<p><strong>ಬಂಗಾರಪೇಟೆ</strong>: ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಗ್ರಾಮೀಣ ಭಾಗದಲ್ಲಿನ ರೈತರು ಆದಾಯದ ಮೂಲವಾಗಿ ವೀಳ್ಯದೆಲೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.</p>.<p>ಈ ಭಾಗದ ರೈತರು ಹೈನೋದ್ಯಮ ಮತ್ತು ವೀಳ್ಯದೆಲೆ ಕೃಷಿಯನ್ನೇ ಆದಾಯದ ಮೂಲವಾಗಿ ಮಾಡಿಕೊಂಡಿದ್ದು, ಸುಮಾರು 800 ರಿಂದ 1000 ವೀಳ್ಯದೆಲೆ ತೋಟವನ್ನು ಈ ಹೋಬಳಿಯಲ್ಲಿ ಕಾಣಬಹುದಾಗಿದೆ.</p>.<p>ವೀಳ್ಯದೆಲೆ ಕೃಷಿಗೆ ಅನುಭವ ಮತ್ತು ಕಾರ್ಮಿಕರ ಅವಶ್ಯಕತೆ ಇಲ್ಲದ ಕಾರಣ ಈ ಭಾಗದ ರೈತರನ್ನು ಕೈಹಿಡಿದಿದೆ. ಎಲೆ, ಅಡಿಕೆಗೆ ಎಲ್ಲಾ ಕಾಲಮಾನದಲ್ಲೂ ಬೇಡಿಕೆ ಇದ್ದು, ಉತ್ತಮ ಬೆಲೆಯೂ ಸಿಗುತ್ತದೆ.</p>.<p><strong>ಬಹುಪಯೋಗಿ ವೀಳ್ಯದೆಲೆ:</strong> ಎಲ್ಲಾ ಶುಭ ಕಾರ್ಯಗಳಿಗೆ ವೀಳ್ಯದೆಲೆ ಪ್ರಥಮ ಸ್ಥಾನದಲ್ಲಿದೆ. ಶೀತ, ಅಜೀರ್ಣ ಸಮಸ್ಯೆಗೆ ವೀಳ್ಯದೆಲೆ ಮನೆಮದ್ದು. ಪೂಜೆ, ಆರೋಗ್ಯ ಸೇರಿದಂತೆ ಎಲ್ಲೆಡೆ ವೀಳ್ಯದೆಲೆ ಬಳಸುತ್ತಾರೆ. ಇದು ಜೀರ್ಣಕ್ರಿಯೆಗೆ ಹೆಚ್ಚು ಉಪಯುಕ್ತವಾಗಿದ್ದು, ಊಟದ ಬಳಿಕ ತಾಂಬೂಲವಾಗಿ ಸೇವಿಸುತ್ತಾರೆ.</p>.<p>ವೀಳ್ಯದೆಲೆಯನ್ನು ಸಾಮಾನ್ಯವಾಗಿ ತಿಂಗಳಿಗೆ ಒಂದು ಬಾರಿ ಕಟಾವು ಮಾಡುತ್ತಾರೆ. ಒಂದು ಕಟ್ಟಿಗೆ ನೂರು ಎಲೆ ಇರುತ್ತವೆ. ಗುಣಮಟ್ಟದ ವೀಳ್ಯದೆಲೆ ಪೂರೈಕೆಯಾಗದ ಕಾರಣ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಇದ್ದು, ಒಂದು ಕಟ್ಟಿಗೆ ಸರಾಸರಿ ₹100 ರಿಂದ ₹150ಕ್ಕೆ ಮಾರಾಟವಾಗುತ್ತವೆ.</p>.<p><strong>ಮಾರುಕಟ್ಟೆ ಸಮಸ್ಯೆ</strong>: ಕಾಮಸಮುದ್ರ ಸುತ್ತಮುತ್ತಲಿನ ರೈತರು ವೀಳ್ಯದೆಲೆಯನ್ನು ಕಟಾವು ಮಾಡಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಕಾಮಸಮುದ್ರದ ಮುಖ್ಯರಸ್ತೆಯಲ್ಲಿ ಮುಂಜಾನೆ ತಂದು ಮಧ್ಯವರ್ತಿಗಳಿಗೆ ಮಾರಾಟ ಮಾಡಲಾಗುತ್ತದೆ.</p>.