ದೇವರಾಜು ಹಾಗೂ ಚೆನ್ನಮ್ಮ ದಂಪತಿ, 15 ದಿನಗಳ ಹಿಂದೆ ಕುಟುಂಬ ಸಮೇತರಾಗಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರಕ್ಕೆ ಶುಂಠಿ ಕೀಳುವ ಕೆಲಸಕ್ಕಾಗಿ, ಸ್ನೇಹಿತರು ಮತ್ತು ನೆಂಟರ ಜೊತೆಗೆ ಬಂದಿದ್ದರು. ಪತಿ ದೇವರಾಜು ಮದ್ಯಪಾನ ಮಾಡಿ ನಿತ್ಯ ಟೆಂಟ್ನಲ್ಲಿ ಪತ್ನಿಯೊಂದಿಗೆ ಗಲಾಟೆ ನಡೆಸುತ್ತಿದ್ದರು. ಗುರುವಾರ ರಾತ್ರಿಯೂ ಜಗಳ ನಡೆದಿದೆ. ಶುಕ್ರವಾರ ಎಲ್ಲರೂ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಕುಶಾಲನಗರ ಪಕ್ಕವಿರುವ ಹೆಬ್ಬಾಲೆ ಗ್ರಾಮದ ನಾಲೆಗೆ ಮಕ್ಕಳನ್ನು ತಳ್ಳಿ, ಚೆನ್ನಮ್ಮನೂ ನಾಲೆಗೆ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.