ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಮೂಲಕ ಹೊರ ಬರಲು ಆನೆಗೆ ದಾರಿ ಮಾಡಿದರು. ನಂತರ, ಆನೆಯು ಕೆರೆಯಿಂದ ಹೊರಕ್ಕೆ ಬಂದಿತು. ಗಾಬರಿಯಿಂದ ಓಡುವಾಗ ನಿಲ್ಲಿಸಿದ್ದ ಜೀಪಿನ ಮೇಲೆ ಆನೆ ದಾಳಿ ನಡೆಸಿದೆ. ಇದರಿಂದ ವಾಹನಕ್ಕೆ ಅಲ್ಪಪ್ರಮಾಣದ ಹಾನಿಯಾಗಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಸಿಎಫ್ ಶರಣ ಬಸಪ್ಪ, ‘ಅರಣ್ಯ ಇಲಾಖೆಯ ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆನೆಯನ್ನು ರಕ್ಷಿಸಿದ್ದಾರೆ’ ಎಂದು ಹೇಳಿದರು.