<p><strong>ಕುಶಾಲನಗರ:</strong> ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸುವುದು ನಿಶ್ಚಿತ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.</p>.<p>ಪಟ್ಟಣಕ್ಕೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬುಧವಾರ ಅವರು ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.</p>.<p>‘ಎರಡೂ ವಿಧಾನಸಭಾ ಕ್ಷೇತ್ರದಲ್ಲೂ ಸರ್ವಸಮ್ಮತ ಅಭ್ಯರ್ಥಿಯನ್ನು ಅತಿ ಶೀಘ್ರದಲ್ಲೇ ಘೋಷಿಸಲಾಗುವುದು. ಯಾರೇ ಅಭ್ಯರ್ಥಿಯಾದರೂ ಅವರ ಪರ ಕೆಲಸ ಮಾಡುವುದಾಗಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಗಣೇಶ್ ಸೇರಿದಂತೆ ಎಲ್ಲ ಮುಖಂಡರು ಹೇಳಿದ್ದಾರೆ. ಪಕ್ಷದಲ್ಲಿ ಯಾವುದೇ ಒಡಕಿಲ್ಲ’ ಎಂದರು.</p>.<p>ಕಾಂಗ್ರೆಸ್ನ ಮತಬ್ಯಾಂಕ್ ಅದರ ಕೈ ತಪ್ಪಿದೆ. ಜನರಲ್ಲಿ ನರೇಂದ್ರ ಮೋದಿ ಕುರಿತು ಭ್ರಮ ನಿರಸನವಾಗಿದೆ. ಇದು ಜೆಡಿಎಸ್ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.</p>.<p>‘ಮಸೀದಿ, ದೇಗುಲ ಕಟ್ಟುವುದು ನಮ್ಮ ಕೆಲಸ ಅಲ್ಲ. ಬಡವರ ಮನೆ ಕಟ್ಟುವುದು ನಮ್ಮ ಕೆಲಸ. ಎಲ್ಲರಿಗೂ ಎಲ್ಲ ಕಾಯಿಲೆಗೂ ಉಚಿತ ಚಿಕಿತ್ಸೆ, ಎಲ್ಲರಿಗೂ ಉಚಿತ ಶಿಕ್ಷಣ, ಏರುತ್ತಿರುವ ಬೆಲೆಯನ್ನು ನಿಯಂತ್ರಿಸುವುದು ನಮ್ಮ ಗುರಿ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.</p>.<p>‘ನಮಗೆ ಮೋದಿ ಹೇಳಿದ ಅಚ್ಚೇದಿನ್ ಬೇಡ. ನಮಗೆ ಹಳೆಯ ದಿನಗಳನ್ನು ಅವರು ವಾಪಸ್ ಕೊಟ್ಟರೆ ಸಾಕು. ಈಗ ಪೆಟ್ರೊಲ್ ಬೆಲೆ, ಅಡುಗೆ ಎಣ್ಣೆ, ಅಡುಗೆ ಅನಿಲಗಳ ಬೆಲೆಗಳನ್ನು ಹಿಂದೆ ಇದ್ದಷ್ಟು ಮಾಡಿದರೆ ಸಾಕು’ ಎಂದರು.</p>.<p>ಕನ್ನಡ ನೆಲ, ಜಲ, ಭಾಷೆ ಉಳಿಸಬೇಕು. ಇದಕ್ಕಾಗಿ ರಾಷ್ಟ್ರೀಯ ಪಕ್ಷ ಬಿಟ್ಟು ಜೆಡಿಎಸ್ನ್ನು ಜನರು ಬೆಂಬಲಿಸುವ ವಿಶ್ವಾಸ ಇದೆ ಎಂದು ಹೇಳಿದರು.</p>.<p>ಜಿಎಸ್ಟಿ ಹೇರಿಕೆಯಿಂದ ವ್ಯಾಪಾರ ಇಲ್ಲ, ಲಾಭವೂ ಇಲ್ಲ. ಮಸಾಲೆದೋಸೆಗೂ ಜಿಎಸ್ಟಿ ಹಾಕಲಾಗಿದೆ. ಎಸಿ ಒಳಗೆ ಒಂದು ಹೊರಗೆ ಮತ್ತೊಂದು. ನಿಜಕ್ಕೂ ಬಡವರ ಸ್ಥಿತಿ ಶೋಚನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಮಂಗಳೂರಿನಲ್ಲಿ ಅಮಾಯಕರು ಸಾಯುತ್ತಿದ್ದಾರೆ, ಕಾಶ್ಮೀರದಲ್ಲೂ ನಿರಂತರ ಸಾವು ನೋವು ಸಂಭವಿಸುತ್ತಿದೆ. ಮುಸ್ಲಿಮರು ಸತ್ತಾಗ ಅವರ ಮನೆಗೆ ಬಿಜೆಪಿಯವರು ಹೋಗುವುದಿಲ್ಲ. ಎಲ್ಲರೂ ಇಂತಿಂಥ ಜಾತಿಯಲ್ಲೇ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಬಂದಿರುತ್ತೇವಾ’ ಎಂದು ಪ್ರಶ್ನಿಸಿದ ಅವರು, ‘ನಮ್ಮದು ಮಾನವಧರ್ಮ’ ಎಂದು ಪ್ರತಿಪಾದಿಸಿದರು.</p>.<p>ಒಂದು ವೇಳೆ ಬಿಜೆಪಿಯವರಿಗೆ ನೈತಿಕತೆ ಇದ್ದರೆ ಪೆಟ್ರೋಲ್ ದರವನ್ನು ಲೀಟರ್ಗೆ ₹ 50ಕ್ಕೆ ಇಳಿಸಲಿ ನೋಡೋಣ ಎಂದೂ ಸವಾಲೆಸೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಶಾಲನಗರ:</strong> ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸುವುದು ನಿಶ್ಚಿತ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.