ನಾಗರಹೊಳೆ ಅರಣ್ಯದಲ್ಲಿ ಸಮೃದ್ಧಿಯಾಗಿ ಬೆಳೆದಿದ್ದ ಬಿದಿರು ಒಣಗಿ 10 ವರ್ಷಗಳೇ ಸಂದಿವೆ. ಆದರೆ, ಬಿದಿರು ಮತ್ತೆ ತಲೆ ಎತ್ತಿಲ್ಲ. ಆನೆಗಳ ಪ್ರಮುಖ ಆಹಾರವಾಗಿದ್ದ ಬಿದಿರನ್ನು ಮತ್ತೆ ಬೆಳೆಸಲು ಅರಣ್ಯ ಇಲಾಖೆಯೂ ಆಸಕ್ತಿ ತೋರುತ್ತಿಲ್ಲ. ವಯಸ್ಸಾದ ಬಿದಿರಿಗೆ ಕಟ್ಟೆ ಬಂದು 40 ಇಲ್ಲವೆ 50 ವರ್ಷಗಳಿಗೊಮ್ಮೆ ಒಣಗುವುದು ಸಹಜ. ಹೀಗೆ ಒಣಗಿದ ಬಿದಿರುವ ಮೂರು ವರ್ಷಗಳಲ್ಲಿ ಮತ್ತೆ ಮೊಳೆತು ಎಂದಿನಂತೆ ಬೆಳೆಯುತ್ತಿತ್ತು. ಆದರೆ, ಈಗ ಆ ರೀತಿ ಆಗುತ್ತಿಲ್ಲ. ಬಿದಿರು ಬೆಳೆಯದೇ ಇರುವುದರಿಂದ ಆನೆಗಳು ಆಹಾರ ಹುಡುಕಿಕೊಂಡು ಕಾಫಿ ತೋಟಕ್ಕೆ ಬಂದು ಬಲಿಯಾಗುತ್ತಿವೆ. ಇವುಗಳ ರಕ್ಷಣೆಗೆ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪ ಪರಿಸರ ಪ್ರಿಯರದು.