<p><strong>ವಿರಾಜಪೇಟೆ</strong>: ಸಮೀಪದ ಪೆರುಂಬಾ ಡಿಯಲ್ಲಿ ಕೋವಿಡ್ ನೆಗೆಟಿವ್ ವರದಿ ಇಲ್ಲದೇ ರಾಜ್ಯ ಪ್ರವೇಶಿಸಿದ್ದ ಕೇರಳದ ಮೂವರನ್ನು ಪೊಲೀಸರುಬುಧವಾರ ರಾತ್ರಿ ಬಂಧಿಸಿದ್ದಾರೆ.</p>.<p>ಕೇರಳದ ಇರಿಟ್ಟಿಯ ಕೂಟುಪೂಳೆ ನಿವಾಸಿಗಳಾದ ವಿಷ್ಣು ಪ್ರಸಾದ್, ಅರುಣ್ ವರ್ಗೀಸ್ ಮತ್ತು ನೌಷದ್ ಬಂಧಿತ ಆರೋಪಿಗಳು.</p>.<p>ಲಾರಿಯಲ್ಲಿ ಕೆಂಪುಕಲ್ಲು ತುಂಬಿಕೊಂಡು ಮಾಕುಟ್ಟ ಮೂಲಕಬುಧವಾರ ರಾತ್ರಿ ಕೇರಳದ ಕಡೆಯಿಂದ ಪೆರುಂಬಾಡಿಯಲ್ಲಿನ ಚೆಕ್ಪೋಸ್ಟ್ಗೆ ಬಂದಿದ್ದಾರೆ. ಈ ಸಂದರ್ಭ ಚೆಕ್ಪೋಸ್ಟ್ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಲಾರಿ ಚಾಲಕ ಸೇರಿದಂತೆ ಮೂವರು ಆರೋಪಿಗಳ ಬಳಿ ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ಕೇಳಿದ್ದಾರೆ. ಈ ಸಂದರ್ಭ ಲಾರಿ ಚಾಲಕ ವಿಷ್ಣು ಪ್ರಸಾದ್, ಪ್ರಮಾಣ ಪತ್ರದ ಪ್ರತಿ ಇಲ್ಲ. ಆದರೆ ಮೊಬೈಲ್ನಲ್ಲಿ ಕೊರೊನಾ ನೆಗೆಟಿವ್ ಸಂದೇಶ ಇರುವುದಾಗಿ ಹೇಳಿದ್ದಾನೆ.</p>.<p>ಮೊಬೈಲ್ನ ಸಂದೇಶದ ನೈಜತೆಯನ್ನು ಪೊಲೀಸರು ವೆಬ್ಸೈಟ್ನಲ್ಲಿ ಪರಿಶೀಲಿಸಿದಾಗ ಸಂದೇಶ ನಕಲಿಯೆಂದು ತಿಳಿದು ಬಂದಿದೆ. ಮೂವರನ್ನು ಬಂಧಿಸಿದ ಇಲ್ಲಿನ ನಗರಠಾಣೆಯ ಪೊಲೀಸರು, ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.</p>.<p>ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ<br />ಒಪ್ಪಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿರಾಜಪೇಟೆ</strong>: ಸಮೀಪದ ಪೆರುಂಬಾ ಡಿಯಲ್ಲಿ ಕೋವಿಡ್ ನೆಗೆಟಿವ್ ವರದಿ ಇಲ್ಲದೇ ರಾಜ್ಯ ಪ್ರವೇಶಿಸಿದ್ದ ಕೇರಳದ ಮೂವರನ್ನು ಪೊಲೀಸರುಬುಧವಾರ ರಾತ್ರಿ ಬಂಧಿಸಿದ್ದಾರೆ.</p>.<p>ಕೇರಳದ ಇರಿಟ್ಟಿಯ ಕೂಟುಪೂಳೆ ನಿವಾಸಿಗಳಾದ ವಿಷ್ಣು ಪ್ರಸಾದ್, ಅರುಣ್ ವರ್ಗೀಸ್ ಮತ್ತು ನೌಷದ್ ಬಂಧಿತ ಆರೋಪಿಗಳು.</p>.<p>ಲಾರಿಯಲ್ಲಿ ಕೆಂಪುಕಲ್ಲು ತುಂಬಿಕೊಂಡು ಮಾಕುಟ್ಟ ಮೂಲಕಬುಧವಾರ ರಾತ್ರಿ ಕೇರಳದ ಕಡೆಯಿಂದ ಪೆರುಂಬಾಡಿಯಲ್ಲಿನ ಚೆಕ್ಪೋಸ್ಟ್ಗೆ ಬಂದಿದ್ದಾರೆ. ಈ ಸಂದರ್ಭ ಚೆಕ್ಪೋಸ್ಟ್ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಲಾರಿ ಚಾಲಕ ಸೇರಿದಂತೆ ಮೂವರು ಆರೋಪಿಗಳ ಬಳಿ ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ಕೇಳಿದ್ದಾರೆ. ಈ ಸಂದರ್ಭ ಲಾರಿ ಚಾಲಕ ವಿಷ್ಣು ಪ್ರಸಾದ್, ಪ್ರಮಾಣ ಪತ್ರದ ಪ್ರತಿ ಇಲ್ಲ. ಆದರೆ ಮೊಬೈಲ್ನಲ್ಲಿ ಕೊರೊನಾ ನೆಗೆಟಿವ್ ಸಂದೇಶ ಇರುವುದಾಗಿ ಹೇಳಿದ್ದಾನೆ.</p>.<p>ಮೊಬೈಲ್ನ ಸಂದೇಶದ ನೈಜತೆಯನ್ನು ಪೊಲೀಸರು ವೆಬ್ಸೈಟ್ನಲ್ಲಿ ಪರಿಶೀಲಿಸಿದಾಗ ಸಂದೇಶ ನಕಲಿಯೆಂದು ತಿಳಿದು ಬಂದಿದೆ. ಮೂವರನ್ನು ಬಂಧಿಸಿದ ಇಲ್ಲಿನ ನಗರಠಾಣೆಯ ಪೊಲೀಸರು, ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.</p>.<p>ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ<br />ಒಪ್ಪಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>