<p><strong>ಗೋಣಿಕೊಪ್ಪಲು:</strong> ಇಲ್ಲಿಗೆ ಸಮೀಪದ ಚೆನ್ನಂಗೊಲ್ಲಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸಾಕಾನೆಗಳ ಅವಿರತ ಶ್ರಮದಿಂದ ಕಾಡಾನೆಯೊಂದು ಸೆರೆಯಾಯಿತು.</p>.<p>ಇಲ್ಲಿ ಕಳೆದ 3 ದಿನಗಳ ಹಿಂದೆ ಮಹಿಳೆಯೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು. ನಂತರ, ಎಚ್ಚೆತ್ತ ಇಲಾಖೆ ಸೆರೆಗೆ ಕಾರ್ಯಾಚರಣೆ ನಡೆಸಿತು.</p>.<p>ಬೆಳಿಗ್ಗೆ 10 ಗಂಟೆ ವೇಳೆಗೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನು ಹುಡುಕುತ್ತಾ ಹೊರಟರು. ಈ ವೇಳೆಯಲ್ಲಿ 43 ವರ್ಷ ವಯಸ್ಸಿನ ಗಂಡಾನೆ ದೇವರಕಾಡು ಅರಣ್ಯದಲ್ಲಿ ನಿಂತಿತ್ತು. ಇದನ್ನು ಗಮನಿಸಿದ ವಿಶೇಷ ಕಾರ್ಯಾಚರಣೆ ತಂಡ ಸಾಕಾನೆಗಳ ಮೂಲಕ ಕಾಡಾನೆಯನ್ನು ಸುತ್ತುವರಿದರು. ಈ ವೇಳೆಯಲ್ಲಿ ಕಾರ್ಯಾಚರಣೆಗೆ ಬಳಸಿಕೊಂಡಿದ್ದ ಮತ್ತಿಗೋಡು, ಹಾರಂಗಿ ಮತ್ತು ದುಬಾರೆ ಸಾಕಾನೆ ಶಿಬಿರದ ಆನೆಗಳಾದ ಭೀಮ, ಕಂಜನ್, ವಿಕ್ರಂ, ಪ್ರಶಾಂತ್, ಶ್ರೀಕಂಠ, ಈಶ್ವರ ಆನೆಗಳ ಮೂಲಕ ತೆರಳಿ ಕಾಡಾನೆಗೆ ಅರವಳಿಕೆ ತಜ್ಞರು ಅರವಳಿಕೆ ಚುಚ್ಚುಮದ್ದು ನೀಡಿ ಬೀಳಿಸಿದರು.</p>.<p>ಅರವಳಿಕೆ ತಜ್ಞ ಡಾ.ರಮೇಶ್, ಶಾರ್ಫ್ ಶೂಟರ್ ರಂಜನ್ ಅವರು ಆನೆಗೆ ಅರವಳಿಕೆ ಚುಚ್ಚುಮದ್ದು ಹೊಡೆಯುವಲ್ಲಿ ಯಶಸ್ವಿಯಾದರು. ಈ ವೇಳೆ ತೀವ್ರ ಪ್ರತಿರೋಧ ತೋರಿದ ಕಾಡಾನೆ ಗೀಳುಡುತ್ತಾ ತುಸು ದೂರ ಓಡಿ ಹೊಗಿ ಪ್ರಜ್ಞೆ ತಪ್ಪಿ ಬಿದ್ದಿತು.</p>.<p>ಪ್ರಜ್ಞೆ ಬಂದ ಬಳಿಕ ಹೆಚ್ಚು ಪ್ರತಿರೋಧ ತೋರದ ಆನೆಯನ್ನು ಸಾಕಾನೆ ಮೂಲಕ ಬಂಧಿಸಿ ಕ್ರೇನ್ ಸಹಾಯದಿಂದ ಲಾರಿಗೆ ಹತ್ತಿಸಿ ದುಬಾರೆ ಸಾಕಾನೆ ಶಿಬಿರಕ್ಕೆ ಸಾಗಿಸಲಾಯಿತು. ಸದ್ಯ, ಈ ಆನೆಗೆ ‘ವೇದ’ ಎಂಬ ಹೆಸರಿಡಲಾಗಿದೆ.</p>.<p>ಪೊನ್ನಂಪೇಟೆ ತಾಲ್ಲೂಕಿನ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳಾಜಿ ಗ್ರಾಮದ ಮನೆಯಪಂಡ ಕಾರ್ಯಪ್ಪ ಎಂಬುವರಿಗೆ ಸೇರಿದ ಕಾಫಿ ತೋಟದಲ್ಲಿ ಕೆಲಸ ಮಾಡಿ ಮನೆಗೆ ಹಿಂದಿರುಗುತ್ತಿದ್ದ ಜಾನಕಿ ಎಂಬ ಕಾರ್ಮಿಕ ಮಹಿಳೆ ಕಾಡಾನೆ ದಾಳಿ ಗ ಸಿಲುಕಿ ಮೃತಪಟ್ಟ ನಂತರ ಶಾಸಕ ಎ.ಎಸ್.ಪೊನ್ನಣ್ಣ ದೂರವಾಣಿ ಮೂಲಕ ಅರಣ್ಯ ಸಚಿವ ಈಶ್ವರಖಂಡ್ರೆ ಅವರೊಂದಿಗೆ ಮಾತನಾಡಿ ಆನೆ ಸೆರೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು. ನಂತರ, ಅನುಮತಿ ದೊರೆಯಿತು ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.