<p>ಮಡಿಕೇರಿ: ‘ಕೊಯನಾಡಿನ ಪಯಸ್ವಿನಿ ನದಿಗೆ ಸ್ಥಳೀಯರು ಕೇಳಿದ್ದು ಸೇತುವೆಯೇ ಹೊರತು ಕಿಂಡಿ ಅಣೆಕಟ್ಟೆಯಲ್ಲ’ ಎಂದು ಸಂಪಾಜೆ ಬ್ಲಾಕ್ ಕಾಂಗ್ರೆಸ್ ವಕ್ತಾರ ಪಿ.ಎಲ್.ಸುರೇಶ್ ವಾಗ್ದಾಳಿ ನಡೆಸಿದರು.</p>.<p>‘ಜನರ ಬೇಡಿಕೆಯಂತೆ ಸೇತುವೆ ಕಟ್ಟಿದ್ದರೆ ನಿಜಕ್ಕೂ ಅಲ್ಲಿ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಸೇತುವೆಯನ್ನು ಬಿಟ್ಟು ಕಿಂಡಿ ಅಣೆಕಟ್ಟೆ ಕಟ್ಟಿದ್ದರಿಂದಲೇ ಅಲ್ಲಿ ಪ್ರವಾಹ ಉಂಟಾಗುತ್ತಿದೆ’ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.</p>.<p>‘ಪದೇ ಪದೇ ಜನರನ್ನು ಸಂಕಷ್ಟಕ್ಕೆ ದೂಡುತ್ತಿರುವ ಇಂತಹ ಕಿಂಡಿ ಅಣೆಕಟ್ಟೆ ನಮಗೆ ಬೇಡ’ ಎಂದ ಅವರು, ‘ನಮಗೆ ನದಿ ದಾಟಲು ಸೇತುವೆಯಷ್ಟೇ ಸಾಕು’ ಎಂದು ಹೇಳಿದರು.</p>.<p>‘ಈ ಅಣೆಕಟ್ಟೆಯಿಂದ 5 ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿವೆ. ಅವರಿಗೆ ಹೆಚ್ಚಿನ ಪರಿಹಾರ ನೀಡಿಲ್ಲ. ಶಾಶ್ವತವಾದ ಪರಿಹಾರವನ್ನು ಅವರಿಗೆ ನೀಡಬೇಕು’ ಎಂದೂ ಒತ್ತಾಯಿಸಿದರು.</p>.<p>ಕಾಂಗ್ರೆಸ್ನ ಜಿಲ್ಲಾ ಘಟಕದ ಅಧ್ಯಕ್ಷ ಸೂರಜ್ ಹೊಸೂರು ಮಾತನಾಡಿ, ‘ಕಿಂಡಿ ಅಣೆಕಟ್ಟೆ ದೂರದೃಷ್ಟಿ ಇಲ್ಲದ ಯೋಜನೆ. ಕೆಲವೇ ಕಿಲೋಮೀಟರ್ಗಳ ಅಂತರದಲ್ಲಿ 4 ಕಿಂಡಿ ಅಣೆಕಟ್ಟೆಯನ್ನು ಕಟ್ಟಿದ್ದಾದರೂ ಏಕೆ’ ಎಂದು ಪ್ರಶ್ನಿಸಿದರು.</p>.<p>ಪ್ರವಾಹ ಸಂತ್ರಸ್ತ ಲೋಕೇಶ್ ಮಾತನಾಡಿ, ‘ನಮಗೆ ಯೋಗ್ಯವಾದ ಜಾಗದಲ್ಲಿ ಸೂಕ್ತವಾದ ಸ್ಥಳ ನೀಡಿದರೆ ಮಾತ್ರ ತೆರಳುತ್ತೇವೆ. ಇಲ್ಲದಿದ್ದರೆ ನಾವು ಈಗ ಇರುವ ಸ್ಥಳ ಬಿಟ್ಟು ಹೊರಡುವುದಿಲ್ಲ’ ಎಂದರು.</p>.