ಸಿದ್ದಾಪುರ (ಕೊಡಗು): ಮರದ ನಾಟಾಗಳನ್ನು ತುಂಬುವ ವೇಳೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದ್ದು, ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿದ್ದಾಪುರ ಸಮೀಪದ ಹಂಚಿಕಾಡು ಗ್ರಾಮದ ರಸ್ತೆ ಬದಿಯಲ್ಲಿ ಮರದ ನಾಟಾವನ್ನು ಕಾರ್ಮಿಕರು ಲಾರಿಗೆ ತುಂಬುತ್ತಿದ್ದಾಗ ಸಮೀಪದ ತೋಟದಿಂದ ಕಾಡಾನೆ ದಾಳಿಗೆ ಮುಂದಾಗಿದೆ. ಕಾರ್ಮಿಕರು ಲಾರಿಯ ಮೇಲೆ ಏರಿ ಕುಳಿತಿದ್ದು ಚಾಲಕ ಕೂಡಲೇ ಲಾರಿ ಚಲಾಯಿಸಿದ್ದಾನೆ. ಕಾಡಾನೆಯು ಲಾರಿಯನ್ನು ಅಲ್ಪದೂರ ಬೆನ್ನಟ್ಟಿ, ವಾಪಸಾಗಿದೆ.
ಈ ಭಾಗದಲ್ಲಿ ಕಾಡಾನೆ ಹಾವಳಿಯಿಂದ ಸ್ಥಳೀಯರು, ಕಾರ್ಮಿಕರು, ರೈತರು ಕಂಗಾಲಾಗಿದ್ದಾರೆ.