<p><strong>ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ</strong></p><p>ನಮ್ಮ ತೋಟದಲ್ಲಿ ಕನಿಷ್ಠ ತಿಂಗಳಿಗೆ 300 ಕಟ್ಟು ಎಲೆ ದೊರೆಯುತ್ತದೆ. ಯಾವುದೇ ರೀತಿಯ ರಾಸಾಯನಿಕ ಬಳಸದೆ ಕೊಟ್ಟಿಗೆ ಗೊಬ್ಬರ ಬಳಸಿ ಸಾವಯುವ ಕೃಷಿ ಮಾಡುತ್ತೇವೆ. ಹಾಗಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಮತ್ತು ಬೆಲೆ ದೊರೆಯುತ್ತದೆ – ಎಸ್.ಕೆ.ಜಯಣ್ಣ, ವೀಳ್ಯದೆಲೆ ಬೆಳೆಗಾರ</p><p><strong>ಈ ಕೆಲಸದಿಂದ ಕುಟುಂಬ ಪೋಷಣೆ</strong></p><p>ವೀಳ್ಯದೆಲೆ ಕೃಷಿ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಇದ್ದು, ದಿನಕ್ಕೆ ₹600 ನೀಡುತ್ತಾರೆ. ತಿಂಗಳ ಪೂರ್ತಿ ಕೂಲಿ ದೊರೆಯುತ್ತದೆ. ಸುಮಾರು ಹತ್ತು ವರ್ಷಗಳಿಂದ ಕೆಲಸ ಮಾಡಿ ಕುಟುಂಬ ಪೋಷಿಸುತ್ತಿದ್ದೇನೆ – ಮಂಜುನಾಥ ಆರ್.ವಿ., ವೀಳ್ಯದೆಲೆ ಕೃಷಿ ಕಾರ್ಮಿಕ </p><p><strong>ಮಾರುಕಟ್ಟೆ ಪ್ರಾರಂಭಿಸಿ</strong></p><p>ವೀಳ್ಯದೆಲೆ ಬೆಳೆಗಾರರ ಹಿತದೃಷ್ಟಿಯಿಂದ ಈ ಭಾಗದಲ್ಲಿ ವೀಳ್ಯದೆಲೆ ಮಾರುಕಟ್ಟೆ ಪ್ರಾರಂಭಿಸಿ ರೈತರ ಹಿತ ಕಾಪಾಡಬೇಕು – ನಾರಾಯಣ ಗೌಡ, ರಾಜ್ಯ ಉಪಾಧ್ಯಕ್ಷ, ರೈತ ಸಂಘ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪೇಟೆ</strong>: ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಗ್ರಾಮೀಣ ಭಾಗದಲ್ಲಿನ ರೈತರು ಆದಾಯದ ಮೂಲವಾಗಿ ವೀಳ್ಯದೆಲೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.</p>.<p>ಈ ಭಾಗದ ರೈತರು ಹೈನೋದ್ಯಮ ಮತ್ತು ವೀಳ್ಯದೆಲೆ ಕೃಷಿಯನ್ನೇ ಆದಾಯದ ಮೂಲವಾಗಿ ಮಾಡಿಕೊಂಡಿದ್ದು, ಸುಮಾರು 800 ರಿಂದ 1000 ವೀಳ್ಯದೆಲೆ ತೋಟವನ್ನು ಈ ಹೋಬಳಿಯಲ್ಲಿ ಕಾಣಬಹುದಾಗಿದೆ.</p>.<p>ವೀಳ್ಯದೆಲೆ ಕೃಷಿಗೆ ಅನುಭವ ಮತ್ತು ಕಾರ್ಮಿಕರ ಅವಶ್ಯಕತೆ ಇಲ್ಲದ ಕಾರಣ ಈ ಭಾಗದ ರೈತರನ್ನು ಕೈಹಿಡಿದಿದೆ. ಎಲೆ, ಅಡಿಕೆಗೆ ಎಲ್ಲಾ ಕಾಲಮಾನದಲ್ಲೂ ಬೇಡಿಕೆ ಇದ್ದು, ಉತ್ತಮ ಬೆಲೆಯೂ ಸಿಗುತ್ತದೆ.</p>.<p><strong>ಬಹುಪಯೋಗಿ ವೀಳ್ಯದೆಲೆ:</strong> ಎಲ್ಲಾ ಶುಭ ಕಾರ್ಯಗಳಿಗೆ ವೀಳ್ಯದೆಲೆ ಪ್ರಥಮ ಸ್ಥಾನದಲ್ಲಿದೆ. ಶೀತ, ಅಜೀರ್ಣ ಸಮಸ್ಯೆಗೆ ವೀಳ್ಯದೆಲೆ ಮನೆಮದ್ದು. ಪೂಜೆ, ಆರೋಗ್ಯ ಸೇರಿದಂತೆ ಎಲ್ಲೆಡೆ ವೀಳ್ಯದೆಲೆ ಬಳಸುತ್ತಾರೆ. ಇದು ಜೀರ್ಣಕ್ರಿಯೆಗೆ ಹೆಚ್ಚು ಉಪಯುಕ್ತವಾಗಿದ್ದು, ಊಟದ ಬಳಿಕ ತಾಂಬೂಲವಾಗಿ ಸೇವಿಸುತ್ತಾರೆ.