<p><strong>ಮಡಿಕೇರಿ:</strong> ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿ ಹಲವು ವರ್ಷಗಳ ನಂತರ ಮತ್ತೆ ಶಂಕಿತ ನಕ್ಸಲರ ಚಲನವಲನಗಳು ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ, ಇದುವರೆಗೂ ನಕ್ಸಲರ ಓಡಾಟದ ಕುರಿತು ಅಧಿಕೃತವಾದ ಮಾಹಿತಿ ಲಭಿಸಿಲ್ಲ. ಜಿಲ್ಲಾ ಪೊಲೀಸರು ಕಟ್ಟೆಚ್ಚರದಿಂದಿದ್ದು, ಎಲ್ಲೆಡೆ ತೀವ್ರ ನಿಗಾ ಇರಿಸಿದ್ದಾರೆ.</p>.<p>ವಿಚಿತ್ರ ಎಂದರೆ, ಕಳೆದ ಲೋಕಸಭಾ ಚುನಾವಣೆಗೂ ಮುನ್ನ ನಕ್ಸಲರ ಹೆಜ್ಜೆ ಗುರುತುಗಳು ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದವು. ನಾಪೋಕ್ಲು ಸಮೀಪದ ಯವಕಪಾಡಿ ಗ್ರಾಮಕ್ಕೆ 2019 ಏಪ್ರಿಲ್ ತಿಂಗಳಿನಲ್ಲಿ ಬಂದಿದ್ದ ಪುರುಷ ಹಾಗೂ ಮಹಿಳೆ ಮನೆಯೊಂದಕ್ಕೆ ನುಗ್ಗಿ ಅಕ್ಕಿಯನ್ನೂ ಕೊಂಡೊಯ್ದಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದರು. ಈ ಸುಳಿವಿನ ಆಧಾರದ ಮೇಲೆ ಆಗಲೂ ಈ ಭಾಗದಲ್ಲಿ ಸಾಕಷ್ಟು ಶೋಧ ಕಾರ್ಯ ಮಾಡಲಾಗಿತ್ತು. ಆದರೆ, ನಕ್ಸಲರ ಸುಳಿವು ಸಿಕ್ಕಿರಲಿಲ್ಲ. ಮತ್ತೆ ಈ ಬಾರಿ ಲೋಕಸಭಾ ಚುನಾವಣೆಯ ವೇಳೆ ಅದೇ ರೀತಿಯ ಘಟನೆ ನಡೆದಿದೆ.</p>.<p>ತಾಲ್ಲೂಕಿನ ಕಡಮಕಲ್ಲು ಸಮೀಪದ ಕೂಜಿಮಲೆ ಎಂಬಲ್ಲಿ ರಾಮಲಿಂಗಂ ಎನ್ನುವವರ ಅಂಗಡಿಗೆ ಶನಿವಾರ ರಾತ್ರಿ ಬಂದ ನಾಲ್ವರು ಅಪರಿಚಿತರು ₹ 3,192ಕ್ಕೆ ದಿನಸಿ ಖರೀದಿಸಿ ಹೊರಟ ಸುದ್ದಿ ಹರಡುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ನಕ್ಸಲ್ ನಿಗ್ರಹ ಪಡೆಯ ಯೋಧರು ಧಾವಿಸಿ ಕೂಂಬಿಂಗ್ ಆರಂಭಿಸಿದ್ದರೂ ಸ್ಥಳೀಯರಲ್ಲಿ ಆತಂಕ ದೂರವಾಗಿಲ್ಲ.</p>.<p>ಕಡಮಕಲ್ಲು, ಕೂಜಿಮಲೆ ಪ್ರದೇಶಗಳು ಮಡಿಕೇರಿಗೆ ಕೂಗಳತೆ ದೂರದಲ್ಲಿರುವ ಗಾಳಿಬೀಡು ಗ್ರಾಮ ಪಂಚಾಯಿತಿಗೆ ಸೇರುತ್ತವೆ. ಕಾಡಿನೊಳಗಿನ ಹಾದಿಯಲ್ಲಿ ಈ ಪ್ರದೇಶಗಳು ಹತ್ತಿರ ಇದೆ. ಆದರೆ, ರಸ್ತೆಯಲ್ಲಿ ವಾಹನದಲ್ಲಿ ಹೋಗಬೇಕಾದರೆ ಬರೋಬರಿ 80 ಕಿ.