ಕಾಫಿ ಮಂಡಳಿ ಕಿರಿಯ ಸಂಪರ್ಕ ಅಧಿಕಾರಿಗಳಾದ ಮುಖಾರಿಬ್ ಮಾತನಾಡಿ, ‘ಕಾಫಿ ಬೆಳೆಗಾರರು ಸೂಕ್ತ ಸಮಯದಲ್ಲಿ ಕಾಫಿ ತೋಟಕ್ಕೆ ಅಗತ್ಯವಿರುವಷ್ಟು ನೆರಳು ಬಿಡಬೇಕು. ಮರದ ರೆಂಬೆ ತೆಗಯುವ ವೈಜ್ಞಾನಿಕವಾಗಿ ತೆಗೆಸಬೇಕು. ಕಾಫಿ ಚಿಗುರುಗಳನ್ನು ಕೂಡ ಎಚ್ಚರಿಕೆಯಿಂದ ತೆರವುಗೊಳಿಸಬೇಕು ಎಂದು ಸಲಹೆ ನೀಡಿದರು. ಹಾಗೆಯೆ ಗಿಡಗಳಿಗೆ ಬೇಕಾದ ನೀರಿನ ಪ್ರಮಾಣ, ಸುಣ್ಣ ಮತ್ತು ಗೊಬ್ಬರದ ಪ್ರಮಾಣದ’ ಬಗ್ಗೆ ಮಾಹಿತಿ ನೀಡಿದರು.