<p><strong>ನಾಪೋಕ್ಲು:</strong> ಸಮೀಪದ ಹಳೆತಾಲೂಕಿನ ನಾಡು ಭಗವತಿ ದೇವಾಲಯದ ನವೀಕರಣಕ್ಕೆ ದೇವಾಲಯದ ಆಡಳಿತ ಮಂಡಳಿ ಮುಂದಾಗಿದ್ದು ದೇವಾಲಯದ ನವೀಕರಣಕ್ಕೆ ಆರ್ಥಿಕ ನೆರವು ನೀಡುವಂತೆ ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ.</p>.<p>ಎರಡು ವರ್ಷಗಳ ಹಿಂದೆ ಪೌಳಿಯ ಸುತ್ತ ಶಿಥಿಲಗೊಂಡಿರುವುದನ್ನು ತಂತ್ರಿಗಳು ತಿಳಿಸಿ ಪುನರ್ ನಿರ್ಮಾಣಕ್ಕೆ ಹಾಗೂ ಮಹಾ ಗಣಪತಿ ಗುಡಿಯ ನವೀಕರಣಕ್ಕೆ ಸೂಚಿಸಿದ್ದರು. ಈಗಿರುವ ಪೌಳಿಯನ್ನು ತೆಗೆದು ಶಿಲೆಯಲ್ಲಿ ನಿರ್ಮಿಸಿ ಚಾವಣಿಗೆ ತಾಮ್ರದ ಹೊದಿಕೆ ಹಾಸಿ ಹೊಸದಾಗಿ ನಿರ್ಮಿಸುವಂತೆ ಆಡಳಿತ ಮಂಡಳಿ ತೀರ್ಮಾನಿಸಿದ್ದು ಇದಕ್ಕೆ ಅಂದಾಜು ₹1.60 ಕೋಟಿ ಅವಶ್ಯಕತೆ ಇದೆ. ಇಷ್ಟು ಮೊತ್ತದ ಹಣವನ್ನು ಸಂಗ್ರಹಿಸಲು ಧಾನ್ಯಗಳ ನೆರವು ಅಗತ್ಯವಾಗಿದ್ದು ಎಲ್ಲರೂ ಸಹಕರಿಸುವಂತೆ ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ.</p>.<p>ನಾಡು ಭಗವತಿ ದೇವಾಲಯವು ಸುಮಾರು ಸಾವಿರ ವರ್ಷಗಳಿಗಿಂತಲೂ ಹಿಂದಿನ ಇತಿಹಾಸವನ್ನು ಹೊಂದಿದ್ದು ಆ ಕಾಲದಲ್ಲಿ ರಾಜವಂಶಸ್ಥರು ಹಾಗೂ ಊರಿನ ಪೂರ್ವಿಕರು ಅಷ್ಟ ಬಂದ ಬ್ರಹ್ಮ ಕಳಸ ಮಾಡಿ ದೇವಾಲಯವನ್ನು ಸ್ಥಾಪನೆ ಮಾಡಿದರು. ಭಕ್ತರ ನೆರವಿನೊಂದಿಗೆ ದೇವಾಲಯ ಅಭಿವೃದ್ಧಿ ಪಥದಲ್ಲಿ ಸಾಗಿತ್ತು. ದೇವಾಲಯದ ಅಂಗಳಕ್ಕೆ ಚಪ್ಪಡಿ ಹಾಸಿದ್ದು ಹೊರಾಂಗಣಕ್ಕೆ ಕಾಂಕ್ರೀಟ್ ಅಂಗಳ ಮತ್ತು ತಡೆಗೋಡೆ ನಿರ್ಮಾಣ ದೇವಾಲಯದ ಬಲಭಾಗದಲ್ಲಿ ಸಮುದಾಯ ಭವನ, ಎಡ ಭಾಗದಲ್ಲಿ ಊಟದ ಭವನವನ್ನು ಕಾಂಕ್ರೀಟ್ ಚಾವಣಿಯೊಂದಿಗೆ ಕಟ್ಟಲಾಗಿದೆ. ಸುಸಜ್ಜಿತ ಅಡುಗೆ ಕೋಣೆ, ಅರ್ಚಕರ ವಸತಿ ನಿಲಯ ನಿರ್ಮಿಸಲಾಗಿದೆ. ಸರ್ಕಾರದ ಅನುದಾನದಿಂದ ದೇವಾಲಯದ ಕೆರೆ ಹಾಗೂ ರಸ್ತೆಗಳಿಗೆ ಕಾಂಕ್ರೀಟ್ ಅಳವಡಿಸಲಾಗಿದೆ. ಇಂಟರ್ಲಾಕ್ ನೊಂದಿಗೆ ಹೊರಾಂಗಣವನ್ನು ಸಹ ಅಭಿವೃದ್ಧಿಪಡಿಸಲಾಗಿದೆ. 