</p>.<p>ಕೊಡಗು ಜಿಲ್ಲಾ ಸಿಸಿಎಫ್ ಡಾ.ಮಾಲತಿ ಪ್ರಿಯ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು. ವಿರಾಜಪೇಟೆ ಡಿಸಿಎಫ್ ಜಗನ್ನಾಥ್, ತಿತಿಮತಿ ಎಸಿಎಫ್ ಗೋಪಾಲ್, ಪರಿಸರವಾದಿ ತಮ್ಮಯ್ಯ, ಆರ್ಎಫ್ಒಗಳಾದ ದೇವರಾಜು, ಶಿವಶಂಕರ್, ಗಂಗಾಧರ್, ಹಿರಿಯ ವನ್ಯಜೀವಿ ವೈದ್ಯ ಚಿಟ್ಟಿಯಪ್ಪ, ಉಮಾಶಂಕರ್, ರಮೇಶ್ ಮೊದಲಾದವರು ಪಾಲ್ಗೊಂಡಿದ್ದರು.</p>.<p>ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡದ ಕಾರ್ಯಾಚರಣೆಯಲ್ಲಿ 120 ಮಂದಿ ವಿಶೇಷ ಕಾರ್ಯಾಚರಣೆ ಪಡೆ ಸಿಬ್ಬಂದಿಗಳು, 14 ಮಂದಿ ಮಾವುತರು ಹಾಗೂ ಕಾವಾಡಿಗಳು, 20 ಮಂದಿ ಡಿಆರ್ಎಫ್ ಗಳು ಪಾಲ್ಗೊಂಡಿದ್ದರು.</p>.<p>Highlights - ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡದ ಕಾರ್ಯಾಚರಣೆ 6 ಸಾಕಾನೆಗಳ ಬಳಕೆ ಸೆರೆಯಾದ ಕಾಡಾನೆ ದುಬಾರೆಗೆ ರವಾನೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಣಿಕೊಪ್ಪಲು:</strong> ಇಲ್ಲಿಗೆ ಸಮೀಪದ ಚೆನ್ನಂಗೊಲ್ಲಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸಾಕಾನೆಗಳ ಅವಿರತ ಶ್ರಮದಿಂದ ಕಾಡಾನೆಯೊಂದು ಸೆರೆಯಾಯಿತು.</p>.<p>ಇಲ್ಲಿ ಕಳೆದ 3 ದಿನಗಳ ಹಿಂದೆ ಮಹಿಳೆಯೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು. ನಂತರ, ಎಚ್ಚೆತ್ತ ಇಲಾಖೆ ಸೆರೆಗೆ ಕಾರ್ಯಾಚರಣೆ ನಡೆಸಿತು.</p>.<p>ಬೆಳಿಗ್ಗೆ 10 ಗಂಟೆ ವೇಳೆಗೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನು ಹುಡುಕುತ್ತಾ ಹೊರಟರು. ಈ ವೇಳೆಯಲ್ಲಿ 43 ವರ್ಷ ವಯಸ್ಸಿನ ಗಂಡಾನೆ ದೇವರಕಾಡು ಅರಣ್ಯದಲ್ಲಿ ನಿಂತಿತ್ತು. ಇದನ್ನು ಗಮನಿಸಿದ ವಿಶೇಷ ಕಾರ್ಯಾಚರಣೆ ತಂಡ ಸಾಕಾನೆಗಳ ಮೂಲಕ ಕಾಡಾನೆಯನ್ನು ಸುತ್ತುವರಿದರು. ಈ ವೇಳೆಯಲ್ಲಿ ಕಾರ್ಯಾಚರಣೆಗೆ ಬಳಸಿಕೊಂಡಿದ್ದ ಮತ್ತಿಗೋಡು, ಹಾರಂಗಿ ಮತ್ತು ದುಬಾರೆ ಸಾಕಾನೆ ಶಿಬಿರದ ಆನೆಗಳಾದ ಭೀಮ, ಕಂಜನ್, ವಿಕ್ರಂ, ಪ್ರಶಾಂತ್, ಶ್ರೀಕಂಠ, ಈಶ್ವರ ಆನೆಗಳ ಮೂಲಕ ತೆರಳಿ ಕಾಡಾನೆಗೆ ಅರವಳಿಕೆ ತಜ್ಞರು ಅರವಳಿಕೆ ಚುಚ್ಚುಮದ್ದು ನೀಡಿ ಬೀಳಿಸಿದರು.