<p><strong>ಮಡಿಕೇರಿ:</strong> ವಿಶ್ವ ಲಸಿಕಾ ಸಪ್ತಾಹ ಏ. 24ರಿಂದ ಆರಂಭವಾಗಿದ್ದು, 30ರವರೆಗೂ ನಡೆಯಲಿದೆ. ಈ ಅವಧಿಯಲ್ಲಿ ಲಸಿಕೆಗೆ ಬಾಕಿ ಇರುವ ಮಕ್ಕಳನ್ನು ಗುರುತಿಸಿ, ವಿಶೇಷ ಲಸಿಕಾ ಕಾರ್ಯಕ್ರಮಗಳನ್ನು ಆಯೋಜಿಸಿ, ಲಸಿಕೆ ಹಾಕುವ ಗುರಿ ಹೊಂದಲಾಗಿದೆ.</p>.<p>ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ 7 ದಡಾರ ಹಾಗೂ 2 ರುಬೆಲ್ಲಾ ಪ್ರಕರಣಗಳು ಕಂಡು ಬಂದಿವೆ. ಹಾಗಾಗಿ, ಈ ವರ್ಷ ಹೆಚ್ಚು ನಿಗಾ ವಹಿಸಿ ಲಸಿಕೆ ಹಾಕಲಾಗುತ್ತಿದೆ. ಸದ್ಯ, ಲಸಿಕೆ ಹಾಕುವಿಕೆಯಲ್ಲಿ ಶೇ 99.09ರಷ್ಟು ಪ್ರಗತಿ ಸಾಧಿಸಿರುವ ಕೊಡಗು ಜಿಲ್ಲೆಯು ರಾಜ್ಯದಲ್ಲೇ 4ನೇ ಸ್ಥಾನದಲ್ಲಿದೆ.</p>.<p>ಕೊಡಗು ಜಿಲ್ಲೆಯಲ್ಲಿ ಇನ್ನೂ 234 ಮಕ್ಕಳು ಲಸಿಕೆಗೆ ಬಾಕಿ ಇದ್ದು, ಅವರಿಗೆ ಲಸಿಕೆ ಹಾಕಲು ವಿಶೇಷ ಶಿಬಿರಗಳನ್ನು ಆರೋಗ್ಯ ಇಲಾಖೆ ಆಯೋಜಿಸಿದೆ.</p>.<p>ವಲಸಿಗರು ಇರುವಂತಹ ಪ್ರದೇಶವನ್ನು ಹೈರಿಸ್ಕ್ ಪ್ರದೇಶ ಎಂದು ಗುರುತಿಸಿರುವ ಇಲಾಖೆಯು ಅಲ್ಲಿ 3 ಹೊರ ವಲಯ ಲಸಿಕಾ ಶಿಬಿರ ಮಾಡಲಿದೆ. ಇವುಗಳಲ್ಲಿ ಹೆಚ್ಚಿನವು ಲೈನ್ಮನೆಗಳೇ ಆಗಿವೆ. ಲಸಿಕೆ ಹಾಕಿಸದ ಸ್ಥಳೀಯರು ಇರುವ ಪ್ರದೇಶದಲ್ಲಿ 46 ಕಾರ್ಯಕ್ರಮಗಳನ್ನು ಮಾಡಲು ಉದ್ದೇಶಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವು ಹಾಡಿಗಳು ಹಾಗೂ ಕಾಡಂಚಿನ ಪ್ರದೇಶಗಳೇ ಆಗಿವೆ.ಹೈರಿಸ್ಕ್ ಇಲ್ಲದ ಪ್ರದೇಶದಲ್ಲೂ 5 ಶಿಬಿರ ಆಯೋಜಿಸಲಾಗುತ್ತದೆ. ಪ್ರತಿ ಶಿಬಿರಕ್ಕೆ ಕನಿಷ್ಠ ಮೂವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.</p>.<p>ಜಿಲ್ಲೆಯಲ್ಲಿ ಅಲೆಮಾರಿಗಳಿರುವ ಪ್ರದೇಶ 3, ಕಲ್ಲು ಹೊಡೆಯುವವರು ಇರುವ ಪ್ರದೇಶ 10, ನಿರ್ಮಾಣ ಚಟುವಟಿಕೆಯಲ್ಲಿರುವ ವಲಸಿಗರು ಇರುವ ಪ್ರದೇಶ 10, ಇತರೆ ವಲಸಿಗರು ಇರುವ ಪ್ರದೇಶ–1,185 ಎಂದು ಗುರುತಿಸಲಾಗಿದೆ. ಇತರೆ ವಲಸಿಗರಲ್ಲಿ ಹೆಚ್ಚಿನವರು ಎಸ್ಟೇಟ್ ಕಾರ್ಮಿಕರೇ ಆಗಿದ್ದಾರೆ.</p>.<p>ಇವುಗಳ ಮಧ್ಯೆ 3 ತಿಂಗಳಿಂದ ಆರೋಗ್ಯ ಕಾರ್ಯಕರ್ತರು ಖಾಲಿ ಇರುವ 249 ಪ್ರದೇಶಗಳಿವೆ. ತಲುಪಲು ಕಷ್ಟಕರವಾಗಿರುವ 145 ಪ್ರದೇಶ, ಹಾಗೂ ಹಾಡಿಗಳು, ಕಾಡಂಚಿನ 433 ಪ್ರದೇಶಗಳನ್ನು ಗುರುತಿಸಲಾಗಿದೆ.