ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತರಿ ನಮ್ಮೆ: ಧ್ಯಾನಲಕ್ಷ್ಮಿ ಮೆರವಣಿಗೆ

ಕೊಡವ ನ್ಯಾಷನಲ್ ಕೌನ್ಸಿಲ್‌ನಿಂದ 26ನೇ ವರ್ಷದ ಆಚರಣೆ
Last Updated 11 ಡಿಸೆಂಬರ್ 2019, 12:51 IST
ಅಕ್ಷರ ಗಾತ್ರ

ಕುಶಾಲನಗರ: ಕೊಡಗಿನ ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ಹುತ್ತರಿ ಅಂಗವಾಗಿ ಬುಧವಾರ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ26ನೇ ಸಾರ್ವತ್ರಿಕ ಪುತ್ತರಿ ನಮ್ಮೆಯನ್ನು ಸಮೀಪದ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಸಿ.ಎನ್.ಸಿ. ಮುಖ್ಯಸ್ಥ ಎನ್.ಯು.ನಾಚಪ್ಪ ನೇತೃತ್ವದಲ್ಲಿ ಸಂಘಟನೆಯ ಕಾರ್ಯಕರ್ತರು ಕೊಡವರ ಸಂಪ್ರಾದಾಯಿಕ ಉಡುಗೆ ತೊಡುಗೆ ಧರಿಸಿ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಗ್ರಾಮದ ನಂದಿನೆರವಂಡ ಉತ್ತಪ್ಪನವರ ಭತ್ತದ ಗದ್ದೆಯಲ್ಲಿ ಸಾಮೂಹಿಕವಾಗಿ ಕದಿರು ತೆಗೆಯುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಮೊದಲಿಗೆ ಮನೆಯಲ್ಲಿ ನೆಲ್ಲಕ್ಕಿಯಡಿಯಲ್ಲಿ ಗುರುಕಾರೋಣರು ಮತ್ತು ದೇವರಿಗೆ ಭಕ್ತಿಪೂರ್ವಕ ಪೂಜೆ ಸಲ್ಲಿಸಿ 5 ಬಗೆಯ ಮರದ ಸೊಪ್ಪುಗಳಾದ ಅರಳಿ, ಮಾವು, ಹಲಸು, ಕುಂಬಳಿ ಹಾಗೂ ಗೇರು ಮರಗಳ ಎಲೆಗಳಿಂದ ನೆರೆಕಟ್ಟುವ ವಿಧಿವಿಧಾನ ನೆರವೇರಿಸಿದರು. ನಂತರ ಸಿದ್ಧಪಡಿಸಲಾದ ಕುತ್ತಿಯನ್ನು ತೋಕ್-ಕತ್ತಿ, ದುಡಿಕೊಟ್ಟ್ ಪಾಟ್ ತಳಿಯತಕ್ಕಿ ಹಾಗೂ ಒಡ್ಡೋಲಗದೊಂದಿಗೆ ಗದ್ದೆಗೆ ತೆರಳಲಾಯಿತು.

ಮೊದಲಿಗೆ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಉತ್ತಪ್ಪ ಅವರ ಗದ್ದೆಯಲ್ಲಿ ಪೂಜೆ ಸಲ್ಲಿಸಿ ಕದಿರು ತೆಗೆಯಲಾಯಿತು. ಈ ಸಂದರ್ಭ ಎಲ್ಲರೂ ಪೊಲಿ ಪೊಲಿ ದೇವಾ ಪೊಲಿಯೋ ಬಾ ದೇವ ಎಂಬ ಘೋಷಣೆ ಮೊಳಗಿಸುತ್ತ ದೇವರನ್ನು ಪ್ರಾರ್ಥಿಸಿದರು.

ನಂತರ ಧಾನ್ಯಲಕ್ಷ್ಮಿಯನ್ನು ಮೆರವಣಿಗೆ ಮೂಲಕ ತಂದು ಒಕ್ಕಲು ಕಣದ ಬೋಟಿಯ ಸುತ್ತ ಕದಿರನ್ನು ಇಟ್ಟು ಪೂಜೆ ಸಲ್ಲಿಸಿದರು.