</p>.<p>ವೀಳ್ಯದೆಲೆಯನ್ನು ಸಾಮಾನ್ಯವಾಗಿ ತಿಂಗಳಿಗೆ ಒಂದು ಬಾರಿ ಕಟಾವು ಮಾಡುತ್ತಾರೆ. ಒಂದು ಕಟ್ಟಿಗೆ ನೂರು ಎಲೆ ಇರುತ್ತವೆ. ಗುಣಮಟ್ಟದ ವೀಳ್ಯದೆಲೆ ಪೂರೈಕೆಯಾಗದ ಕಾರಣ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಇದ್ದು, ಒಂದು ಕಟ್ಟಿಗೆ ಸರಾಸರಿ ₹100 ರಿಂದ ₹150ಕ್ಕೆ ಮಾರಾಟವಾಗುತ್ತವೆ.</p>.<p><strong>ಮಾರುಕಟ್ಟೆ ಸಮಸ್ಯೆ</strong>: ಕಾಮಸಮುದ್ರ ಸುತ್ತಮುತ್ತಲಿನ ರೈತರು ವೀಳ್ಯದೆಲೆಯನ್ನು ಕಟಾವು ಮಾಡಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಕಾಮಸಮುದ್ರದ ಮುಖ್ಯರಸ್ತೆಯಲ್ಲಿ ಮುಂಜಾನೆ ತಂದು ಮಧ್ಯವರ್ತಿಗಳಿಗೆ ಮಾರಾಟ ಮಾಡಲಾಗುತ್ತದೆ.</p>.<p><strong>ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ</strong></p><p>ನಮ್ಮ ತೋಟದಲ್ಲಿ ಕನಿಷ್ಠ ತಿಂಗಳಿಗೆ 300 ಕಟ್ಟು ಎಲೆ ದೊರೆಯುತ್ತದೆ. ಯಾವುದೇ ರೀತಿಯ ರಾಸಾಯನಿಕ ಬಳಸದೆ ಕೊಟ್ಟಿಗೆ ಗೊಬ್ಬರ ಬಳಸಿ ಸಾವಯುವ ಕೃಷಿ ಮಾಡುತ್ತೇವೆ. ಹಾಗಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಮತ್ತು ಬೆಲೆ ದೊರೆಯುತ್ತದೆ – ಎಸ್.ಕೆ.ಜಯಣ್ಣ, ವೀಳ್ಯದೆಲೆ ಬೆಳೆಗಾರ</p><p><strong>ಈ ಕೆಲಸದಿಂದ ಕುಟುಂಬ ಪೋಷಣೆ</strong></p><p>ವೀಳ್ಯದೆಲೆ ಕೃಷಿ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಇದ್ದು, ದಿನಕ್ಕೆ ₹600 ನೀಡುತ್ತಾರೆ. ತಿಂಗಳ ಪೂರ್ತಿ ಕೂಲಿ ದೊರೆಯುತ್ತದೆ. ಸುಮಾರು ಹತ್ತು ವರ್ಷಗಳಿಂದ ಕೆಲಸ ಮಾಡಿ ಕುಟುಂಬ ಪೋಷಿಸುತ್ತಿದ್ದೇನೆ – ಮಂಜುನಾಥ ಆರ್.ವಿ., ವೀಳ್ಯದೆಲೆ ಕೃಷಿ ಕಾರ್ಮಿಕ </p><p><strong>ಮಾರುಕಟ್ಟೆ ಪ್ರಾರಂಭಿಸಿ</strong></p><p>ವೀಳ್ಯದೆಲೆ ಬೆಳೆಗಾರರ ಹಿತದೃಷ್ಟಿಯಿಂದ ಈ ಭಾಗದಲ್ಲಿ ವೀಳ್ಯದೆಲೆ ಮಾರುಕಟ್ಟೆ ಪ್ರಾರಂಭಿಸಿ ರೈತರ ಹಿತ ಕಾಪಾಡಬೇಕು – ನಾರಾಯಣ ಗೌಡ, ರಾಜ್ಯ ಉಪಾಧ್ಯಕ್ಷ, ರೈತ ಸಂಘ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>