ನಿಯಮ ಉಲ್ಲಂಘನೆ ಮಾಡುವ, ಅತಿ ಹೆಚ್ಚಿನ ದರ ತೆಗೆದುಕೊಳ್ಳುವುದು ಹಾಗೂ ಅತಿವೇಗದಿಂದ ಚಾಲನೆ ಮಾಡುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಯಾರು ಅತಿವೇಗದಲ್ಲಿ ಚಾಲನೆ ಮಾಡುತ್ತಾರೋ, ನಿಯಮ ಮೀರಿ ದುಪ್ಪಟ್ಟು ದರ ಪಡೆಯುತ್ತಾರೋ, ನಿಯಮಗಳನ್ನು ಉಲ್ಲಂಘಿಸುತ್ತಾರೋ ಅವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ಆದರೆ, ನಿಯಮ ಪಾಲಿಸುವ ಬಡ ಚಾಲಕರ ಮೇಲೆ ಕ್ರಮ ಏಕೆ’ ಎಂದು ಪ್ರಶ್ನಿಸಿದರು.