ಮೀಗೂ ಅಧಿಕವಾಗುತ್ತವೆ.</p>.<p>ಕಡಮಕಲ್ ಮೂಲಕವಾಗಿ ಕಾಡಿನೊಳಗೆ ಮಡಿಕೇರಿಗೆ ಸಮೀಪ ಇರುವ ವಣಚಲು, ಗಾಳಿಬೀಡು, ಕಾಲೂರು ಗ್ರಾಮಗಳು ಸಮೀಪ ಇವೆ. ಹೀಗಾಗಿ, ಈ ಭಾಗದಲ್ಲಿ ಆತಂಕ ಇನ್ನಷ್ಟು ಅಧಿಕವಾಗಿದೆ.</p>.<p><strong>ಕಾರ್ಯಾಚರಣೆ ಹೇಗಿದೆ?</strong></p>.<p>ನಕ್ಸಲ್ ನಿಗ್ರಹ ಪಡೆಯು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, 5 ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದೆ. ಪುಷ್ಪಗಿರಿ ವನ್ಯಜೀವಿ ವಲಯಾದ್ಯಂತ ಬಿರುಸಿನ ಕೂಂಬಿಂಗ್ ನಡೆಸಿವೆ. ಒಂದು ತಂಡ ಸುಬ್ರಹ್ಮಣ್ಯ ಭಾಗದಿಂದಲೂ ಕೂಂಬಿಂಗ್ ನಡೆಸಿವೆ. ಭಾಗಮಂಡಲ ಭಾಗದಲ್ಲೂ ಹುಡುಕಾಟ ನಡೆದಿದೆ. ಆದರೆ, ನಕ್ಸಲರ ಸುಳಿವು ಮಾತ್ರ ಪತ್ತೆಯಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿ ಹಲವು ವರ್ಷಗಳ ನಂತರ ಮತ್ತೆ ಶಂಕಿತ ನಕ್ಸಲರ ಚಲನವಲನಗಳು ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ, ಇದುವರೆಗೂ ನಕ್ಸಲರ ಓಡಾಟದ ಕುರಿತು ಅಧಿಕೃತವಾದ ಮಾಹಿತಿ ಲಭಿಸಿಲ್ಲ. ಜಿಲ್ಲಾ ಪೊಲೀಸರು ಕಟ್ಟೆಚ್ಚರದಿಂದಿದ್ದು, ಎಲ್ಲೆಡೆ ತೀವ್ರ ನಿಗಾ ಇರಿಸಿದ್ದಾರೆ.</p>.<p>ವಿಚಿತ್ರ ಎಂದರೆ, ಕಳೆದ ಲೋಕಸಭಾ ಚುನಾವಣೆಗೂ ಮುನ್ನ ನಕ್ಸಲರ ಹೆಜ್ಜೆ ಗುರುತುಗಳು ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದವು. ನಾಪೋಕ್ಲು ಸಮೀಪದ ಯವಕಪಾಡಿ ಗ್ರಾಮಕ್ಕೆ 2019 ಏಪ್ರಿಲ್ ತಿಂಗಳಿನಲ್ಲಿ ಬಂದಿದ್ದ ಪುರುಷ ಹಾಗೂ ಮಹಿಳೆ ಮನೆಯೊಂದಕ್ಕೆ ನುಗ್ಗಿ ಅಕ್ಕಿಯನ್ನೂ ಕೊಂಡೊಯ್ದಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದರು. ಈ ಸುಳಿವಿನ ಆಧಾರದ ಮೇಲೆ ಆಗಲೂ ಈ ಭಾಗದಲ್ಲಿ ಸಾಕಷ್ಟು ಶೋಧ ಕಾರ್ಯ ಮಾಡಲಾಗಿತ್ತು. ಆದರೆ, ನಕ್ಸಲರ ಸುಳಿವು ಸಿಕ್ಕಿರಲಿಲ್ಲ. ಮತ್ತೆ ಈ ಬಾರಿ ಲೋಕಸಭಾ ಚುನಾವಣೆಯ ವೇಳೆ ಅದೇ ರೀತಿಯ ಘಟನೆ ನಡೆದಿದೆ.