ಮಾವಿನ ಹೂವು ಉದುರಿದ್ದು, ಎಲೆಕೋಸು, ಸೋರೆಕಾಯಿ, ಸೌತೆ, ಮೆಣಸಿನಕಾಯಿ ಬೆಳೆಗಳಿಗೆ ಹಾನಿಯಾಗಿದೆ. ಕೊಡಗು, ಹಾಸನ, ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಬಿರುಸಿನ ಆಲಿಕಲ್ಲು ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಆಲಿಕಲ್ಲು ಹೊಡೆತಕ್ಕೆ ಕಾಫಿ, ಬಾಳೆ, ಕಾಳು ಮೆಣಸಿನ ಬಳ್ಳಿ, ಹಸಿರು ಮೆಣಸಿನ ಕಾಯಿಗೆ ಅಪಾರ ಹಾನಿಯಾಗಿದೆ.