</p>.<p>ಆಶಾ ಕಾರ್ಯಕರ್ತೆಯರು ಫೆಬ್ರುವರಿ, ಮಾರ್ಚ್ನಲ್ಲಿ ಮನೆ ಮನೆ ಸಮೀಕ್ಷೆ ನಡೆದಿದ್ದು, ಅಲ್ಲಿ ಈ ಎಲ್ಲ ಮಾಹಿತಿಗಳನ್ನೂ ಸಂಗ್ರಹಿಸಲಾಗಿದೆ ಎಂದು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಮಧುಸೂದನ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>12 ರೋಗಗಳನ್ನು ಲಸಿಕೆಗಳಿಂದ ತಡೆಗಟ್ಟಬಹುದು</p>.<p>ಬಾಲಕ್ಷಯ, ಹೆಪಾಟೈಟಿಸ್–ಬಿ, ಪೊಲಿಯೊ, 2 ಬಗೆಯ ನ್ಯುಮೊನಿಯಾ, ಡಿಪ್ತಿರಿಯಾ, ನಾಯಿಕೆಮ್ಮು, ದಡಾರ, ರುಬೆಲ್ಲಾ, ಮಿದುಳು ಜ್ವರ, ಅತಿಸಾರ ಭೇದಿ, ಟೆಟಾನಸ್,</p>.<p>ಲಸಿಕೆ ಹಾಕಿಸುವ ಸಮಯ</p>.<p>ಹುಟ್ಟಿದಾಗ, ಒಂದೂವರೆ ತಿಂಗಳಿನಲ್ಲಿ, ಎರಡೂವರೆ, ಮೂರುವರೆ ತಿಂಗಳಿನಲ್ಲಿ, 9–12 ತಿಂಗಳ ಒಳಗೆ, 16–24 ತಿಂಗಳ ಒಳಗಡೆ, 5 ವರ್ಷಕ್ಕೆ, 10 ವರ್ಷಕ್ಕೆ, 15 ವರ್ಷಕ್ಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ವಿಶ್ವ ಲಸಿಕಾ ಸಪ್ತಾಹ ಏ. 24ರಿಂದ ಆರಂಭವಾಗಿದ್ದು, 30ರವರೆಗೂ ನಡೆಯಲಿದೆ. ಈ ಅವಧಿಯಲ್ಲಿ ಲಸಿಕೆಗೆ ಬಾಕಿ ಇರುವ ಮಕ್ಕಳನ್ನು ಗುರುತಿಸಿ, ವಿಶೇಷ ಲಸಿಕಾ ಕಾರ್ಯಕ್ರಮಗಳನ್ನು ಆಯೋಜಿಸಿ, ಲಸಿಕೆ ಹಾಕುವ ಗುರಿ ಹೊಂದಲಾಗಿದೆ.</p>.<p>ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ 7 ದಡಾರ ಹಾಗೂ 2 ರುಬೆಲ್ಲಾ ಪ್ರಕರಣಗಳು ಕಂಡು ಬಂದಿವೆ. ಹಾಗಾಗಿ, ಈ ವರ್ಷ ಹೆಚ್ಚು ನಿಗಾ ವಹಿಸಿ ಲಸಿಕೆ ಹಾಕಲಾಗುತ್ತಿದೆ. ಸದ್ಯ, ಲಸಿಕೆ ಹಾಕುವಿಕೆಯಲ್ಲಿ ಶೇ 99.09ರಷ್ಟು ಪ್ರಗತಿ ಸಾಧಿಸಿರುವ ಕೊಡಗು ಜಿಲ್ಲೆಯು ರಾಜ್ಯದಲ್ಲೇ 4ನೇ ಸ್ಥಾನದಲ್ಲಿದೆ.</p>.<p>ಕೊಡಗು ಜಿಲ್ಲೆಯಲ್ಲಿ ಇನ್ನೂ 234 ಮಕ್ಕಳು ಲಸಿಕೆಗೆ ಬಾಕಿ ಇದ್ದು, ಅವರಿಗೆ ಲಸಿಕೆ ಹಾಕಲು ವಿಶೇಷ ಶಿಬಿರಗಳನ್ನು ಆರೋಗ್ಯ ಇಲಾಖೆ ಆಯೋಜಿಸಿದೆ.</p>.