‘ತಡೆಗೋಡೆಗೆ ಅಪಾಯ’ ಎಂಬ ಸುದ್ದಿ ವ್ಯಾಪಕವಾಗಿ ಹರಡಿರುವ ಕುರಿತು ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಿದ್ದೇಗೌಡ, ‘ತಡೆಗೋಡೆಗೆ ಯಾವುದೇ ಅಪಾಯ ಇಲ್ಲ. ಮಳೆಗೆ ಸ್ವಲ್ಪ ಮಣ್ಣು ಕೆಳಗೆ ಜಾರಿದೆ. ಇದರಿಂದ ಸಂಚಾರಕ್ಕಾಗಲಿ ಅಥವಾ ತಡೆಗೋಡೆಗಾಗಲಿ ಯಾವುದೇ ಅಪಾಯ ಇಲ್ಲ’ ಎಂದು ಹೇಳಿದರು.