿದ್ದಾಪುರಕ್ಕೆ ತೆರಳಬೇಕಾಗಿದೆ. ಅಮ್ಮತ್ತಿ ರಸ್ತೆಯ ದುರಸ್ತಿ ಕಾರ್ಯ ನಡೆಯುತ್ತಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.