<p><strong>ಮಡಿಕೇರಿ</strong>: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ, ಚುನಾವಣಾ ಕಾರಣಕ್ಕೆ ಕಡಬಕ್ಕೆ ವರ್ಗಾವಣೆಗೊಂಡಿರುವ ಬಿ.ವಿ.ಜಯಣ್ಣ ಅವರ ಕುಶಾಲನಗರದ ಮನೆ ಹಾಗೂ ಕಡಬದ ಕಚೇರಿಯಲ್ಲಿ ₹ 1.30 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ₹ ಅದರಲ್ಲಿ, 9.20 ಲಕ್ಷ ನಗದು, ₹ 1.09 ಕೋಟಿ ಮೌಲ್ಯದ 3 ಮನೆಗಳು, 5 ಎಕರೆ ಭೂಮಿ, 1 ನಿವೇಶನ, ₹ 8.63 ಲಕ್ಷ ಮೌಲ್ಯದ ಚಿನ್ನಾಭರಣ, ₹ 25.70 ಲಕ್ಷ ಮೌಲ್ಯದ 3 ಕಾರುಗಳು ಸೇರಿವೆ.</p>.<p>ಜಿಲ್ಲಾ ಪಂಚಾಯಿತಿಯ ಸಹಾಯಕ ಎಂಜನಿಯರ್ ಎಂ.ಎಂ.ಫಯಾಜ್ ಅಹಮ್ಮದ್ ಅವರ ಕುಶಾಲನಗರದ ಮನೆ, ಪಿರಿಯಾಪಟ್ಟಣ ತಾಲ್ಲೂಕಿನ ರಾಣಿಗೇಟ್ನ ತೋಟದ ಮನೆ, ಮಡಿಕೇರಿಯ ಸಂಬಂಧಿಕರ ಮನೆ ಸೇರಿದಂತೆ ಒಟ್ಟು 5 ಸ್ಥಳಗಳಲ್ಲಿ ₹ 1.69 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.</p>.<p>ಅದರಲ್ಲಿ ₹ 75 ಲಕ್ಷ ಮೌಲ್ಯದ 2 ಮನೆ, ₹ 40 ಲಕ್ಷ ಮೌಲ್ಯದ 4 ಎಕರೆ ಕೃಷಿ ಭೂಮಿ, ₹ 48,070 ನಗದು, ₹ 95,800, ಮೌಲ್ಯದ ಚಿನ್ನಾಭರಣ, ₹ 24.75 ಲಕ್ಷ ಮೌಲ್ಯದ ವಾಹನಗಳು ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಲೋಕಾಯುಕ್ತ ಡಿವೈಎಸ್ಪಿ ಪವನ್ಕುಮಾರ್, ಮ್ಯಾಥ್ಯೂ ಥಾಮಸ್, ಲೋಹಿತ್, ಎಂ.ಆರ್ ಗೌತಮ್, ಇನ್ಸ್ಪೆಕ್ಟರ್ಗಳಾದ ಲೋಕೇಶ್, ಅನಂತರಾಮ್, ಸಿಬ್ಬಂದಿಯಾದ ಮಂಜು, ಲೋಹಿತ್, ಸಲಾಹುದ್ದೀನ್, ಮಾಲಿಂಗಸ್ವಾಮಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ, ಚುನಾವಣಾ ಕಾರಣಕ್ಕೆ ಕಡಬಕ್ಕೆ ವರ್ಗಾವಣೆಗೊಂಡಿರುವ ಬಿ.ವಿ.ಜಯಣ್ಣ ಅವರ ಕುಶಾಲನಗರದ ಮನೆ ಹಾಗೂ ಕಡಬದ ಕಚೇರಿಯಲ್ಲಿ ₹ 1.30 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ₹ ಅದರಲ್ಲಿ, 9.20 ಲಕ್ಷ ನಗದು, ₹ 1.09 ಕೋಟಿ ಮೌಲ್ಯದ 3 ಮನೆಗಳು, 5 ಎಕರೆ ಭೂಮಿ, 1 ನಿವೇಶನ, ₹ 8.63 ಲಕ್ಷ ಮೌಲ್ಯದ ಚಿನ್ನಾಭರಣ, ₹ 25.70 ಲಕ್ಷ ಮೌಲ್ಯದ 3 ಕಾರುಗಳು ಸೇರಿವೆ.</p>.<p>ಜಿಲ್ಲಾ ಪಂಚಾಯಿತಿಯ ಸಹಾಯಕ ಎಂಜನಿಯರ್ ಎಂ.ಎಂ.ಫಯಾಜ್ ಅಹಮ್ಮದ್ ಅವರ ಕುಶಾಲನಗರದ ಮನೆ, ಪಿರಿಯಾಪಟ್ಟಣ ತಾಲ್ಲೂಕಿನ ರಾಣಿಗೇಟ್ನ ತೋಟದ ಮನೆ, ಮಡಿಕೇರಿಯ ಸಂಬಂಧಿಕರ ಮನೆ ಸೇರಿದಂತೆ ಒಟ್ಟು 5 ಸ್ಥಳಗಳಲ್ಲಿ ₹ 1.69 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.</p>.<p>ಅದರಲ್ಲಿ ₹ 75 ಲಕ್ಷ ಮೌಲ್ಯದ 2 ಮನೆ, ₹ 40 ಲಕ್ಷ ಮೌಲ್ಯದ 4 ಎಕರೆ ಕೃಷಿ ಭೂಮಿ, ₹ 48,070 ನಗದು, ₹ 95,800, ಮೌಲ್ಯದ ಚಿನ್ನಾಭರಣ, ₹ 24.75 ಲಕ್ಷ ಮೌಲ್ಯದ ವಾಹನಗಳು ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಲೋಕಾಯುಕ್ತ ಡಿವೈಎಸ್ಪಿ ಪವನ್ಕುಮಾರ್, ಮ್ಯಾಥ್ಯೂ ಥಾಮಸ್, ಲೋಹಿತ್, ಎಂ.ಆರ್ ಗೌತಮ್, ಇನ್ಸ್ಪೆಕ್ಟರ್ಗಳಾದ ಲೋಕೇಶ್, ಅನಂತರಾಮ್, ಸಿಬ್ಬಂದಿಯಾದ ಮಂಜು, ಲೋಹಿತ್, ಸಲಾಹುದ್ದೀನ್, ಮಾಲಿಂಗಸ್ವಾಮಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>