</p>.<p>ಅರವಳಿಕೆ ತಜ್ಞ ಡಾ.ರಮೇಶ್, ಶಾರ್ಫ್ ಶೂಟರ್ ರಂಜನ್ ಅವರು ಆನೆಗೆ ಅರವಳಿಕೆ ಚುಚ್ಚುಮದ್ದು ಹೊಡೆಯುವಲ್ಲಿ ಯಶಸ್ವಿಯಾದರು. ಈ ವೇಳೆ ತೀವ್ರ ಪ್ರತಿರೋಧ ತೋರಿದ ಕಾಡಾನೆ ಗೀಳುಡುತ್ತಾ ತುಸು ದೂರ ಓಡಿ ಹೊಗಿ ಪ್ರಜ್ಞೆ ತಪ್ಪಿ ಬಿದ್ದಿತು.</p>.<p>ಪ್ರಜ್ಞೆ ಬಂದ ಬಳಿಕ ಹೆಚ್ಚು ಪ್ರತಿರೋಧ ತೋರದ ಆನೆಯನ್ನು ಸಾಕಾನೆ ಮೂಲಕ ಬಂಧಿಸಿ ಕ್ರೇನ್ ಸಹಾಯದಿಂದ ಲಾರಿಗೆ ಹತ್ತಿಸಿ ದುಬಾರೆ ಸಾಕಾನೆ ಶಿಬಿರಕ್ಕೆ ಸಾಗಿಸಲಾಯಿತು. ಸದ್ಯ, ಈ ಆನೆಗೆ ‘ವೇದ’ ಎಂಬ ಹೆಸರಿಡಲಾಗಿದೆ.</p>.<p>ಪೊನ್ನಂಪೇಟೆ ತಾಲ್ಲೂಕಿನ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳಾಜಿ ಗ್ರಾಮದ ಮನೆಯಪಂಡ ಕಾರ್ಯಪ್ಪ ಎಂಬುವರಿಗೆ ಸೇರಿದ ಕಾಫಿ ತೋಟದಲ್ಲಿ ಕೆಲಸ ಮಾಡಿ ಮನೆಗೆ ಹಿಂದಿರುಗುತ್ತಿದ್ದ ಜಾನಕಿ ಎಂಬ ಕಾರ್ಮಿಕ ಮಹಿಳೆ ಕಾಡಾನೆ ದಾಳಿ ಗ ಸಿಲುಕಿ ಮೃತಪಟ್ಟ ನಂತರ ಶಾಸಕ ಎ.ಎಸ್.ಪೊನ್ನಣ್ಣ ದೂರವಾಣಿ ಮೂಲಕ ಅರಣ್ಯ ಸಚಿವ ಈಶ್ವರಖಂಡ್ರೆ ಅವರೊಂದಿಗೆ ಮಾತನಾಡಿ ಆನೆ ಸೆರೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು. ನಂತರ, ಅನುಮತಿ ದೊರೆಯಿತು ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.</p>.<p>ಕೊಡಗು ಜಿಲ್ಲಾ ಸಿಸಿಎಫ್ ಡಾ.ಮಾಲತಿ ಪ್ರಿಯ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು. ವಿರಾಜಪೇಟೆ ಡಿಸಿಎಫ್ ಜಗನ್ನಾಥ್, ತಿತಿಮತಿ ಎಸಿಎಫ್ ಗೋಪಾಲ್, ಪರಿಸರವಾದಿ ತಮ್ಮಯ್ಯ, ಆರ್ಎಫ್ಒಗಳಾದ ದೇವರಾಜು, ಶಿವಶಂಕರ್, ಗಂಗಾಧರ್, ಹಿರಿಯ ವನ್ಯಜೀವಿ ವೈದ್ಯ ಚಿಟ್ಟಿಯಪ್ಪ, ಉಮಾಶಂಕರ್, ರಮೇಶ್ ಮೊದಲಾದವರು ಪಾಲ್ಗೊಂಡಿದ್ದರು.</p>.<p>ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡದ ಕಾರ್ಯಾಚರಣೆಯಲ್ಲಿ 120 ಮಂದಿ ವಿಶೇಷ ಕಾರ್ಯಾಚರಣೆ ಪಡೆ ಸಿಬ್ಬಂದಿಗಳು, 14 ಮಂದಿ ಮಾವುತರು ಹಾಗೂ ಕಾವಾಡಿಗಳು, 20 ಮಂದಿ ಡಿಆರ್ಎಫ್ ಗಳು ಪಾಲ್ಗೊಂಡಿದ್ದರು.</p>.<p>Highlights - ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡದ ಕಾರ್ಯಾಚರಣೆ 6 ಸಾಕಾನೆಗಳ ಬಳಕೆ ಸೆರೆಯಾದ ಕಾಡಾನೆ ದುಬಾರೆಗೆ ರವಾನೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>