ಮಡಿಕೇರಿ: ಇಲ್ಲಿನ ರಾಜಾಸೀಟ್ ಉದ್ಯಾನದಲ್ಲಿ ರಥಸಪ್ತಮಿ ಅಂಗವಾಗಿ ಶುಕ್ರವಾರ ಸೂರ್ಯ ನಮಸ್ಕಾರ ನಡೆಯಿತು.
ಯೋಗಭಾರತಿ, ವಿದ್ಯಾಭವನ, ಪ್ರಣವಯೋಗ ಕೇಂದ್ರ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಬಾಲಭವನ ಮಾರ್ನಿಂಗ್ಸ್ ಸ್ಟಾರ್ಸ್ ವತಿಯಿಂದ ಇಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಆಯೋಜನೆಗೊಂಡಿತ್ತು.
ಯೋಗ ಶಿಕ್ಷಕ ಕೆ.ಕೆ. ಮಹೇಶ್ ಕುಮಾರ್ ಸೂರ್ಯ ನಮಸ್ಕಾರ ಬೋಧಿಸಿದರು.