</p>.<p>ತಾಲ್ಲೂಕಿನ ಕಡಮಕಲ್ಲು ಸಮೀಪದ ಕೂಜಿಮಲೆ ಎಂಬಲ್ಲಿ ರಾಮಲಿಂಗಂ ಎನ್ನುವವರ ಅಂಗಡಿಗೆ ಶನಿವಾರ ರಾತ್ರಿ ಬಂದ ನಾಲ್ವರು ಅಪರಿಚಿತರು ₹ 3,192ಕ್ಕೆ ದಿನಸಿ ಖರೀದಿಸಿ ಹೊರಟ ಸುದ್ದಿ ಹರಡುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ನಕ್ಸಲ್ ನಿಗ್ರಹ ಪಡೆಯ ಯೋಧರು ಧಾವಿಸಿ ಕೂಂಬಿಂಗ್ ಆರಂಭಿಸಿದ್ದರೂ ಸ್ಥಳೀಯರಲ್ಲಿ ಆತಂಕ ದೂರವಾಗಿಲ್ಲ.</p>.<p>ಕಡಮಕಲ್ಲು, ಕೂಜಿಮಲೆ ಪ್ರದೇಶಗಳು ಮಡಿಕೇರಿಗೆ ಕೂಗಳತೆ ದೂರದಲ್ಲಿರುವ ಗಾಳಿಬೀಡು ಗ್ರಾಮ ಪಂಚಾಯಿತಿಗೆ ಸೇರುತ್ತವೆ. ಕಾಡಿನೊಳಗಿನ ಹಾದಿಯಲ್ಲಿ ಈ ಪ್ರದೇಶಗಳು ಹತ್ತಿರ ಇದೆ. ಆದರೆ, ರಸ್ತೆಯಲ್ಲಿ ವಾಹನದಲ್ಲಿ ಹೋಗಬೇಕಾದರೆ ಬರೋಬರಿ 80 ಕಿ.ಮೀಗೂ ಅಧಿಕವಾಗುತ್ತವೆ.</p>.<p>ಕಡಮಕಲ್ ಮೂಲಕವಾಗಿ ಕಾಡಿನೊಳಗೆ ಮಡಿಕೇರಿಗೆ ಸಮೀಪ ಇರುವ ವಣಚಲು, ಗಾಳಿಬೀಡು, ಕಾಲೂರು ಗ್ರಾಮಗಳು ಸಮೀಪ ಇವೆ. ಹೀಗಾಗಿ, ಈ ಭಾಗದಲ್ಲಿ ಆತಂಕ ಇನ್ನಷ್ಟು ಅಧಿಕವಾಗಿದೆ.</p>.<p><strong>ಕಾರ್ಯಾಚರಣೆ ಹೇಗಿದೆ?</strong></p>.<p>ನಕ್ಸಲ್ ನಿಗ್ರಹ ಪಡೆಯು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, 5 ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದೆ. ಪುಷ್ಪಗಿರಿ ವನ್ಯಜೀವಿ ವಲಯಾದ್ಯಂತ ಬಿರುಸಿನ ಕೂಂಬಿಂಗ್ ನಡೆಸಿವೆ. ಒಂದು ತಂಡ ಸುಬ್ರಹ್ಮಣ್ಯ ಭಾಗದಿಂದಲೂ ಕೂಂಬಿಂಗ್ ನಡೆಸಿವೆ. ಭಾಗಮಂಡಲ ಭಾಗದಲ್ಲೂ ಹುಡುಕಾಟ ನಡೆದಿದೆ. ಆದರೆ, ನಕ್ಸಲರ ಸುಳಿವು ಮಾತ್ರ ಪತ್ತೆಯಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>