<p>ವಲಸಿಗರು ಇರುವಂತಹ ಪ್ರದೇಶವನ್ನು ಹೈರಿಸ್ಕ್ ಪ್ರದೇಶ ಎಂದು ಗುರುತಿಸಿರುವ ಇಲಾಖೆಯು ಅಲ್ಲಿ 3 ಹೊರ ವಲಯ ಲಸಿಕಾ ಶಿಬಿರ ಮಾಡಲಿದೆ. ಇವುಗಳಲ್ಲಿ ಹೆಚ್ಚಿನವು ಲೈನ್ಮನೆಗಳೇ ಆಗಿವೆ. ಲಸಿಕೆ ಹಾಕಿಸದ ಸ್ಥಳೀಯರು ಇರುವ ಪ್ರದೇಶದಲ್ಲಿ 46 ಕಾರ್ಯಕ್ರಮಗಳನ್ನು ಮಾಡಲು ಉದ್ದೇಶಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವು ಹಾಡಿಗಳು ಹಾಗೂ ಕಾಡಂಚಿನ ಪ್ರದೇಶಗಳೇ ಆಗಿವೆ.ಹೈರಿಸ್ಕ್ ಇಲ್ಲದ ಪ್ರದೇಶದಲ್ಲೂ 5 ಶಿಬಿರ ಆಯೋಜಿಸಲಾಗುತ್ತದೆ. ಪ್ರತಿ ಶಿಬಿರಕ್ಕೆ ಕನಿಷ್ಠ ಮೂವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.</p>.<p>ಜಿಲ್ಲೆಯಲ್ಲಿ ಅಲೆಮಾರಿಗಳಿರುವ ಪ್ರದೇಶ 3, ಕಲ್ಲು ಹೊಡೆಯುವವರು ಇರುವ ಪ್ರದೇಶ 10, ನಿರ್ಮಾಣ ಚಟುವಟಿಕೆಯಲ್ಲಿರುವ ವಲಸಿಗರು ಇರುವ ಪ್ರದೇಶ 10, ಇತರೆ ವಲಸಿಗರು ಇರುವ ಪ್ರದೇಶ–1,185 ಎಂದು ಗುರುತಿಸಲಾಗಿದೆ. ಇತರೆ ವಲಸಿಗರಲ್ಲಿ ಹೆಚ್ಚಿನವರು ಎಸ್ಟೇಟ್ ಕಾರ್ಮಿಕರೇ ಆಗಿದ್ದಾರೆ.</p>.<p>ಇವುಗಳ ಮಧ್ಯೆ 3 ತಿಂಗಳಿಂದ ಆರೋಗ್ಯ ಕಾರ್ಯಕರ್ತರು ಖಾಲಿ ಇರುವ 249 ಪ್ರದೇಶಗಳಿವೆ. ತಲುಪಲು ಕಷ್ಟಕರವಾಗಿರುವ 145 ಪ್ರದೇಶ, ಹಾಗೂ ಹಾಡಿಗಳು, ಕಾಡಂಚಿನ 433 ಪ್ರದೇಶಗಳನ್ನು ಗುರುತಿಸಲಾಗಿದೆ.</p>.<p>ಆಶಾ ಕಾರ್ಯಕರ್ತೆಯರು ಫೆಬ್ರುವರಿ, ಮಾರ್ಚ್ನಲ್ಲಿ ಮನೆ ಮನೆ ಸಮೀಕ್ಷೆ ನಡೆದಿದ್ದು, ಅಲ್ಲಿ ಈ ಎಲ್ಲ ಮಾಹಿತಿಗಳನ್ನೂ ಸಂಗ್ರಹಿಸಲಾಗಿದೆ ಎಂದು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಮಧುಸೂದನ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>12 ರೋಗಗಳನ್ನು ಲಸಿಕೆಗಳಿಂದ ತಡೆಗಟ್ಟಬಹುದು</p>.<p>ಬಾಲಕ್ಷಯ, ಹೆಪಾಟೈಟಿಸ್–ಬಿ, ಪೊಲಿಯೊ, 2 ಬಗೆಯ ನ್ಯುಮೊನಿಯಾ, ಡಿಪ್ತಿರಿಯಾ, ನಾಯಿಕೆಮ್ಮು, ದಡಾರ, ರುಬೆಲ್ಲಾ, ಮಿದುಳು ಜ್ವರ, ಅತಿಸಾರ ಭೇದಿ, ಟೆಟಾನಸ್,</p>.<p>ಲಸಿಕೆ ಹಾಕಿಸುವ ಸಮಯ</p>.<p>ಹುಟ್ಟಿದಾಗ, ಒಂದೂವರೆ ತಿಂಗಳಿನಲ್ಲಿ, ಎರಡೂವರೆ, ಮೂರುವರೆ ತಿಂಗಳಿನಲ್ಲಿ, 9–12 ತಿಂಗಳ ಒಳಗೆ, 16–24 ತಿಂಗಳ ಒಳಗಡೆ, 5 ವರ್ಷಕ್ಕೆ, 10 ವರ್ಷಕ್ಕೆ, 15 ವರ್ಷಕ್ಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>