‘ದಕ್ಷಿಣದ ಕಾಶ್ಮೀರ’ ಎಂದು ಸ್ಕಾಟ್ಲ್ಯಾಂಡ್ ಆಫ್ ಇಂಡಿಯಾ ಎಂದು ಖ್ಯಾತಿವೆತ್ತಿರುವ ಕೊಡಗಿನ ಪಶ್ಚಿಮಘಟ್ಟದ ಬ್ರಹ್ಮಗಿರಿ ತಪ್ಪಲಿನಲ್ಲಿ ಕಾವೇರಿ ನದಿ ಉಗಮಗೊಳ್ಳುತ್ತದೆ. ಇಲ್ಲಿ ತಲಕಾವೇರಿ, ಭಾಗಮಂಡಲದ ಭಗಂಡೇಶ್ವರ ದೇಗುಲ, ಪಾಡಿ ಇಗ್ಗುತ್ತಪ್ಪ ದೇಗುಲಗಳು, ಪುಷ್ಪಗಿರಿ, ತಡಿಯಂಡಮೋಳ್ ಮೊದಲಾದ ಬೆಟ್ಟಸಾಲುಗಳಿದ್ದು, ಅನೇಕ ಜಲಪಾತಗಳು ಕಣ್ಮನ ಸೆಳೆಯುತ್ತಿವೆ ಎಂಬ ಅಂಶವನ್ನು ಪ್ರಧಾನವಾಗಿ ಸ್ತಬ್ದಚಿತ್ರದಲ್ಲಿ ಬಿಂಬಿಸಲಾಗಿತ್ತು. ಘಮಘಮಿಸುವ ಕಾಫಿ, ರುಚಿಕರ ಜೇನು, ಕಿತ್ತಲೆಯ ಸ್ವಾದಿಷ್ಟವನ್ನು ಇದರಲ್ಲಿ ಅಭಿವ್ಯಕ್ತಿಸಲಾಗಿದೆ.