ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಕೋಲಾರ ಜಿಲ್ಲೆಯ ಐದು ತಾಲ್ಲೂಕಿನಲ್ಲಿ ತೀವ್ರ ಬರ!

Published : 15 ಸೆಪ್ಟೆಂಬರ್ 2023, 6:54 IST
Last Updated : 15 ಸೆಪ್ಟೆಂಬರ್ 2023, 6:54 IST
ಫಾಲೋ ಮಾಡಿ
Comments
ಬರ: ನಿರ್ವಹಣೆಗೆ ಸಿದ್ಧತೆ–ಜಿಲ್ಲಾಧಿಕಾರಿ
‘ಬರ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಸಿದ್ಧವಾಗಿದೆ. ಈ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದೇನೆ’ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ‘ಪ್ರಜಾವಾಣಿ’ಗೆ ತಿಳಿಸಿದರು. ‘ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರು ಸಮಸ್ಯೆ ಇಲ್ಲ. ಇರುವ ಕೊಳವೆ ಬಾವಿಗೆ ಮತ್ತಷ್ಟು ಆಳಕ್ಕೆ ಪೈಪ್‌ ಹಾಕಿ ನೀರು ತೆಗೆಯಬಹುದು. ಪ್ಲಶ್‌ ಮಾಡುವುದು ಅಗತ್ಯವಿದ್ದಲ್ಲಿ ಪಂಪ್‌ ಮೋಟಾರ್‌ ಕಲ್ಪಿಸುತ್ತೇವೆ’ ಎಂದರು. ‘ನಗರ ಪ್ರದೇಶದಲ್ಲಿ 1200 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು 2ಸಾವಿರ ಕೊಳವೆಬಾವಿಗಳು ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ ಕೊಳವೆಬಾವಿ ಕೊರೆಯುವುದಿಲ್ಲ. ಬದಲಾಗಿ ಇರುವ ಕೊಳವೆ ಬಾವಿಗಳನ್ನು ದುರಸ್ತಿ ಮಾಡಿ ಬಳಸಿಕೊಳ್ಳಲಾಗುವುದು’ ಎಂದು ಹೇಳಿದರು. ‘ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ (ಆರ್‌ಒ) ದುರಸ್ತಿ ಮಾಡಿಸಲಾಗುತ್ತಿದೆ’ ಎಂದರು. ‘ಜಾನುವಾರುಗಳಿಗೆ ಸದ್ಯಕ್ಕೆ ಮೇವಿನ ಕೊರತೆ ಇಲ್ಲ. ಈಚೆಗೆ ಮಳೆಯಾಗಿದೆ. ಅಗತ್ಯವಿದ್ದರೆ ಮೇವು ಬೀಜ ನೀಡಲಾಗುವುದು’ ಎಂದು ಹೇಳಿದರು. ‘ಬರದಿಂದ ನಷ್ಟವಾಗಿರುವ ಬೆಳೆ ಸಮೀಕ್ಷೆ ಮಾಡಲಾಗುವುದು. ರೈತರು ಫ್ರೂಟ್ಸ್‌ ಆ್ಯಪ್‌ನಲ್ಲಿ ಡೇಟಾ ಅಪ್ಡೇಟ್‌ ಮಾಡಬೇಕು. ಕೆಲವರು ಎರಡು ಎಕರೆ ಮಾತ್ರ ನಮೂದಿಸಿದ್ದಾರೆ. ಎಷ್ಟು ಇದೆಯೋ ಅಷ್ಟನ್ನೂ ನಮೂದಿಸಬೇಕು. ಆಗ ನಷ್ಟಕ್ಕೆ ಸರಿಯಾಗಿ ಪರಿಹಾರ ಪಡೆಯಲು ಅನುಕೂಲವಾಗುತ್ತದೆ’ ಎಂದರು.
ಮಾಲೂರು ಏಕೆ ತೀವ್ರ ಬರಪೀಡಿತ ತಾಲ್ಲೂಕು ಅಲ್ಲ?
ಮಾಲೂರು ತಾಲ್ಲೂಕಿನಲ್ಲಿ ಬಿತ್ತನೆಗೆ ತೀರಾ ಹಿನ್ನಡೆ ಉಂಟಾಗಿದೆ. ಕೇವಲ ಶೇ 11.44 ಬಿತ್ತನೆ ಆಗಿದೆ. ಉಳಿದ ತಾಲ್ಲೂಕುಗಳಿಗಿಂತ ಮಾಲೂರು ತಾಲ್ಲೂಕಿನಲ್ಲಿ ಕಡಿಮೆ ಆಗಿದೆ. ಜೂನ್‌ 1ರಿಂದ ಸೆಪ್ಟೆಂಬರ್‌ 13ವರೆಗೆ ಶೇ 43ರಷ್ಟು ಮಳೆ ಕೊರತೆ ಉಂಟಾಗಿದೆ. ಆದರೂ ಈ ತಾಲ್ಲೂಕನ್ನು ಸಾಧಾರಣ ಬರ ಪರಿಸ್ಥಿತಿ ತಾಲ್ಲೂಕುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ತಾಲ್ಲೂಕು ತೀವ್ರ ಬರ ಪರಿಸ್ಥಿತಿಗೆ ಬೇಕಾದ ಮಾನದಂಡ ತಲುಪಿಲ್ಲ ಎಂಬುದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT