ಸ್ಥಳಕ್ಕೆ ತೆರಳಿದ್ದ ಗ್ರಾಮಲೆಕ್ಕಿಗ ರಮೇಶ್ ಪ್ರತಿಕ್ರಿಯಿಸಿ, ‘ಗುಡ್ಡದ ಪಾರ್ಶ್ವ ಕುಸಿದಿರುವ ಸ್ಥಳವನ್ನು ತಲುಪಲಾಗುತ್ತಿಲ್ಲ. ವಿಪರೀತ ಜಿಗಣೆಗಳು, ಕೆಸರು ತುಂಬಿಕೊಂಡಿದೆ. ಸದ್ಯ, ಕೆಸರುಮಿಶ್ರಿತ ನೀರು ಹರಿಯುವುದು ಕಡಿಮೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಗುಡ್ಡದ ಕೆಳಭಾಗದಲ್ಲಿದ್ದ ಎರಡು ಕುಟುಂಬದ ಸದಸ್ಯರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ’ ಎಂದು ತಿಳಿಸಿದರು.