<p><strong>ಮಡಿಕೇರಿ:</strong> ‘ಧ್ವಜವೆತ್ತಿ ಸಾರು ದೇವನೊಬ್ಬನೆಂದು’ ಎಂದು ಪ್ರತಿಪಾದಿಸಿದವರು ಮಹಾಯೋಗಿ ವೇಮನ. ಅವರ ಸಂದೇಶಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದು ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಂದಿ ಭಾಷಾ ಶಿಕ್ಷಕಿ ಎಂ.ಪಿ.ರಶ್ಮಿ ತಿಳಿಸಿದರು.</p>.<p>ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಲ್ಲಿನ ಗಾಂಧಿ ಭವನದಲ್ಲಿ ಸೋಮವಾರ ನಡೆದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಆಂಧ್ರದ ತೆಲುಗು ಸಾಹಿತ್ಯ ಲೋಕದಲ್ಲಿ ಧ್ರುವತಾರೆಯಂತೆ ಮೆರೆದವರು ಮಹಾಯೋಗಿ ವೇಮನ. ಆತ್ಮ ಶುದ್ದಿ ಇರದ ಆಚಾರವೇತಕೆ, ಮಡಕೆ ಶುದ್ದಿ ಇರದ ಅಡುಗೆ ಯಾತಕೆ, ಚಿತ್ತ ಶುದ್ದಿ ಇರದ ಪೂಜೆ ಯಾತಕೆ ಎಂದು ಅವರು ಹೇಳಿದ್ದಾರೆ’ ಎಂದು ತಿಳಿಸಿದರು.</p>.<p>ದೇವರು ಒಬ್ಬನೇ, ನಿನ್ನೊಳಗೆ ದೇವನಿದ್ದಾನೆ. ಆತ್ಮಶುದ್ದಿ ಮಾಡಿಕೊಂಡು ನೋಡಿದಾಗ ನಿನ್ನೊಳಗಿರುವ ದೇವ ಕಾಣಿಸುತ್ತಾನೆ ಎಂದು ವಿವರಿಸಿದರು.</p>.<p>‘ಮನುಜ ಕುಲದ ಉದ್ಧಾರ, ಜಾತಿ, ಮತ, ಪಂಥ, ಜನಾಂಗ ಪ್ರದೇಶ, ವ್ಯಕ್ತಿ ಪ್ರಚಾರದ ಹಂಗನ್ನು ತೊರೆದು ಮನುಜ ಕುಲದ ಉದ್ದಾರಕ್ಕಾಗಿ ವೇಮನ ಅವರು ಜೀವನ ಸವೆಸಿದ್ದಾರೆ’ ಎಂದು ನುಡಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಮೋಹನ್ ಕುಮಾರ್, ಬ್ಲಾಸಂ ಶಾಲೆಯ ಶಿಕ್ಷಕಿ ಪ್ರಿಯಾಂಕ, ಮಣಜೂರು ಮಂಜುನಾಥ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ‘ಧ್ವಜವೆತ್ತಿ ಸಾರು ದೇವನೊಬ್ಬನೆಂದು’ ಎಂದು ಪ್ರತಿಪಾದಿಸಿದವರು ಮಹಾಯೋಗಿ ವೇಮನ. ಅವರ ಸಂದೇಶಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದು ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಂದಿ ಭಾಷಾ ಶಿಕ್ಷಕಿ ಎಂ.ಪಿ.ರಶ್ಮಿ ತಿಳಿಸಿದರು.</p>.<p>ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಲ್ಲಿನ ಗಾಂಧಿ ಭವನದಲ್ಲಿ ಸೋಮವಾರ ನಡೆದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಆಂಧ್ರದ ತೆಲುಗು ಸಾಹಿತ್ಯ ಲೋಕದಲ್ಲಿ ಧ್ರುವತಾರೆಯಂತೆ ಮೆರೆದವರು ಮಹಾಯೋಗಿ ವೇಮನ. ಆತ್ಮ ಶುದ್ದಿ ಇರದ ಆಚಾರವೇತಕೆ, ಮಡಕೆ ಶುದ್ದಿ ಇರದ ಅಡುಗೆ ಯಾತಕೆ, ಚಿತ್ತ ಶುದ್ದಿ ಇರದ ಪೂಜೆ ಯಾತಕೆ ಎಂದು ಅವರು ಹೇಳಿದ್ದಾರೆ’ ಎಂದು ತಿಳಿಸಿದರು.</p>.<p>ದೇವರು ಒಬ್ಬನೇ, ನಿನ್ನೊಳಗೆ ದೇವನಿದ್ದಾನೆ. ಆತ್ಮಶುದ್ದಿ ಮಾಡಿಕೊಂಡು ನೋಡಿದಾಗ ನಿನ್ನೊಳಗಿರುವ ದೇವ ಕಾಣಿಸುತ್ತಾನೆ ಎಂದು ವಿವರಿಸಿದರು.</p>.<p>‘ಮನುಜ ಕುಲದ ಉದ್ಧಾರ, ಜಾತಿ, ಮತ, ಪಂಥ, ಜನಾಂಗ ಪ್ರದೇಶ, ವ್ಯಕ್ತಿ ಪ್ರಚಾರದ ಹಂಗನ್ನು ತೊರೆದು ಮನುಜ ಕುಲದ ಉದ್ದಾರಕ್ಕಾಗಿ ವೇಮನ ಅವರು ಜೀವನ ಸವೆಸಿದ್ದಾರೆ’ ಎಂದು ನುಡಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಮೋಹನ್ ಕುಮಾರ್, ಬ್ಲಾಸಂ ಶಾಲೆಯ ಶಿಕ್ಷಕಿ ಪ್ರಿಯಾಂಕ, ಮಣಜೂರು ಮಂಜುನಾಥ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>