ಈ ಸಂದರ್ಭ ಸಿಎನ್‌ಸಿ ಕಾರ್ಯಕರ್ತರು ಪ್ರದರ್ಶಿಸಿದ ಸಂಪ್ರಾದಾಯಿಕ ನೃತ್ಯಗಳಾದ ಕೋಲಾಟ, ಪರೆಯ ಕಳಿ, ಚೌಕಾಟದಂತಹ ವಿವಿಧ ಕಾರ್ಯಕ್ರಮಗಳು ಹಬ್ಬಕ್ಕೆ ಮೆರಗು ನೀಡಿದವು. ನಂತರ ಎಲ್ಲರೂ ಕೊಡವ ಸಂಪ್ರಾದಾಯಿಕ ತಾಳಕ್ಕೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು.

ಮನೆಯಲ್ಲಿ ಹೊಸ ಅಕ್ಕಿ ಪಾಯಸ , ಹಬ್ಬದ ವಿಶೇಷ ತೊಂಬಿಟ್ಟು, ಅಡಿಕೆಹಿಟ್ಟು, ಕಡುಬು, ಪಾಯಸ, ಪಂದಿಕರಿ ಮತ್ತಿತರ ಭಕ್ಷ್ಯಗಳನ್ನು ತಯಾರಿಸಿ ಎಲ್ಲರೂ ಒಟ್ಟಾಗಿ ಸವಿದರು.

ಕಲಿಯಂಡ ಪ್ರಕಾಶ್, ಪುಲ್ಲೇರ ಕಾಳಪ್ಪ, ಪುಲ್ಲೆರ ಸ್ವಾತಿ, ನಂದಿನೆರವಂಡ ಉತ್ತಪ್ಪ, ನಂದಿನೆರವಂಡ ವಿಜು, ರೇಖಾ, ನಿಶಾ, ಬೀನಾ, ಬಬ್ಬು , ಅಪ್ಪಣ್ಣ, ಬೋಪಣ್ಣ, ಅಪ್ಪಯ್ಯ, ಚೊಂದು, ದಿನೇಶ್, ಸುಮಿ, ಕೀರ್ತನ್ , ದಿನೇಶ್, ಪುಲ್ಲೇರ ಧನುಷ್, ಪೊನ್ನಣ್ಣ, ಶಿವಾನಿ, ಬೋಪಯ್ಯ, ಮಲ್ಲೆರ ಕನ್ನಿಕೆ, ಕಲಿಯಂಡ ಮೀನಾ ಪ್ರಕಾಶ್, ಬೇಪಡಿಯಂಡ ದಿನು, ಚಂಬಂಡ ಜನತ್, ಅರೆಯಡ ಗಿರೀಶ್, ಸವಿತಾ, ಪಾಸುರ ರಾಜ, ರಜನಿ, ಹಟ್ಟಿಮನೆ ಗಣೇಶ್, ಐಲಪಂಡ ಮಿಟ್ಟು, ಚಂಡಿರ ರಾಜ, ಕಾಂಡಾರಾ ಸುರೇಶ್, ಕಿರಿಯಾ ಮಾಡ ಶೆರಿನ್, ಕಲಿಯಂಡ ಸಂದೇಶ್, ಕಲಿಯಂಡ ಶಾನ್ ಸುಬ್ಬಯ್ಯ, ಅಪ್ಪಟ್ಟಿರ ರೀನಾಣಯ್ಯ, ಬೊಟ್ಟಂಗಡ ಗಿರೀಶ್ , ಬೇಪಡಿಯಂಡ ಬಿದ್ದಪ್ಪ, ಹಂಚಟ್ಟಿರ ಶಾಂತಿ, ಪೊನ್ನಪ್ಪ, ಮಾಚಿಮಾಂಡ ಮೊಣ್ಣಪ್ಪ, ರುಕ್ಕು, ಕಲಿಯಂಡ ಕೃಪ, ಮೀಲನಾ, ರೀತು, ರೋಷನ್, ಮಣವಟ್ಟಿರ ಮುತ್ತಕ್ಕಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT