ರಸ್ತೆಗಳಲ್ಲಿ ಬುಧವಾರ ಸಂಜೆ ಗೋಣಿಕೊಪ್ಪಲಿನಿಂದ ಬಾಳೆಲೆಗೆ ಹೊರಟಿದ್ದ ವ್ಯಕ್ತಿಯೊಬ್ಬರು, ಮಾಯಮುಡಿ ಬಳಿ ದಿಢೀರನೆ ಎದುರಾದ ಆನೆಗಳ ಹಿಂಡನ್ನು ಕಂಡು ಭಯಭೀತರಾಗಿದ್ದಾರೆ. ತೋಟದ ಮಾಲೀಕರು ಪಟಾಕಿ ಸಿಡಿಸಿದಾಗ ಮರಿಗಳಿಂದ ಕೂಡಿದ ಆನೆಗಳ ಹಿಂಡು ಕಾಫಿ ತೋಟದಿಂದ ರಸ್ತೆ ದಾಟಿ ಮತ್ತೊಂದು ತೋಟಕ್ಕೆ ಲೆಗ್ಗೆಯಿಟ್ಟಿವೆ. ಜಿಲ್ಲೆಯ ಅಲ್ಲಲ್ಲಿ ಒಂದು ವಾರದಿಂದ ಈಚೆಗೆ ಕಾಡಾನೆಗಳು ಹಿಂಡು ಹಿಂಡಾಗಿ ಗೋಚರಿಸುತ್ತಿವೆ.