ಶಾಲೆಯಿಂದ ವಿದ್ಯಾರ್ಥಿಗಳನ್ನು ನೆಲಜಿ ಗ್ರಾಮಕ್ಕೆ ಕರೆದೊಯ್ದು ಬಸ್ ನೆಲಜಿ ಗ್ರಾಮದಿಂದ ಹಿಂತಿರುಗುವಾಗ ಕುಲ್ಲೇಟಿರ ರಾಜಾ ಎಂಬುವರ ಮನೆ ಸಮೀಪ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯುತ್ ಕಂಬ ತುಂಡಾಗಿದ್ದು ಆಧಾರವಾಗಿ ನಿಲ್ಲಿಸಿದ ಕಂಬದ ಸಹಾಯದಿಂದ ಭಾರಿ ಅನಾಹುತ ತಪ್ಪಿದೆ. ಬಸ್ಸಿನಲ್ಲಿ ಚಾಲಕ ಮತ್ತು ಕ್ಲೀನರ್ ಮಾತ್ರ ಇದ್ದರು.