2015ರಲ್ಲಿ ಶಿಲೆಯನ್ನು ಬಳಸಿ ಗರ್ಭಗುಡಿ, ತೀರ್ಥ ಮಂಟಪಕ್ಕೆ ತಾಮ್ರದ ಹೊದಿಕೆ ಹಾಸಿ, ಕಾಳೆಘಾಟಿನ ತಂತ್ರಿಯವರ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾಪಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಪೋಕ್ಲು:</strong> ಸಮೀಪದ ಹಳೆತಾಲೂಕಿನ ನಾಡು ಭಗವತಿ ದೇವಾಲಯದ ನವೀಕರಣಕ್ಕೆ ದೇವಾಲಯದ ಆಡಳಿತ ಮಂಡಳಿ ಮುಂದಾಗಿದ್ದು ದೇವಾಲಯದ ನವೀಕರಣಕ್ಕೆ ಆರ್ಥಿಕ ನೆರವು ನೀಡುವಂತೆ ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ.</p>.<p>ಎರಡು ವರ್ಷಗಳ ಹಿಂದೆ ಪೌಳಿಯ ಸುತ್ತ ಶಿಥಿಲಗೊಂಡಿರುವುದನ್ನು ತಂತ್ರಿಗಳು ತಿಳಿಸಿ ಪುನರ್ ನಿರ್ಮಾಣಕ್ಕೆ ಹಾಗೂ ಮಹಾ ಗಣಪತಿ ಗುಡಿಯ ನವೀಕರಣಕ್ಕೆ ಸೂಚಿಸಿದ್ದರು. ಈಗಿರುವ ಪೌಳಿಯನ್ನು ತೆಗೆದು ಶಿಲೆಯಲ್ಲಿ ನಿರ್ಮಿಸಿ ಚಾವಣಿಗೆ ತಾಮ್ರದ ಹೊದಿಕೆ ಹಾಸಿ ಹೊಸದಾಗಿ ನಿರ್ಮಿಸುವಂತೆ ಆಡಳಿತ ಮಂಡಳಿ ತೀರ್ಮಾನಿಸಿದ್ದು ಇದಕ್ಕೆ ಅಂದಾಜು ₹1.60 ಕೋಟಿ ಅವಶ್ಯಕತೆ ಇದೆ. ಇಷ್ಟು ಮೊತ್ತದ ಹಣವನ್ನು ಸಂಗ್ರಹಿಸಲು ಧಾನ್ಯಗಳ ನೆರವು ಅಗತ್ಯವಾಗಿದ್ದು ಎಲ್ಲರೂ ಸಹಕರಿಸುವಂತೆ ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ.</p>.<p>ನಾಡು ಭಗವತಿ ದೇವಾಲಯವು ಸುಮಾರು ಸಾವಿರ ವರ್ಷಗಳಿಗಿಂತಲೂ ಹಿಂದಿನ ಇತಿಹಾಸವನ್ನು ಹೊಂದಿದ್ದು ಆ ಕಾಲದಲ್ಲಿ ರಾಜವಂಶಸ್ಥರು ಹಾಗೂ ಊರಿನ ಪೂರ್ವಿಕರು ಅಷ್ಟ ಬಂದ ಬ್ರಹ್ಮ ಕಳಸ ಮಾಡಿ ದೇವಾಲಯವನ್ನು ಸ್ಥಾಪನೆ ಮಾಡಿದರು. ಭಕ್ತರ ನೆರವಿನೊಂದಿಗೆ ದೇವಾಲಯ ಅಭಿವೃದ್ಧಿ ಪಥದಲ್ಲಿ ಸಾಗಿತ್ತು. ದೇವಾಲಯದ ಅಂಗಳಕ್ಕೆ ಚಪ್ಪಡಿ ಹಾಸಿದ್ದು ಹೊರಾಂಗಣಕ್ಕೆ ಕಾಂಕ್ರೀಟ್ ಅಂಗಳ ಮತ್ತು ತಡೆಗೋಡೆ ನಿರ್ಮಾಣ ದೇವಾಲಯದ ಬಲಭಾಗದಲ್ಲಿ ಸಮುದಾಯ ಭವನ, ಎಡ ಭಾಗದಲ್ಲಿ ಊಟದ ಭವನವನ್ನು ಕಾಂಕ್ರೀಟ್ ಚಾವಣಿಯೊಂದಿಗೆ ಕಟ್ಟಲಾಗಿದೆ. ಸುಸಜ್ಜಿತ ಅಡುಗೆ ಕೋಣೆ, ಅರ್ಚಕರ ವಸತಿ ನಿಲಯ ನಿರ್ಮಿಸಲಾಗಿದೆ. ಸರ್ಕಾರದ ಅನುದಾನದಿಂದ ದೇವಾಲಯದ ಕೆರೆ ಹಾಗೂ ರಸ್ತೆಗಳಿಗೆ ಕಾಂಕ್ರೀಟ್ ಅಳವಡಿಸಲಾಗಿದೆ. ಇಂಟರ್ಲಾಕ್ ನೊಂದಿಗೆ ಹೊರಾಂಗಣವನ್ನು ಸಹ ಅಭಿವೃದ್ಧಿಪಡಿಸಲಾಗಿದೆ. 2015ರಲ್ಲಿ ಶಿಲೆಯನ್ನು ಬಳಸಿ ಗರ್ಭಗುಡಿ, ತೀರ್ಥ ಮಂಟಪಕ್ಕೆ ತಾಮ್ರದ ಹೊದಿಕೆ ಹಾಸಿ, ಕಾಳೆಘಾಟಿನ ತಂತ್ರಿಯವರ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾಪಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>