ಇವರು ಇತರೆ ಮೂವರು ಸಿಬ್ಬಂದಿಯೊಂದಿಗೆ ಬೆಳಿಗ್ಗೆಯಿಂದಲೇ ಗಸ್ತು ಕಾರ್ಯ ಆರಂಭಿಸಿದ್ದರು. ನಿಗದಿತ ಗಸ್ತು ಪೂರೈಸುವಷ್ಟರಲ್ಲಿ ಕತ್ತಲಾಗಿ ದಾರಿ ತಪ್ಪಿದ್ದಾರೆ. ಜತೆಯಲ್ಲಿ ತಂದಿದ್ದ ನೀರೂ ಮುಗಿದು, ಬಂಡೆಯ ನಡುವೆ ಹರಿಯು ತ್ತಿದ್ದ ಝರಿಯಲ್ಲಿ ನೀರು ಕುಡಿಯಲು ಯತ್ನಿಸಿದ್ದಾರೆ. ಆದರೆ, ಕಾಲು ಜಾರಿ ಬಂಡೆಯ ಕೆಳಗೆ ತೂರಿ ರಕ್ಷಿಸುವಂತೆ ಕೂಗಿಕೊಂಡಿದ್ದಾರೆ. ಇಬ್ಬರು ಸಿಬ್ಬಂದಿ ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಜಲಪಾತದಂತಿದ್ದ ಪ್ರಪಾತಕ್ಕೆ ಚಿಣ್ಣಪ್ಪ ಬಿದ್ದು ಸ್ಥಳದಲ್ಲೇ ಮೃತಪಟ್ಟರು.