ಭೂಕುಸಿತದಿಂದ ಮಡಿಕೇರಿಯಿಂದ ತಾಲತ್ತಮನೆ ಮಾರ್ಗವಾಗಿ ಭಾಗ ಮಂಡಲ, ನಾಪೋಕ್ಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿ 20 ದಿನ ಕಳೆದಿದೆ. ಖಾಸಗಿ ಬಸ್ಗಳ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಇನ್ನು ಮೇಕೇರಿ ಮಾರ್ಗವಾಗಿ ಬದಲಿ ಮಾರ್ಗದಲ್ಲಿ ಮಿನಿ ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸುತ್ತಿವೆ. ಆದರೆ, ಖಾಸಗಿ ಬಸ್ಗಳಿಗೆ ಸಂಚಾರಕ್ಕೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಹೀಗಾಗಿ, ಮತ್ತಷ್ಟು ದಿನಗಳ ಕಾಲ ಬಸ್ ಸೇವೆ ಸಾಧ್ಯವಿಲ್ಲ!