<p>ಮುಖಂಡರಾದ ಹನೀಫ್, ಸಂತ್ರಸ್ತೆ ವೇದಾವತಿ, ನಿತಿನ್ ಇದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಕೇರಿ: ‘ಕೊಯನಾಡಿನ ಪಯಸ್ವಿನಿ ನದಿಗೆ ಸ್ಥಳೀಯರು ಕೇಳಿದ್ದು ಸೇತುವೆಯೇ ಹೊರತು ಕಿಂಡಿ ಅಣೆಕಟ್ಟೆಯಲ್ಲ’ ಎಂದು ಸಂಪಾಜೆ ಬ್ಲಾಕ್ ಕಾಂಗ್ರೆಸ್ ವಕ್ತಾರ ಪಿ.ಎಲ್.ಸುರೇಶ್ ವಾಗ್ದಾಳಿ ನಡೆಸಿದರು.</p>.<p>‘ಜನರ ಬೇಡಿಕೆಯಂತೆ ಸೇತುವೆ ಕಟ್ಟಿದ್ದರೆ ನಿಜಕ್ಕೂ ಅಲ್ಲಿ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಸೇತುವೆಯನ್ನು ಬಿಟ್ಟು ಕಿಂಡಿ ಅಣೆಕಟ್ಟೆ ಕಟ್ಟಿದ್ದರಿಂದಲೇ ಅಲ್ಲಿ ಪ್ರವಾಹ ಉಂಟಾಗುತ್ತಿದೆ’ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.</p>.<p>‘ಪದೇ ಪದೇ ಜನರನ್ನು ಸಂಕಷ್ಟಕ್ಕೆ ದೂಡುತ್ತಿರುವ ಇಂತಹ ಕಿಂಡಿ ಅಣೆಕಟ್ಟೆ ನಮಗೆ ಬೇಡ’ ಎಂದ ಅವರು, ‘ನಮಗೆ ನದಿ ದಾಟಲು ಸೇತುವೆಯಷ್ಟೇ ಸಾಕು’ ಎಂದು ಹೇಳಿದರು.</p>.<p>‘ಈ ಅಣೆಕಟ್ಟೆಯಿಂದ 5 ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿವೆ. ಅವರಿಗೆ ಹೆಚ್ಚಿನ ಪರಿಹಾರ ನೀಡಿಲ್ಲ. ಶಾಶ್ವತವಾದ ಪರಿಹಾರವನ್ನು ಅವರಿಗೆ ನೀಡಬೇಕು’ ಎಂದೂ ಒತ್ತಾಯಿಸಿದರು.</p>.<p>ಕಾಂಗ್ರೆಸ್ನ ಜಿಲ್ಲಾ ಘಟಕದ ಅಧ್ಯಕ್ಷ ಸೂರಜ್ ಹೊಸೂರು ಮಾತನಾಡಿ, ‘ಕಿಂಡಿ ಅಣೆಕಟ್ಟೆ ದೂರದೃಷ್ಟಿ ಇಲ್ಲದ ಯೋಜನೆ. ಕೆಲವೇ ಕಿಲೋಮೀಟರ್ಗಳ ಅಂತರದಲ್ಲಿ 4 ಕಿಂಡಿ ಅಣೆಕಟ್ಟೆಯನ್ನು ಕಟ್ಟಿದ್ದಾದರೂ ಏಕೆ’ ಎಂದು ಪ್ರಶ್ನಿಸಿದರು.</p>.<p>ಪ್ರವಾಹ ಸಂತ್ರಸ್ತ ಲೋಕೇಶ್ ಮಾತನಾಡಿ, ‘ನಮಗೆ ಯೋಗ್ಯವಾದ ಜಾಗದಲ್ಲಿ ಸೂಕ್ತವಾದ ಸ್ಥಳ ನೀಡಿದರೆ ಮಾತ್ರ ತೆರಳುತ್ತೇವೆ. ಇಲ್ಲದಿದ್ದರೆ ನಾವು ಈಗ ಇರುವ ಸ್ಥಳ ಬಿಟ್ಟು ಹೊರಡುವುದಿಲ್ಲ’ ಎಂದರು.</p>.<p>ಮುಖಂಡರಾದ ಹನೀಫ್, ಸಂತ್ರಸ್ತೆ ವೇದಾವತಿ, ನಿತಿನ್ ಇದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>