ತಾಳೆ ಕೃಷಿ ಮಾಡುವವರಿಗೆ ತೋಟಗಾರಿಕೆ ಇಲಾಖೆಯು ಪ್ರೋತ್ಸಾಹ ನೀಡುತ್ತದೆ. ಎಕರೆಗೆ ತಾಳೆ ಸಸಿಗೆ ಸಹಾಯಧನ ₹ 8,000, ಮೊದಲ ವರ್ಷ ₹ 2,100, ಎರಡನೇ ವರ್ಷ ₹ 2,100, ಮೂರನೇ ವರ್ಷ ₹ 2,100 ಮೊತ್ತದ ಗೊಬ್ಬರ ನೀಡಲಾಗುತ್ತದೆ. ಕಟ್ಟಿಂಗ್ ಮೆಶಿನ್ಗೆ ಸಹಾಯಧನ ಇದೆ. ಪಂಪ್ಸೆಟ್, ಬೋರ್ವೆಲ್ ತೆಗೆಯಲು ಸಹಾಯಧನ ನೀಡಲಾಗುತ್ತದೆ. ತಾಳೆ ಬೆಳೆಗೆ ಸರ್ಕಾರದಿಂದ ಆಗ್ಗಿಂದಾಗ್ಗೆ ಕನಿಷ್ಠ ಬೆಂಬಲ ಬೆಲೆಯೂ ಘೋಷಣೆ ಆಗುತ್ತದೆ. ಆದ್ದರಿಂದ ರೈತರಿಗೆ ಮಾರುಕಟ್ಟೆ ಅಸ್ಥಿರತೆಯ ಆತಂಕವಿಲ್ಲ ಎನ್ನುತ್ತಾರೆ ಸೋಮವಾರಪೇಟೆ ತಾಲ್ಲೂಕು ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ (ತಾಳೆಬೆಳೆ) ಡಾ.ಮಂಜುನಾಥ್ ಜೆ.ಶೆಟ್ಟಿ.