ಸಂಜೆ ದೇವಿಯ ಕರಗವು ಪಟ್ಟಣದ ತೆಲುಗರ ಬೀದಿ, ಜೈನರ ಬೀದಿ, ಮುಖ್ಯ ರಸ್ತೆ ಮೂಲಕ ದೇವಾಂಗ ಬೀದಿ, ದಖ್ಖನಿ ಮೊಹಲ್ಲಾ ಮೂಲಕ ಅಯ್ಯಪ್ಪ ಬೆಟ್ಟದ ತಪ್ಪಲಿನವರೆಗೆ ಸಾಗಿತು. ಮೆರವಣಿಗೆಯ ದಾರಿಯುದ್ದಕ್ಕೂ ಭಕ್ತರು ಇಡುಕಾಯಿ ಸೇವೆ, ಪೂಜೆಗಳು ಸಲ್ಲಿಸಿದರು. ರಾತ್ರಿ ಕರಗವು ದೇವಾಲಯಕ್ಕೆ ಆಗಮಿಸಿದ ಬಳಿಕ ಮಹಾಪೂಜೆ ಸಲ್ಲಿಸುವ ಮೂಲಕ 5 ದಿನಗಳ ಉತ್ಸವಕ್ಕೆ ತೆರೆ ಎಳೆಯಲಾಯಿತು.