</p>.<p>ಪಟ್ಟಣಕ್ಕೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬುಧವಾರ ಅವರು ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.</p>.<p>‘ಎರಡೂ ವಿಧಾನಸಭಾ ಕ್ಷೇತ್ರದಲ್ಲೂ ಸರ್ವಸಮ್ಮತ ಅಭ್ಯರ್ಥಿಯನ್ನು ಅತಿ ಶೀಘ್ರದಲ್ಲೇ ಘೋಷಿಸಲಾಗುವುದು. ಯಾರೇ ಅಭ್ಯರ್ಥಿಯಾದರೂ ಅವರ ಪರ ಕೆಲಸ ಮಾಡುವುದಾಗಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಗಣೇಶ್ ಸೇರಿದಂತೆ ಎಲ್ಲ ಮುಖಂಡರು ಹೇಳಿದ್ದಾರೆ. ಪಕ್ಷದಲ್ಲಿ ಯಾವುದೇ ಒಡಕಿಲ್ಲ’ ಎಂದರು.</p>.<p>ಕಾಂಗ್ರೆಸ್ನ ಮತಬ್ಯಾಂಕ್ ಅದರ ಕೈ ತಪ್ಪಿದೆ. ಜನರಲ್ಲಿ ನರೇಂದ್ರ ಮೋದಿ ಕುರಿತು ಭ್ರಮ ನಿರಸನವಾಗಿದೆ. ಇದು ಜೆಡಿಎಸ್ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.</p>.<p>‘ಮಸೀದಿ, ದೇಗುಲ ಕಟ್ಟುವುದು ನಮ್ಮ ಕೆಲಸ ಅಲ್ಲ. ಬಡವರ ಮನೆ ಕಟ್ಟುವುದು ನಮ್ಮ ಕೆಲಸ. ಎಲ್ಲರಿಗೂ ಎಲ್ಲ ಕಾಯಿಲೆಗೂ ಉಚಿತ ಚಿಕಿತ್ಸೆ, ಎಲ್ಲರಿಗೂ ಉಚಿತ ಶಿಕ್ಷಣ, ಏರುತ್ತಿರುವ ಬೆಲೆಯನ್ನು ನಿಯಂತ್ರಿಸುವುದು ನಮ್ಮ ಗುರಿ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.</p>.<p>‘ನಮಗೆ ಮೋದಿ ಹೇಳಿದ ಅಚ್ಚೇದಿನ್ ಬೇಡ. ನಮಗೆ ಹಳೆಯ ದಿನಗಳನ್ನು ಅವರು ವಾಪಸ್ ಕೊಟ್ಟರೆ ಸಾಕು. ಈಗ ಪೆಟ್ರೊಲ್ ಬೆಲೆ, ಅಡುಗೆ ಎಣ್ಣೆ, ಅಡುಗೆ ಅನಿಲಗಳ ಬೆಲೆಗಳನ್ನು ಹಿಂದೆ ಇದ್ದಷ್ಟು ಮಾಡಿದರೆ ಸಾಕು’ ಎಂದರು.</p>.<p>ಕನ್ನಡ ನೆಲ, ಜಲ, ಭಾಷೆ ಉಳಿಸಬೇಕು. ಇದಕ್ಕಾಗಿ ರಾಷ್ಟ್ರೀಯ ಪಕ್ಷ ಬಿಟ್ಟು ಜೆಡಿಎಸ್ನ್ನು ಜನರು ಬೆಂಬಲಿಸುವ ವಿಶ್ವಾಸ ಇದೆ ಎಂದು ಹೇಳಿದರು.</p>.<p>ಜಿಎಸ್ಟಿ ಹೇರಿಕೆಯಿಂದ ವ್ಯಾಪಾರ ಇಲ್ಲ, ಲಾಭವೂ ಇಲ್ಲ. ಮಸಾಲೆದೋಸೆಗೂ ಜಿಎಸ್ಟಿ ಹಾಕಲಾಗಿದೆ. ಎಸಿ ಒಳಗೆ ಒಂದು ಹೊರಗೆ ಮತ್ತೊಂದು. ನಿಜಕ್ಕೂ ಬಡವರ ಸ್ಥಿತಿ ಶೋಚನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಮಂಗಳೂರಿನಲ್ಲಿ ಅಮಾಯಕರು ಸಾಯುತ್ತಿದ್ದಾರೆ, ಕಾಶ್ಮೀರದಲ್ಲೂ ನಿರಂತರ ಸಾವು ನೋವು ಸಂಭವಿಸುತ್ತಿದೆ. ಮುಸ್ಲಿಮರು ಸತ್ತಾಗ ಅವರ ಮನೆಗೆ ಬಿಜೆಪಿಯವರು ಹೋಗುವುದಿಲ್ಲ. ಎಲ್ಲರೂ ಇಂತಿಂಥ ಜಾತಿಯಲ್ಲೇ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಬಂದಿರುತ್ತೇವಾ’ ಎಂದು ಪ್ರಶ್ನಿಸಿದ ಅವರು, ‘ನಮ್ಮದು ಮಾನವಧರ್ಮ’ ಎಂದು ಪ್ರತಿಪಾದಿಸಿದರು.</p>.<p>ಒಂದು ವೇಳೆ ಬಿಜೆಪಿಯವರಿಗೆ ನೈತಿಕತೆ ಇದ್ದರೆ ಪೆಟ್ರೋಲ್ ದರವನ್ನು ಲೀಟರ್ಗೆ ₹ 50ಕ್ಕೆ ಇಳಿಸಲಿ ನೋಡೋಣ ಎಂದೂ ಸವಾಲೆಸೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>