ಸೆಮಿಫೈನಲ್ ಪಂದ್ಯಗಳ ನಡುವೆ ಮೈದಾನದಲ್ಲಿ ಮ್ಯಾಜಿಕ್ ಶೋ ನಡೆಯಿತು
ಇಂದು ನಡೆಯಲಿವೆ ರಣರೋಚಕ ಪಂದ್ಯಗಳು ಎರಡೂ ವಿಭಾಗದಲ್ಲಿಯೂ ಫೈನಲ್ ಪಂದ್ಯ 30 ದಿನಗಳ ಕಾಲ ನಡೆದ ಪಂದ್ಯಕ್ಕೆ ಬೀಳಲಿದೆ ತೆರೆ
ಅರಮಣಮಾಡ ಕ್ರಿಕೆಟ್ ಟೂರ್ನಿಗೆ ಇಂದು ತೆರೆ
ಗೋಣಿಕೊಪ್ಪಲು: ಒಂದು ತಿಂಗಳಿನಿಂದ ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಗೆ ಮೇ 19ರಂದು ತೆರೆ ಬೀಳಲಿದೆ. ಏಪ್ರಿಲ್ 22ರಿಂದ ನಿರಂತರವಾಗಿ ನಡೆದ ಟೂರ್ನಿಯಲ್ಲಿ ಮಹಿಳಾ ಮತ್ತು ಪುರುಷ ವಿಭಾಗದಿಂದ ಒಟ್ಟು 313 ತಂಡಗಳು ಸೆಣೆಸಾಡಿದ್ದವು. 19ರಂದು ಬೆಳಿಗ್ಗೆ 10 ಗಂಟೆಗೆ ಮಹಿಳೆಯರ ಮತ್ತು ಪುರುಷರ ವಿಭಾಗದ ಫೈನಲ್ ಪಂದ್ಯಗಳು ನಡೆಯಲಿವೆ. ಸಂಜೆ 3 ಗಂಟೆಗೆ ವಿಜೇತ ತಂಡಗಳಿಗೆ ಬಹುಮಾನ ವಿತರಣ ಸಮಾರಂಭ ಜರುಗಲಿದೆ. ಅರಮಣಮಾಡ ಕ್ರಿಕೆಟ್ ಟೂರ್ನಿಯ ಅಧ್ಯಕ್ಷ ಅರಮಣಮಾಡ ಕೆ.ಸುರೇಶ್ ಅಧ್ಯಕ್ಷತೆ ವಹಿಸಲಿದ್ದು ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಶಾಸಕ ಎ.ಎಸ್.ಪೊನ್ನಣ್ಣ ದಾನಿ ಕೋಣೆರಿರ ಆದಿತ್ಯ ಉತ್ತಪ್ಪ ಪಾಲ್ಗೊಳ್ಳಲಿದ್ದಾರೆ. ಮೈಸೂರು ಕೊಡಗು ವಿಧಾನ ಸಭಾ ಕ್ಷೇತ್ರದ ಸಂಸದ ಪ್ರತಾಪ ಸಿಂಹ ಫೈನಲ್ ಪಂದ್ಯ ಉದ್ಘಾಟಿಸಲಿದ್ದಾರೆ. ಪದ್ಮಶ್ರೀ ಪುರಸ್ಕೃತ ಹಿರಿಯ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಒಲಂಪಿಯನ್ ಅಶ್ವಿನಿ ನಾಚಪ್ಪ ಪತ್ರಕರ್ತ ಚೇರಂಡ ಕಿಶಾನ್ ಮಾದಪ್ಪ ಮೈಸೂರಿನ ಸೈಕಲ್ ಬ್ರಾಂಡ್ ಅಗರ್ ಬತ್ತಿ ಉದ್ಯಮಿ ಅರ್ಜುನ್ ರಂಗ ವೈದ್ಯ ಮಾಪಂಗಡ ಬೆಳ್ಳಿಯಪ್ಪ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರಘುರಾಮ್ ಭಟ್ ಅವರನ್ನು ಸನ್ಮಾನಿಸಲಾಗುತ್ತದೆ. ಸಂಜೆ 6.30ಕ್ಕೆ ಕೊಡವ ಸಂಗೀತ ಮತ್ತು ಡಿಜೆ ನೃತ್ ಆಯೋಜಿಸಲಾಗಿದೆ.